Showing posts with label ಕೂಗಿದರು ಧ್ವನಿ ಕೇಳದೆ ಶಿರ ಬಾಗಿದರು ದಯಬಾರದೆ shreekara vittala KOOGIDARU DHWANI KELADE SHIRA BAAGIDARU DAYABAARADE. Show all posts
Showing posts with label ಕೂಗಿದರು ಧ್ವನಿ ಕೇಳದೆ ಶಿರ ಬಾಗಿದರು ದಯಬಾರದೆ shreekara vittala KOOGIDARU DHWANI KELADE SHIRA BAAGIDARU DAYABAARADE. Show all posts

Sunday 5 December 2021

ಕೂಗಿದರು ಧ್ವನಿ ಕೇಳದೆ ಶಿರ ಬಾಗಿದರು ದಯಬಾರದೆ ankita shreekara vittala KOOGIDARU DHWANI KELADE SHIRA BAAGIDARU DAYABAARADE

 


ankita ಶ್ರೀಕರವಿಠಲ  


ಕೂಗಿದರು ಧ್ವನಿ ಕೇಳದೆ ಶಿರ

ಬಾಗಿದರು ದಯಬಾರದೆ ಗುರುವೆ


ಯೋಗಿವರ್ಯ ಕೃಪಾಸಾಗರ ನಿನ್ನಯ

ಆಗಮವೆಂದಿಗೆ ಆಗುವುದೊ ಪ್ರಭುವೆ ಅ.ಪ


ಸುಂದರ ವೃಂದಾವನ ಮಂದಿರ ಘನ್ನ

ಮುಂದಾರಿಗಾಣದೆ ಪೊಂದಿದೆ ದ್ವಂದ್ವಚರಣ

ಒಂದುದಿನವಾದರೂ ಬಂದು ನೀ ಸ್ವಪ್ನದಿ

ಸಂದರುಶನವನು ಕರುಣಿಸು ತವಕದಿ 1

ಶರಣರಸುರತರು ನೀನಲ್ಲವೆ ಖರೆ

ಕರಿಕರಿಗಾರದೆ(?) ಇಡುವೆ ನಿನಗೆ ಮೊರೆ

ಮೊರೆಹೊಕ್ಕವರಿಗೆ ಮರೆಯಾಗುವರೆ

ಸರಿಯೆ ನಿನಗಿದು ಗುರುಪರಿಮಳಾರ್ಯ 2

ನಾ ಕೈಸೋತವ ವಾಕುಲಾಲಿಸೊ ಎನ್ನ

ನೀ ಕೈ ಪಿಡಿದು ಬಂದು ಸಾಕದಿದ್ದರೆ ಎನ್ನ

ನಾಕಾಧಿಪನುತ ಶ್ರೀಕರವಿಠಲನು

ತಾ ಕರಪಿಡಿಯನು ಪುಸಿಯಲ್ಲ ಎನ್ನಾಣೆ 3

***


ರಾಗ: ಅಠಾಣ/ಧನಶ್ರಿ ತಾಳ: ಆದಿ/ತ್ರಿವಿಡ (raga tala may differ in audio)