Showing posts with label ಕರೆತಾರೆಲೆ ರಂಗನ ಶ್ರೀಹರಿಯ ನೀ ಕರೆತಾರೆಲೆ ರಂಗನ shree krishna KARETAARELE RANGANA SRIHARIYA NEE KARETAARELE. Show all posts
Showing posts with label ಕರೆತಾರೆಲೆ ರಂಗನ ಶ್ರೀಹರಿಯ ನೀ ಕರೆತಾರೆಲೆ ರಂಗನ shree krishna KARETAARELE RANGANA SRIHARIYA NEE KARETAARELE. Show all posts

Saturday 11 December 2021

ಕರೆತಾರೆಲೆ ರಂಗನ ಶ್ರೀಹರಿಯ ನೀ ಕರೆತಾರೆಲೆ ರಂಗನ ankita shree krishna KARETAARELE RANGANA SRIHARIYA NEE KARETAARELE



ಕರೆತಾರೆಲೆ ರಂಗನ ಶ್ರೀಹರಿಯ ನೀ

ಕರೆತಾರೆಲೆ ರಂಗನ ಪ


ಕರೆದು ತಾರೆಲೆ ಕಮಲನಾಭನ

ಕರೆದು ತಾರೆಲೆ ಕರುಣನಿಧಿಯನು

ಕರೆದು ತಾ ಕಾಲಲ್ಲಿ ಗಂಗೆಯ

ಸುರಿದ ಬಾಲ ಬ್ರಹ್ಮಚಾರಿಯ ಅ.ಪ


ಮಧು ಕೈಟಭಾಸುರರ ಸಂಹರಿಸಿದ,

ಮತ್ಸ್ಯಾವತಾರನನು

ಮುದದಿ ಮಂದರಗಿರಿಯನೆತ್ತಿದ

ಸುರರಿಗಮೃತವನಿತ್ತ ಕೂರ್ಮನ

ಧರೆಯನುದ್ಧರಿಸಿದ ವರಾಹನ

ತರುಣಿ ನೀನೀಗ ತಂದು ತೋರೆಲೆ 1


ಬಾಲನಿಗೊಲಿದವನ,

ಭಕ್ತ ನಿಧಿಯಾದ ನರಸಿಂಹನ

ಧರೆಯ ನೀರಡಿ ಅಳೆದ ವಾಮನ

ದೊರೆಯ ನಾನಿನ್ನೆಂದು ಕಾಂಬೆನೆ

ಭರದಿ ಭಾರ್ಗವನಾದ ರಾಮನ

ತರುಣಿ ತ್ವರಿತದಿ ತಂದು ತೋರೆಲೆ2


ದಶಶಿರ ನಳಿದವನ ಗೋಕುಲದಲ್ಲಿ,

ದಧಿಘೃತ ಮೆದ್ದವನ

ದುರುಳ ತ್ರಿಪುರರ ಗೆಲಿದ ಬೌದ್ಧನ

ಹರುಷದಲಿ ಹುಯವೇರಿ ಮೆರೆದನ

ಸುಜನ ರಕ್ಷಕನಾದ ಕೃಷ್ಣನ

ಸುದತಿ ನೀನೀಗ ತಂದು ತೋರೆಲೆ 3

***