Showing posts with label ಸರಿಯುಗಾಣೆನೆಲ್ಲಿ ಜಗಲೊಳು ಕರವ ಮುಗಿಪರಘವ ತೆಗೆವ ಗುರು mohana vittala. Show all posts
Showing posts with label ಸರಿಯುಗಾಣೆನೆಲ್ಲಿ ಜಗಲೊಳು ಕರವ ಮುಗಿಪರಘವ ತೆಗೆವ ಗುರು mohana vittala. Show all posts

Sunday 1 August 2021

ಸರಿಯುಗಾಣೆನೆಲ್ಲಿ ಜಗಲೊಳು ಕರವ ಮುಗಿಪರಘವ ತೆಗೆವ ಗುರು ankita mohana vittala

 ..

ಸರಿಯುಗಾಣೆನೆಲ್ಲಿ ಜಗಲೊಳು ಕರವ ಮುಗಿಪರಘವ ತೆಗೆವ ಗುರು ವಿಜಯದಾಸರಿಗಿನ್ನು ಪ


ಭೇದವಿಲ್ಲಯೆಂಬ ಮಾಯವಾದಿ ರಾಮಶಾಸ್ತ್ರಿ ಬಂದುಪಾದಕೆರಗೆ ಅವನ ತಮವ ಛೇದಿಸಿ ಸುಜ್ಞಾನವಿತ್ತೆ 1

ವಾದಿಗಿರಿಗೆ ಇಂದ್ರಸ್ಥಾನೀಯರಾದ ಗುರುಗಳಿಂದ ಮು-ದ್ರಾಧಾರಣಿಯ ಕೊಡಿಸಿ ಪರಮ ಆದರದಿಂದ ಅವನ ಕಾಯ್ದೆ2

ಭಸುಮವನ್ನೆ ತೆಗಸಿ ಅವನ ನೊಸಲಲೂಧ್ರ್ವ ತಿಲಕ ಪಚ್ಚಿಸಿಎಸವ ಪಂಚಮುದ್ರಿ ದ್ವಾದಶ ನಾಮ ಧರಿಪಂತೆ ಮಾಡಿದೆ 3

ಶ್ರೀ ಮನೋಹರ ಒಡೆಯ ವಿರಂಚಿಯ್ಯೋಮಕೇಶ ಸುರರು ಆತನತಾಮರಸ ಪದ ಧೂಳಿಗಯೆಂದು ಈ ಮರಿಯಾದಿಗಳ ಪೇಳಿದೆ 4

ಧರೆಯೊಳಿದ್ದ ಭಕ್ತ ಜನರ ಪೊರೆವನೆಂಬ ಬಿರಿದು ವೊಹಿಸಿಸಿರಿ ಮೋಹನ್ನ ವಿಠಲನಂಘ್ರಿ ಸರಸಿರುಹವ ಎನಗೆ ತೊರ್ದೆ 5

***