Showing posts with label ಕೇಶವನೊಲುಮೆಯು ಆಗುವತನಕ ಹರಿದಾಸರೊಳಿರು ಮನವೆ vaikunta vittala. Show all posts
Showing posts with label ಕೇಶವನೊಲುಮೆಯು ಆಗುವತನಕ ಹರಿದಾಸರೊಳಿರು ಮನವೆ vaikunta vittala. Show all posts

Sunday 1 August 2021

ಕೇಶವನೊಲುಮೆಯು ಆಗುವತನಕ ಹರಿದಾಸರೊಳಿರು ಮನವೆ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಕೇಶವನೊಲುಮೆಯು ಆಗುವತನಕ ಹರಿ

ದಾಸರೊಳಿರು ಮನವೆ

ಆಶೆಪಾಶಂಗಳು ಬಿಟ್ಟು ವಿಲಾಸದಿ

ದಾಸರ ಸ್ತುತಿಯನು ಪೊಗಳುತ ಮನದೊಳು ಪ


ಮೋಸದಿ ಪ್ರಾಣಿಹಿಂಸೆಯನು ಮಾಡಿದ ಫಲ

ಕಾಶಿಗೆ ಪೋದರೆ ಪೋದೀತೆ

ದಾಸರು ಕರೆದು ಕಾಸುಕೊಟ್ಟ ಫಲ

ಲೇಸಾಗದೆ ಸುಮ್ಮನಿದ್ದೀತೆ

ಆಸೆಕೊಟ್ಟು ನಿರಾಸೆ ಮಾಡಿದ ಫಲ

ಮೋಸವ ಮಾಡದೆ ಬಿಟ್ಟೀತೆ

ದಶಶಿರನನುಜನು ಹರಿಯ ಒಲಿಸಿಕೊಂಡದ್ದು

ನಿಜವಲ್ಲದೆ ಪುಸಿಯಾದೀತೆ 1


ಕನಕದ ಪಾತ್ರೆ ಘನಪ್ರಭೆಯೊಳಿರೆ

ಸೊಣಕನ ಮನಸಿಗೆ ಸೊಗಸೀತೆ

ಹೀನ ಮನುಜಗೆ ಜ್ಞಾನವ ಬೋಧಿಸೆ

ಹೀನ ವಿಷಯಗಳು ಬಿಟ್ಟೀತೆ

ಮಾನಿನಿ ಮನಸು ನಿಧಾನವಿಲ್ಲದಿರೆ

ಮಾನಾಭಿಮಾನವು ಉಳಿದೀತೆ

ಭಾನುಕೋಟಿ ಪ್ರಕಾಶನ ಭಜಿಸದ

ದೀನಗೆ ಮುಕ್ತಿಯು ದೊರಕೀತೆ 2


ಶ್ರುತ್ಯಾರ್ಥಗಳು ನಿತ್ಯದಿ ಪೇಳಲು

ಕತ್ತೆಯ ಮನಸಿಗೆ ಬಂದೀತೆ

ಸ್ಮøತ್ಯಾರ್ಥಂಗಳು ನಿತ್ಯದಿ ಬೋಧಿಸೆ

ತೊತ್ತಿನ ಮನಸಿಗೆ ಬಂದೀತೆ

ಕಸ್ತುರಿ ಫಣೆಯಲಿ ಬತ್ತಿ ತಿಲಕವಿಡೆ

ಅರ್ಥ ತೊರೆಯದೇ ಬಿಟ್ಟೀತೆ

ಚಿತ್ರದಿ ಬೊಂಬೆ ವಿಚಿತ್ರದಿ ಬರೆದಿತ್ತ

ಮುತ್ತು ಕೊಟ್ಟರೆ ಮಾತಾಡೀತೆ 3


ನ್ಯಾಯವ ಬಿಟ್ಟು ಅನ್ಯಾಯವ ಪೇಳ್ದವ

ನಾಯಾಗಿ ಹುಟ್ಟೋದು ಬಿಟ್ಟೀತೆ

ತಾಯಿ ತಂದೆಯ ನೋಯಿಸಿದ

ಮಾಯಾವಾದಿಗೆ ಮುಕುತಿಯು ದೊರಕೀತೆ

ಬಾಯಿಬೊಬ್ಬಿಲಿ ಬೊಗಳುವ ಮನುಜಗೆ

ಘಾಯವಾಗದೆ ಬಿಟ್ಟೀತೆ

ಛಾಯಮಾಯವಾ ಕಲಿತಾ ಮನುಜಗೆ

ಕಾಯಕ ಕಷ್ಟ ಬಿಡದಿದ್ದೀತೆ 4


ಸಾಧು ಸಜ್ಜನರ ನಿಂದಿಸಿದ ದು

ರ್ವಾದಿಗೆ ಮುಕುತಿಯು ದೊರಕೀತೆ

[ಶುದ್ಧರಾಗಿ]ಭಜಿಸಿ ಬರುವರನನರ್ಥವ

ಗೈದವಗೆ ವ್ಯಾಧಿ ಕಾಡದೆ ಬಿಟ್ಟೀತೆ

ಕ್ಷುಧ್ರಮನುಜ ಬಹು ಕ್ಷುಧ್ರವ ನುಡಿಯಲು

ಬುದ್ಧಿಹೀನನೆಂಬೋದು ಬಿಟ್ಟೀತೆ

ಕದ್ದು ಒಡಲಹೊರುವ ಮನುಜಗೆ

ಇದ್ದದ್ದೋಗದೆ ಉಳಿದೀತೆ 5


ಅಂಗವಿಷಯಗಳು ಹಿಂಗಿದ ಮನುಜಗೆ

ಅಂಗನೆಯರ ಬಯಸೀತೆ

ಸಂಗಸುಖಗಳು ಹಿಂಗದ ಮನುಜಗೆ

ಶೃಂಗಾರದ ಬಗೆ ತೋರೀತೆ

ಮಂಗಳ ಮಹಿಮನ ಪದಾಂಘ್ರಿಯ ಭಜಿಸದ

ಭೃಂಗಗೆ ಮುಕ್ತಿಯು ದೊರಕೀತೆ 6


ಕರುಣಾನನಾಭರಣ ಧರಿಸಿದ ಪರಮಗೆ ಸರಳೆದುರಾದೀತೆ

ಕರುಣಾನನ ಸ್ಮರಣೆವುಳ್ಳರಿಗೆ ಪರಮ ಪದವಿ ಆಗದಿದ್ದೀತೆ

ವರದ ವೇಲಾಪುರಿ ವೈಕುಂಠ ಕೇಶವನ

ಚರಣ ಸೇವಕನಾಗಿ ಇರು ಕಂಡ್ಯ ಮನವೆ 7

***