Showing posts with label ವಿಜಯೀಂದ್ರರ ಪಾಡಿರೊ ಸುಜನರೆಲ್ಲರೂ ಮುದದಿ venkatanatha vijayeendra teertha stutih. Show all posts
Showing posts with label ವಿಜಯೀಂದ್ರರ ಪಾಡಿರೊ ಸುಜನರೆಲ್ಲರೂ ಮುದದಿ venkatanatha vijayeendra teertha stutih. Show all posts

Thursday 1 July 2021

ವಿಜಯೀಂದ್ರರ ಪಾಡಿರೊ ಸುಜನರೆಲ್ಲರೂ ಮುದದಿ ankita venkatanatha vijayeendra teertha stutih

 ಆಚಾರ್ಯ ನಾಗರಾಜು ಹಾವೇರಿ......

ವಿಜಯೀ೦ದ್ರರ ಪಾಡಿರೊ ।

ಸುಜನರೆಲ್ಲರೂ ಮುದದಿ ।

ವಿಜಯೀ೦ದ್ರರ ಪಾಡಲು ।

ವಿಜಯ ಸಖ ಒಲಿವಾ ।। ಪಲ್ಲವಿ ।।


ವಿಬುಧೇಂದ್ರರೇ ವಿಠಲಾರ್ಯರು ।

ವಿಬುಧಮಣಿ ವಿಠಲಾರ್ಯರೇ -

ವಿಜಯೀದ್ರರು ।। ಅ ಪ ।।


ಗುರು ಸುರೇಂದ್ರರು ಕೇಳೇ ।

ಗುರು ವ್ಯಾಸಮುನಿಯು ಕೊಡೆ ।

ಗುರು ವಿಜಯೀ೦ದ್ರನಾಗಿ ।

ಗುರು ಸುಧೀಂದ್ರ ಪಿತನಾಗಿ -

ಮೆರೆದ ।। ಚರಣ ।।


ಚಾತುರ್ಯದಿ ಅಪ್ಪಯ್ಯನ ಜಯಿಸಿ ।

ಚತುರೋತ್ತರ ಶತ ಗ್ರಂಥ ವಿರಚಿಸಿ ।

ಚತುರಾಸ್ಯನುತನಿಗೆ ಮುದದಿ ಅರ್ಪಿಸಿ ।

ಚತುರಕುಲಜನಿಗೆ ಪ್ರಿಯರಾದ ।। ಚರಣ ।।


ವಿಜಯೀ೦ದ್ರತೀರ್ಥ ಶುಭತಮ ನಾಮವಿತ್ತರು ।

ವಿಜಯ ಶೀಲರಾದ ಸುರೇಂದ್ರರು ।

ನಿಜ ತತ್ತ್ವ ಸಿದ್ಧಾಂತ ಸ್ಥಾಪಿಸಿ ದುರ್ಮತ ।

ದುರ್ಜನ ದುರ್ವಾದ ಚೂರ್ಣ ಮಾಡಿದರು ।। ಚರಣ ।।


ವಿಜಯ ಸಖ ಮೂಲರಾಮೋSಭಿನ್ನ । 

ಅಜನ ಪಿತ ವೇಂಕಟನಾಥನ -

ಆರಾಧಕರು ।। ಚರಣ ।।

***