Showing posts with label ನೋಡಿರಿ ರಾಘವೇಂದ್ರರ ಮಾಡಿರಿ ನಮಸ್ಕಾರ bheemesha krishna NODIRI RAGHAVENDRARA MAADIRI NAMASKARA. Show all posts
Showing posts with label ನೋಡಿರಿ ರಾಘವೇಂದ್ರರ ಮಾಡಿರಿ ನಮಸ್ಕಾರ bheemesha krishna NODIRI RAGHAVENDRARA MAADIRI NAMASKARA. Show all posts

Tuesday 5 October 2021

ನೋಡಿರಿ ರಾಘವೇಂದ್ರರ ಮಾಡಿರಿ ನಮಸ್ಕಾರ ankita bheemesha krishna NODIRI RAGHAVENDRARA MAADIRI NAMASKARA

 


ನೋಡಿರಿ ರಾಘವೇಂದ್ರರ ಮಾಡಿರಿ ನಮಸ್ಕಾರ

ಬೇಡಿದ ಇಷ್ಟ ವರ ನೀಡುವರು ನಮ್ಮ ಯತಿವರ ಪ


ಮಂತ್ರಾಲಯದಿ ನಿಂತಿಹ ಚಿಂತೆಗಳ ಪರಿಹರಿಸುವ

ಕಂತುಪಿತನನಂತಗುಣ ತನ್ನಂತರಂಗದಿ ಸ್ತುತಿಸುವ

ಇಂಥ ಯತಿಗಳ ಕಾಣೆ ಹರಿಯೇಕಾಂತ ಭಕ್ತರೆನಿಸಿಕೊಂಡು

ಮಂತ್ರಾಕ್ಷತೆ ಫಲ ನೀಡಿ ತಾ ಸಂತಾನ ಸಂಪತ್ತು ಕೊಡುವರ 1


ಭೂತ ಪ್ರೇತ ಭಯಗಳ ವಾತ ಪಿತ್ತ ವ್ಯಾಧಿಗಳ

ಸೇತು (ಶ್ವೇತ?) ಕುಷ್ಠರೋಗಗಳ ಪಾತಕಿಯರ ಪಾಪಗಳ

ಪ್ರೀತಿಲಿಂದ ಕಳೆವರೊ ಪ್ರಖ್ಯಾತರಾಗಿ ಬೆಳೆವರೊ

ಭೂತಳದಿ ಸನ್ನೀತ (ಸನ್ನಿಹಿತ?) ರಾದ ಸೀತಾಪತಿ ನಿಜದೂತರೆನಿಸೋರು 2


ಭಜಸÉ ಭಕ್ತರ ನೋಡುವ ಸದನಕೆ ಬಂದುಕೂಡುವ

ಒದಗಿದಾಪತ್ತು ದೂಡುವ ಬಂದು ಮುದದಿ ತಾ ದಯಮಾಡುವ

ಅಜನಯ್ಯನ ಕೊಂಡಾಡುತ ತುಂಗಾನದಿಯ ತೀರ ವಾಸವಾಗಿ

ಹೃದಯದೊಳು ಭೀಮೇಶ ಕೃಷ್ಣನ ಪದವ ಭಜಿಸಿ ಪಡೆವರಾನಂದವ3

***


" ಭೀಮವ್ವನವರ ಕಣ್ಣಲ್ಲಿ ಶ್ರೀ ಮಂತ್ರಾಲಯ ಪ್ರಭುಗಳು "


ನೋಡಿರಿ ರಾಘವೇಂದ್ರರ ।

ಮಾಡಿರಿ ನಮಸ್ಕಾರ ।

ಬೇಡಿದ ಇಷ್ಟಾವರ ।

ನೀಡುವ ನಮ್ಮ ಯತಿವರ ।। ಪಲ್ಲವಿ ।।


ಮಂತ್ರಾಲಯದಿ ನಿಂತಿಹ ।

ಚಿಂತೆಗಳ ಪರಿಹರಿಸುವ ।

ಕಂತುಪಿತನನಂತ ಗುಣ । ತ ।

ನ್ನಂತರಂಗದಿ ಸ್ತುತಿಸುವ ।।

ಇಂಥಾ ಯತಿಗಳ ಕಾಣೆ । ಹರಿಯೇ ।

ಕಾಂತ ಭಕ್ತರೆನಿಸಿಕೊಂಬುವ ।

ಮಂತ್ರಾಕ್ಷತೆ ಫಲ ನೀಡಿ ।

ಸಂತಾನ ಸಂಪತ್ತು 

ಕೊಡುವರ ।। ಚರಣ ।।


ಭೂತ ಪ್ರೇತ ಭಯಗಳ ।

ವಾತ ಪಿತ್ತ ವ್ಯಾಧಿಗಳ ।

ಸೇತು ಕುಷ್ಟ ರೋಗಗಳ ।

ಪಾತಕಿಯರ ಪಾಪಗಳ ।।

ಪ್ರೀತಿಲಿಂದ ಕಳೆವರೋ ।

ಪ್ರಖ್ಯಾತರಾಗಿ ಬೆಳೆವರೋ ।

ಭೂತಳದಿ ಸನ್ನಿಹಿತರಾದ ।

ಸೀತಾಪತಿ ನಿಜಮಾತ-

ರೆನಿಸೋರೋ ।। ಚರಣ ।।


ಭಜಿಸೆ ಭಕ್ತರ ನೋಡುವ ।

ಸದನಕೆ ಬಂದು ಕೂಡುವ ।

ಒದಗಿದಾಪತ್ತು ದೂಡುವ ।

ಮುದದಿ ತಾ ದಯ ಮಾಡುವಾ ।।

ಅಜನನಯ್ಯನ ಕೊಂಡಾಡುತ ।

ತುಂಗಾ ನದಿಯ ತೀರ ವಾಸವಾಗಿ ।

ಹೃದಯದೊಳು ಭೀಮೇಶಕೃಷ್ಣನ ।

ಪದವ ಭಜಿಸಿ ಪಡೆವರಾನಂದವ ।। ಚರಣ ।।

***


ನೋಡಿರಿ ರಾಘವೇಂದ್ರರ ಮಾಡಿರಿ ನಮಸ್ಕಾರ


ಬೇಡಿದ ಇಷ್ಟವರ ನೀಡುವರು ನಮ್ಮ ಯತಿವರ ||ಪ||


ಮಂತ್ರಾಲಯದಲಿ ನಿಂತಿಹ ಚಿಂತೆಗಳ ಪರಿಹರಿಸುವ


ಕಂತುಪಿತನನಂತಗುಣ ತನ್ನಂತರಂಗದಿ ಸ್ತುತಿಸುವ


ಇಂಥಾ ಯತಿಗಳ ಕಾಣೆ ಹರಿಯೇಕಾಂತ ಭಕ್ತರೆನಿಸಿಕೊಂಬುವ


ಮಂತ್ರಾಕ್ಷತೆ ಫಲ ನೀಡಿ ತಾ ಸಂತಾನ ಸಂಪತ್ತು ಕೊಡುವರ || 1 ||


ಭೂತ ಪ್ರೇತ ಭಯಗಳ ವಾತಪಿತ್ತ ವ್ಯಾಧಿಗಳ


ಶ್ವೇತ ಕುಷ್ಠ ರೋಗಗಳ ಪಾತಕಿಯರ ಪಾಪಗಳ


ಪ್ರೀತಿಯಿಂದ ಕಳೆವರ ಪ್ರಖ್ಯಾತರಾಗಿ ಬೆಳೆವರ


ಭೂತಳದಿ ಸನ್ನಿಹಿತರಾಗಿ ಸೀತಾಪತಿ ನಿಜ ದಾಸರೆನಿಪರ || 2 ||


ಭಜಿಸೆ ಭಕ್ತರ ನೋಡುವ ಸದನಕೆ ಬಂದು ಕೂಡುವ


ಒದಗಿದಾಪತ್ತು ದೂಡುವ ಮುದದಿ ತಾ ದಯಮಾಡುವ


ಅಜನಯ್ಯನ ಕೊಂಡಾಡುತ ತುಂಗಾನದಿಯ ತೀರ ವಾಸವಾಗಿ


ಹೃದಯದೊಳು ಭೀಮೇಶಕೃಷ್ಣನ ಪದವ ಭಜಿಸಿ ಪಡೆವರಾನಂದವ || 3 ||

***


nODiri rAghavEMdrara mADiri namaskAra

bEDida iShTavara nIDuvaru namma yativara ||pa||


maMtrAlayadali niMtiha, ciMtegaLa pariharisuva

kaMtupitananaMtaguNa tannaMtaraMgadi stutisuva

iMthA yatigaLa kANe hariyEkAMta bhaktarenisikoMbuva

maMtrAkShate phala nIDi Ta saMtAna saMpattu koDuvara || 1 ||


bhUtaprEta bhayagaLa vAtapitta vyAdhigaLa

SvEta kuShTha rOgagaLa pAtakiyara pApagaLa

prItiliMda kaLevaro prakhyAtarAgi beLevaro

bhUtaLadi sannihitarAda sItApati nija Dararenipara || 2 ||


bhajise bhaktara nODuva sadanake baMdu kUDuva

odagidApattu dUDuva mudadi tA dayamADuva

ajanayyana koMDADuta tuMgAnadiyatIra vAsavAgi

hRudayadoLu bhImESakRuShNana padava bhajisi

paDevarAnaMdava || 3 ||

***