Showing posts with label ಇಭರಾಮಪುರದಲಿ ಇಪ್ಪಾ ನಮ್ಮ ಅಘಗಳ madhwesha krishna appavara stutih. Show all posts
Showing posts with label ಇಭರಾಮಪುರದಲಿ ಇಪ್ಪಾ ನಮ್ಮ ಅಘಗಳ madhwesha krishna appavara stutih. Show all posts

Thursday 12 August 2021

ಇಭರಾಮಪುರದಲಿ ಇಪ್ಪಾ ನಮ್ಮ ಅಘಗಳ ankita madhwesha krishna appavara stutih

 appavara stutih

ಇಭರಾಮಪುರದಲಿ ಇಪ್ಪಾ ನಮ್ಮ ಅಘಗಳ ಕಳೆಯುತಲಿಪ್ಪಾ

ರಾಘವೇಂದ್ರರ ದಯ ಪೊಂದಿಪ್ಪಾ ನಮ್ಮ ಇಭರಾಮಪುರದ

ಕ್ರಿಷ್ಟಪ್ಪಾ||ಪಲ್ಲ||


 ಭೂತ ಪ್ರೇತಗಳ ತರಿದು ಅಲ್ಲಿ

ನೀತಿಮಾರ್ಗವನ ಅರಿದು

ಖ್ಯಾತರಾಗಿಹರಿವರು

ಶ್ರೀನಾಥನ ಅನುಗ್ರಹ ಬಲದಿ||೧||


 ಮೈಸೂರು ಅರಮನೆ ಸೇರಿ ಅಲ್ಲಿ

 ಮೃತ್ತಿಕ ಬೃಂದಾವನವಾ

ಭಕ್ತಿಲಿ ಸ್ಥಾಪನೆ ಮಾಡಿ ಮತ್ತು

ಭೂತೋಚ್ಚಾಟನೆ ಮಾಡಿ||೨||


 ಈಶಾನ್ಯ ಮೂಲೆಯ ಅಗಿಸೀ ಅಲ್ಲಿ

ವಾಯುದೇವನ ಮೇಲ್ತರಿಸಿ

ಸಾಸಿರನಾಮನ ದಯದಿ ಇನ್ನು

 ದೇಶ ಸಂಚಾರವ ಮಾಡಿ||೩||


 ಅಗಣಿತ ಮಹಿಮರು ಇವರು ಇನ್ನು

ಬಗೆಬಗೆಯಲಿ ಬರುವವರು

 ಯುಗಳ ಪಾದಗಳ ಬೇಡೆ 

ಮಿಗಿಲಾದ ವರ ಕೊಡುವವರು||೪||


 ಅಂಗಾರ ಅಕ್ಷ ತೆ ನೀಡಿ

ಭವ ಬಂಧಗಳನೆ ಕಳೆಯುವರು

ಗಂಧ ಸುವಾಸನೆ ಬೀರಿ

ಪರಿಮಳಾರ್ಯರೆಂದು ಹೆಸರಾಗಿ||೫||


 ಶೇಷಾವತಾರದಿ ಇವರು

ಶೇಷಾವೇಶದಿ ಬರುವವರು

ದೋಷದೂರ ಮಾಡುವರು

 ಆದಿ ಶೇಷನ ಒಲಿಸಿದರಿವರು||೬||


 ಶರಣ ಜನರನೆ ಪೊರೆವ

ಗುಣ ವರುಣಿಸಲಸದಳವಲ್ಲ

ನಿರುತ ಧ್ಯಾನಿಪ ಜನರ

ಪರಮನುಗ್ರಹ ಮಾಡುವರೆಲ್ಲ||೭||


 ಮಹಿಮೆ ತಿಳಿಯದೆ ಜನರು 

ನಿಂದ್ಯ ಮಾಡಿದರೆ ಅವರು

 ಅಹಿಯಾಗವತರಿಸಿ ಹಿಂದೆ

ನಿಜರೂಪವ ತೋರುವರು||೮||


 ಸ್ವರ್ಣ ತುಲಸಿ ಮಾಲಾ ಮುಕ್ತ

ಹಾರ ಭೂಷಿತರಿವರು

ಶರಣು ಬೇಡಿ ಮಧ್ವೇಶಕೃಷ್ಣಗೆ

ಬೇಡುವರಿವರು||೯||

~~ಮಧ್ವೇಶಕೃಷ್ಣ.

***