Showing posts with label ತಿರುನಲ್ವೇಲಿಲಿ ಮೆರೆವ ಗುರು ವಿಬುಧೇಂದ್ರರ ಚರಣ ವಾರಿಜ ಸ್ತುತಿಪೆ lakumeesha vibudhendra teertha stutih. Show all posts
Showing posts with label ತಿರುನಲ್ವೇಲಿಲಿ ಮೆರೆವ ಗುರು ವಿಬುಧೇಂದ್ರರ ಚರಣ ವಾರಿಜ ಸ್ತುತಿಪೆ lakumeesha vibudhendra teertha stutih. Show all posts

Saturday 1 May 2021

ತಿರುನಲ್ವೇಲಿಲಿ ಮೆರೆವ ಗುರು ವಿಬುಧೇಂದ್ರರ ಚರಣ ವಾರಿಜ ಸ್ತುತಿಪೆ ankita lakumeesha vibudhendra teertha stutih

 vibudhendra teertha rayara mutt yati stutih

ರಾಗ : ಭೈರವಿ   ತಾಳ : ರೂಪಕ 

ತಿರುನಲ್ವೇಲಿಲಿ ಮೆರೆವ ।

ಗುರು  ವಿಬುಧೇಂದ್ರರ ।

ಚರಣ ವಾರಿಜ ಸ್ತುತಿಪೆ ।। ಪಲ್ಲವಿ ।।


ವರ ಅಹೋಬಲ ಹರಿಯು ಸ್ವಪ್ನದಿ ।

ದೊರೆಯುವೆ ನಿಮಗೆ ಪರಮ ತೀರ್ಥರೆನೆ ।

ನರಹರಿ ಹದಿನಾರು ಭುಜದಲಿ ।

ತ್ವರ ಸುತೀರ್ಥದಿ ಬರಲಿಗೊಂಡಂಥ ।। ಅ ಪ ।।

ರಘುನಾಥ ಭಟ್ಟರೆನಿಸಿ ಪೂರ್ವದಿ ।

ಸುಗುಣ ಪಂಡಿತರೆನಿಸೆ ।

ಜಗದ ಬುಧರಿಂದ ಮಾನ್ಯರೆನಿಸಿದ ।।

ನಗೆ ಮುಖ ರಾಮಚಂದ್ರೆತಿ ।

ಮಿಗೆ ಸುಸಂಸ್ಕಾರದಿ ಯತಿಯಗೈಯ್ಯೆ ।

ನಿಗಮ ಶಾಸ್ತ್ರದ ಪಥದಿ ನಡೆದಂಥ ।। ಚರಣ ।।


ಆದಿ ಶ್ರೀಪಾದರಾಜರಿಗೆ ಶ್ರೀ ವ್ಯಾಸರಾಜರಿಗೂ ।

ಮೋದದಿ ವಿದ್ಯಾ ಬೋಧಕರು ।

ವಾದದಿ ದುರ್ವಾದಿಗಳ ಗೆದ್ದು ।।

ಸಾಧಿಸಿ ಜಯ ಪತ್ರ ಪ್ರತಿದಿನ ।

ಮಾದೇವಿ ನರಹರಿಗೆ ಅರ್ಪಿಸಿ ।

ಭೇದಮತ ಧ್ವಜ ಎತ್ತಿ ಮೆರೆದಂಥ ।। ಚರಣ ।।

ಐವತ್ತೈದು ವರ್ಷ 

ಶ್ರೀವೇದಾಂತ ರಾಜ್ಯವಾಳಿ ।

ಕೋವಿದರನು ಪೋಷಿಸಿ ।

ಭಾವ ಶುದ್ಧಿಲಿ ಲಯವ ಚಿಂತಿಸಿ - ।।

ಶ್ರೀಶ ಲಕುಮೀಶನಂಘ್ರಿಯ ।

ತೋಷದಿಂದಲಿ ಒಲಿಸಿ । ಮಾರ್ಗಶಿ ।

ರ ಶುದ್ಧ ದಶಮಿ 

ವೃಂದಾವನ ಸೇರ್ದ ।। ಚರಣ ।।

****