Showing posts with label ಆನೆ ಬರುತ್ತಿದಿಕೋ ವ್ಯಾಸರಾಜರೆಂಬಾನೆ ಬರುತ್ತಿದಿಕೋ hayavadana vyasarajara stutih. Show all posts
Showing posts with label ಆನೆ ಬರುತ್ತಿದಿಕೋ ವ್ಯಾಸರಾಜರೆಂಬಾನೆ ಬರುತ್ತಿದಿಕೋ hayavadana vyasarajara stutih. Show all posts

Monday 29 March 2021

ಆನೆ ಬರುತ್ತಿದಿಕೋ ವ್ಯಾಸರಾಜರೆಂಬಾನೆ ಬರುತ್ತಿದಿಕೋ ankita hayavadana vyasarajara stutih

 ವಾದಿರಾಜರು ಕಂಡ ವ್ಯಾಸರಾಜರ ವೈಭವ 


ಆನೆ ಬರುತ್ತಿದಿಕೋ – ವ್ಯಾಸರಾಜರೆಂ-

ಬಾನೆ ಬರುತ್ತಿದಿಕೋ |


ಮದವೇರಿ ಹದಮೀರಿ ಮದನಾರಿ ತಾನೆಂಬ

ಅಧಮರ ಎದೆಮೆಟ್ಟಿ ಸೀಳಲು   | ಅ.ಪ |


ಮರುತಮತ ನಿರಂತರ ಚರಣದ ಧೂಳಿ

ಕರದಲಿ ಪಿಡಿದು ಶಿರದ ಮೇಲೆ ಚೆಲ್ಲುತ | ೧ |


ಇದ್ದು ಜಗವಿಲ್ಲೆಂಬ ಶುದ್ಧಮೂರ್ಖತೆಯುಳ್ಳ

ಅದ್ವೈತಿಗಳ ಬುದ್ದಿಮಡುವನ್ನೆ ಕಲಕುತ್ತ | ೨ |


ಜಗಕೆ ಕರ್ತ ನಾನೆಂದು ಬೊಗಳಿಕೊಂಬುವ ನಾ-

ಯಿಗಳ ಕರದಲಿ ಪಿಡಿದು ಮೊಗದ ಮೇಲುಗುಳುತ್ತ | ೩ |


ಮಧ್ವಮುನೀಂದ್ರರ ಶುದ್ಧತೀರ್ಥದಿ ಮಿಂದು

ತಿದ್ದಿದ ನಾಮ ಶ್ರೀಮುದ್ರೆ ಶೃಂಗಾರದಿ | ೪ |


ಮುರಿಯಲು ದುರಳನ ಗರುವವನೆ ಮುನ್ನ

ಸಿರಿಹಯವದನನ ಅರಮನೆ ಪಟ್ಟದ | ೫ |

***

ಆನೆ ಬರುತ್ತಿದಿಕೋ – ವ್ಯಾಸರಾಜರೆಂ-

ಬಾನೆ ಬರುತ್ತಿದಿಕೋ |


ಮದವೇರಿ ಹದಮೀರಿ ಮದನಾರಿ ತಾನೆಂಬ

ಅಧಮರ ಎದೆಮೆಟ್ಟಿ ಸೀಳಲು   | ಅ.ಪ |


ಮರುತಮತ ನಿರಂತರ ಚರಣದ ಧೂಳಿ

ಕರದಲಿ ಪಿಡಿದು ಶಿರದ ಮೇಲೆ ಚೆಲ್ಲುತ | ೧ |


ಇದ್ದು ಜಗವಿಲ್ಲೆಂಬ ಶುದ್ಧಮೂರ್ಖತೆಯುಳ್ಳ

ಅದ್ವೈತಿಗಳ ಬುದ್ದಿಮಡುವನ್ನೆ ಕಲಕುತ್ತ | ೨ |


ಜಗಕೆ ಕರ್ತ ನಾನೆಂದು ಬೊಗಳಿಕೊಂಬುವ ನಾ-

ಯಿಗಳ ಕರದಲಿ ಪಿಡಿದು ಮೊಗದ ಮೇಲುಗುಳುತ್ತ | ೩ |


ಮಧ್ವಮುನೀಂದ್ರರ ಶುದ್ಧತೀರ್ಥದಿ ಮಿಂದು

ತಿದ್ದಿದ ನಾಮ ಶ್ರೀಮುದ್ರೆ ಶೃಂಗಾರದಿ | ೪ |


ಮುರಿಯಲು ದುರಳನ ಗರುವವನೆ ಮುನ್ನ

ಸಿರಿಹಯವದನನ ಅರಮನೆ ಪಟ್ಟದ | ೫ |

****