Showing posts with label ಇಂದಿನ ದಿನ ಸುದಿನವಾಯಿತು ಇಂದಿರೇಶ ಮೂಲರಾಮ purandara vittala surendra teertha stutih. Show all posts
Showing posts with label ಇಂದಿನ ದಿನ ಸುದಿನವಾಯಿತು ಇಂದಿರೇಶ ಮೂಲರಾಮ purandara vittala surendra teertha stutih. Show all posts

Saturday, 1 May 2021

ಇಂದಿನ ದಿನ ಸುದಿನವಾಯಿತು ಇಂದಿರೇಶ ಮೂಲರಾಮ purandara vittala surendra teertha stutih

 surendra teertha rayara mutt yati stutih


ಇಂದಿನ ದಿನ ಸುದಿನವಾಯಿತು ll ಪ ll


ಇಂದಿರೇಶ ಮೂಲರಾಮಚಂದ್ರನ ಪದಕಮಲಗಳ ಸು-

ರೇಂದ್ರತೀರ್ಥಮುನಿಯು ತೋರಲು ll ಅ ಪ ll


ಈತನ ಪದಕಮಲಗಳ ವಿಧಾತ ತನ್ನ ಭವನದೊಳಗೆ l

ಸೀತೆಯ ಸಹ ಪೂಜಿಸಿ ಇಕ್ಷ್ವಾಕು ನೃಪಗಿತ್ತನು ll

ಆತನನ್ವಯ ನೃಪರೆಲ್ಲರು ಪ್ರೀತಿಯಿಂದಲಿ ಭಜಿಸಿ ರಘು- l

ನಾಥ ವೇದಗರ್ಭಗಿತ್ತ ಮೂರ್ತಿಯ ಪದಕಮಲ ಕಂಡೆ ll 1 ll


ಗಜಪತಿ ಭಾಂಡಾರದಲ್ಲಿ ಅಜಕರಕಮಲಾರ್ಚಿತ ಭೂ - l

ಮಿಜೆ ಸಹಿತದಿ ರಾಮನಿರಲು ನಿಜಜ್ಞಾನದಿ ತಿಳಿದು ಬೇಗ ll

ದ್ವಿಜವರಗುರುವೆನಿಸುತಿಪ್ಪ ಸುಜನವಂದಿತ ನರಹರಿಮುನಿ l

ರಜನಿಯಲ್ಲಿ ತಂದ ಸುಲೋಹಮಯ ಪ್ರತಿಮೆಯನೆ ಕಂಡು ll 2 ll


ಅಂದವುಳ್ಳ ಮೂಲರಾಮಚಂದ್ರನ ಪದಕಮಲಗಳನು l

ವೃಂದಾರಕವೃಂದ ವಂದ್ಯನೆಂದೆನಿಸುವ ಪವನನಾ ll

ನಂದನಗುರು ಶ್ರೀಮದಾನಂದತೀರ್ಥರರ್ಚಿಸಿ ನಿಜ l

ಅಂದದನ್ವಯದೊಳಿಟ್ಟ ಪುರಂದರವಿಟ್ಠಲನ ಕಂಡು ll 3 ll

***

ರಾಗ : ಬಿಲಹರಿ ತಾಳ : ಝಂಪೆ


ಇಂದಿನ ದಿನ ಸುದಿನವಾಯಿತು ।

ಇಂದಿರೇಶ ಮೂಲರಾಮ-

ಚಂದ್ರನ ಪದ ಕಮಲಗಳು । ಸು ।

ರೇಂದ್ರತೀರ್ಥ ತೋರಿಸೆ ।। ಪಲ್ಲವಿ ।।


ಈತನ ಪದ ಕಮಲಗಳ । ವಿ ।

ಧಾತ ತನ್ನ ಸದನದೊಳಗೆ ।

ಸೀತೆಯ ಸಹ ಪೂಜಿಸೆ । ನರ ।

ನಾಥ ಇಕ್ಷ್ವಾಕುನಿಗೆಯಿತ್ತ ।।

ಆತನನುಸರಿದ ನೃಪರು ।ಪ್

ರೀತಿಯಿಂದಲರ್ಚಿಸಿ । ರಘು ।

ನಾಥ ವೇದಗರ್ಭಗಿತ್ತ ।

ನಾಥನ ಮೂರ್ತಿಯನು ಕಂಡು ।। ಚರಣ ।।


ಗಜಪತಿಯ ಭಂಡಾರದಲಿ ।

ಅಜನು ಪೂಜಿತನಾಗಿ । ಭೂ ।

ಮಿಜೆ ಸಹಿತ ಶ್ರೀರಾಮ ನಿರಲು ।

ನಿಜ ಜ್ಞಾನದಿಂದ ತಿಳಿದಾಗಾ ।।

ಸುಜನ ಗುರುವೆಂದೆನಿಸುವ ನಮ್ಮ ।

ಭಜಕ ಪಾಲಕ ನರಹರಿ ಮುನಿಪ ।

ಈ ಜಗವರಿಯ ಶ್ರೀ । ಅಂ ।

ಬುಜಲೋಚನ ಮೂರುತಿಯ ಕಂಡು ।। ಚರಣ ।।


ಅಂದವುಳ್ಳ ಮೂಲರಾಮ ।

ಚಂದ್ರನ ಪದಯುಗಳನು ।

ವೃಂದಾರ ಕೇಂದ್ರವೆನಿಸುವಾ ।

ನಂದತೀರ್ಥ ಮುನಿಗಳಾ ।।

ನಂದದಿಂದಲರ್ಚಿಸಿ ನಮ್ಮನು ।

ಹೊಂದಿದ ಶಿಷ್ಯರ ಕರದ । ದಯ ।

ದಿಂದ ನಿಜಾನ್ವಯದೊಳಿಟ್ಟ । ಪು ।

ರಂದರವಿಠ್ಠಲನ ಸುರೇಂದ್ರ ಮುನಿಪ ।

ತಂದು ತೋರಲು ।। ಚರಣ ।।

****