Showing posts with label ಪಾಲಿಸೆಮ್ಮನು ತ್ರಿಜಗ ಪಾಲಿಸುವನೆ ಎಲ್ಲ ಸುಖವನಿತ್ತು ಉದಧಿ ankita narahari. Show all posts
Showing posts with label ಪಾಲಿಸೆಮ್ಮನು ತ್ರಿಜಗ ಪಾಲಿಸುವನೆ ಎಲ್ಲ ಸುಖವನಿತ್ತು ಉದಧಿ ankita narahari. Show all posts

Thursday 1 July 2021

ಪಾಲಿಸೆಮ್ಮನು ತ್ರಿಜಗ ಪಾಲಿಸುವನೆ ಎಲ್ಲ ಸುಖವನಿತ್ತು ಉದಧಿ ankita narahari P

 ..

kruti by pradyumna teertha ಪ್ರದ್ಯುಮ್ನತೀರ್ಥರು


ಪಾಲಿಸೆಮ್ಮನು ತ್ರಿಜಗ ಪಾಲಿಸುವನೆ ।

ಎಲ್ಲ ಸುಖವನಿತ್ತು ಉದಧಿ

ಆಲಯ ಶರಣ್ಯ ವಿಟ್ಠಲ ।। ಪಲ್ಲವಿ ।।


ಹೃದಯಕಮಲ ಮಧ್ಯದಲಿ ।

ಮುದದಿ ಖಗವನೇರಿ ಚರಿಪ

ಯದುಕುಲಾಬ್ಧಿ ಜಾತ ಚಂದ್ರ ।

ವಿಧಿಶಿವಾದಿ ಉಡುಗಣಾರ್ಚಿತ ।। ಚರಣ


ದಿಟ್ಟಭಕ್ತ ಕೊಟ್ಟ ಇಟ್ಟಗೀ ।

ಮೆಟ್ಟಿನಿಂತಿ ಸಿಟ್ಟು ಇಲ್ಲದೆ ।

ಹೊಟ್ಟೆ ಮನೆಯ ಮಾಡಿಕೊಟ್ಟಿ ।

ಕೆಟ್ಟಮಾತು ನುಡಿದ ಚೈದ್ಯಗೆ ।। ಚರಣ ।।


ಕರಗಳನ್ನೆ ಕಟಿಯಲಿಟ್ಟು ।

ಶರಣುಬಂದ ಭಕ್ತಗೆ ಭವ ।

ಪರಿಮಿತಿಯ ತೋರಿ ನಿರುತ ।

ಪೊರೆಯುವಂಥ ಕರುಣನಿಧಿಯೇ  ।। ಚರಣ ।।


ಪುಂಡರೀಕ ವರದನೆಂದು ।

ಹಿಂಡುಭಕ್ತರು ಪೊಗಳುತಿಹರೊ ।

ಅಂಡಜಧ್ವಜ ನಿನ್ನ ಪಾದ ।

ಪುಂಡರೀಕ ತೋರಿಸಿನ್ನು  ।। ಚರಣ ।।


ಶ್ರೀ ನರಹರಿಯೆ ನಿನ್ನ ।

ಗಾನ ಮಾಡಲೆಷ್ಟು ಸಾಮ ।

ಗಾನಕೆ ನಿಲುಕದ ಮಹಿಮ ।

ಜ್ಞಾನ ಭಕ್ತಿ ಇತ್ತು ಬೇಗ ।। ಚರಣ ।।

****


ಪಾಲಿಸೆಮ್ಮನು ತ್ರಿಜಗ ಪಾಲಿಸುವನೆ ಎಲ್ಲ ಸುಖವನಿತ್ತು ಉದಧಿ

ಆಲಯ ಶರಣ್ಯ ವಿಟ್ಠಲ ಪ


ಹೃದಯಕಮಲ ಮಧ್ಯದಲಿ ಮುದದಿ ಖಗವನೇರಿ ಚರಿಪ

ಯದುಕುಲಾಬ್ಧಿ ಜಾತ ಚಂದ್ರ ವಿಧಿಶಿವಾದಿ ಉಡುಗಣಾರ್ಚಿತ 1


ದಿಟ್ಟಭಕ್ತ ಕೊಟ್ಟ ಇಟ್ಟಗೀ ಮೆಟ್ಟಿನಿಂತಿ ಸಿಟ್ಟು ಇಲ್ಲದೆ

ಹೊಟ್ಟೆ ಮನೆಯ ಮಾಡಿಕೊಟ್ಟಿ ಕೆಟ್ಟಮಾತು ನುಡಿದ ಚೈದ್ಯಗೆ 2


ಕರಗಳನ್ನೆ ಕಟಿಯಲಿಟ್ಟು ಶರಣುಬಂದ ಭಕ್ತಗೆ ಭವ

ಪರಿಮಿತಿಯ ತೋರಿ ನಿರುತ ಪೊರೆಯುವಂಥ ಕರುಣನಿಧಿಯೇ 3

ಪುಂಡರೀಕ ವರದನೆಂದು ಹಿಂಡುಭಕ್ತರು ಪೊಗಳುತಿಹರೊ

ಅಂಡಜಧ್ವಜ ನಿನ್ನಪಾದ ಪುಂಡರೀಕ ತೋರಿಸಿನ್ನು 4


ಶ್ರೀ ನರಹರಿಯೆ ನಿನ್ನ ಗಾನ ಮಾಡಲೆಷ್ಟು ಸಾಮ

ಗಾನಕೆ ನಿಲುಕದ ಮಹಿಮ ಜ್ಞಾನ ಭಕ್ತಿ ಇತ್ತು ಬೇಗ 5

***

ಶ್ರೀ ಲಕ್ಷ್ಮೀಪ್ರಿಯ ತೀರ್ಥರು " ಶ್ರೀ ಪ್ರದ್ಯುಮ್ನತೀರ್ಥ " ರೆಂದು ನಾಮಕರಣ ಮಾಡಿ, ಪ್ರಣವೋಪದೇಶ ನೀಡಿ " ಪ್ರಜ್ಞಾಪೀಠ " ವೆಂಬ ಹೆಸರಿನಿಂದ ಸಂಸ್ಥಾನವನ್ನು ಸ್ಥಾಪಿಸಿ ನಿರಂತರ ನಡೆಯುವಂತೆ ಮಾಡಿರಿ " ಯೆಂದು ಆದೇಶ ಕೊಟ್ಟರು.