Showing posts with label ನರಹರಿಯೆ ಪಾಲಿಸೊ ಮುನ್ನ ತರಳ ಪ್ರಹ್ಲಾದನಂತೆನ್ನ others. Show all posts
Showing posts with label ನರಹರಿಯೆ ಪಾಲಿಸೊ ಮುನ್ನ ತರಳ ಪ್ರಹ್ಲಾದನಂತೆನ್ನ others. Show all posts

Thursday 1 July 2021

ನರಹರಿಯೆ ಪಾಲಿಸೊ ಮುನ್ನ ತರಳ ಪ್ರಹ್ಲಾದನಂತೆನ್ನ ankita others

 ನರಹರಿಯೆ ಪಾಲಿಸೊ ಮುನ್ನ ।

ತರಳ ಪ್ರಹ್ಲಾದನಂತೆನ್ನ -

ದುರಾಸೆ ಬಿಡಿಸಿ ನಿನ್ನ ।

ಚರಣದಲ್ಲಿ ಮನ ನಿರುತದಿ ನಿಲ್ಲಿಸಿ -

ಕರುಣವ ತೋರೋ  ।। ಪಲ್ಲವಿ ।।


ತರಳತ್ವದಿ ಬಹು -

ದುರುಳತನದಿ ದಿನ ।

ತೆರಳಿತು ಅರಿಯದೆ -

ದೇಹಂಭಾವದಲ್ಲಿ ।। ಚರಣ ।।


ಗುರುಕುಲವಾಸದಿ -

ಸರಿಯಾಗಿರದೆ ।

ಬರಿದೆ ಕಾಲಚರಿಸಿತು -

ಕ್ರೀಡೆಯಲಿ ।। ಚರಣ ।।


ಬರಲು ಯೌವ್ವನವು -

ಪರಸತಿಯಲಿ ಮನ ।

ನಿರುತದಿಂದಿರಸಿ ನಾ -

ಗರುವದಿ ಮೆರೆದೆ ।। ಚರಣ ।।


ಅನುದಿನದಲಿ ನ-

ವನವ ವಿಷಯದಿ ।

ಮನ ಕುಣಿ ಕುಣಿದು -

ಓಡುವುದಯ್ಯ ಹರಿಯೆ ।। ಚರಣ ।।


ಶ್ರೀ ನರಹರಿಯೆ -

ಇನಿತು ಘಾಸಿಸುವುದು ।

ಘನತೆಯೆ ನಿನಗಿದು -

ವನಜ ಕುವರನಯ್ಯ ।। ಚರಣ ।।

****