Showing posts with label ಏಕೆ ಕಡೆಗಣ್ಣಿಂದ ನೋಡುವೆ ಕೃಷ್ಣ ನೀ ಕರುಣಾ purandara vittala EKE KADEGANNINDA NODUVE KRISHNA NEE KARUNA. Show all posts
Showing posts with label ಏಕೆ ಕಡೆಗಣ್ಣಿಂದ ನೋಡುವೆ ಕೃಷ್ಣ ನೀ ಕರುಣಾ purandara vittala EKE KADEGANNINDA NODUVE KRISHNA NEE KARUNA. Show all posts

Sunday 31 October 2021

ಏಕೆ ಕಡೆಗಣ್ಣಿಂದ ನೋಡುವೆ ಕೃಷ್ಣ ನೀ ಕರುಣಾ purandara vittala EKE KADEGANNINDA NODUVE KRISHNA NEE KARUNA



ಏಕೆ ಕಡೆಗಣ್ಣಿಂದ ನೋಡುವೆ - ಕೃಷ್ಣ |
ನೀ ಕರುಣಾಕರನಲ್ಲವೆ ? ಪ

ಭಕ್ತ ವತ್ಸಲ ನೀನಲ್ಲವೆ -ಕೃಷ್ಣ |
ಚಿತ್ಸುಖದಾತ ನೀನಲ್ಲವೆ ? ||
ಅತ್ಯಂತ ಅಪರಾಧಿ ನಾನಾದಡೇನಯ್ಯ|
ಇತ್ತಿತ್ತ ಬಾ ಎನ್ನಬಾರದೆ ರಂಗ 1

ಇಂದಿರೆಯರಸ ನೀನಲ್ಲವೆ - 
ಬಹುಸೌಂದರ್ಯನಿಧಿ ನೀನಲ್ಲವೆ ? ||
ಮಂದಮತಿ ನಾನಾದಡೇನು ಕೃಪಾ-
ಸಿಂಧುನೀ ರಕ್ಷಿಸಬಾರದೆ ರಂಗ2

ದೋಷಿಯು ನಾನಾದಡೇನಯ್ಯ - ಸರ್ವ -
ದೋಷರಹಿತ ನೀನಲ್ಲವೆ ? ||
ಗಾಸಿಯೇತಕೆ ನಿನ್ನ ನಂಬಿದೆ ಸಲಹಯ್ಯ |
ಶೇಷಶಾಯಿ ಶ್ರೀಪುರಂದರವಿಠಲ3
****