Showing posts with label ಶ್ರೀನಿವಾಸ ಗುರು ಗುಣಾಧೀಶ ಪಾಲಿಸೊ ಭಕ್ತರ ತೋಷ ನಾ ನಿನ್ನ ದಾಸ mohana vittala. Show all posts
Showing posts with label ಶ್ರೀನಿವಾಸ ಗುರು ಗುಣಾಧೀಶ ಪಾಲಿಸೊ ಭಕ್ತರ ತೋಷ ನಾ ನಿನ್ನ ದಾಸ mohana vittala. Show all posts

Sunday 1 August 2021

ಶ್ರೀನಿವಾಸ ಗುರು ಗುಣಾಧೀಶ ಪಾಲಿಸೊ ಭಕ್ತರ ತೋಷ ನಾ ನಿನ್ನ ದಾಸ ankita mohana vittala

..

ತಿರುಪತಿ ದಿಗ್ಗಾವಿ ಶ್ರೀನಿವಾಚಾರ್ಯರ ಸ್ತೋತ್ರ


ಶ್ರೀನಿವಾಸ ಗುರು ಗುಣಾಧೀಶ | ಪಾಲಿಸೊ ಭಕ್ತರ ತೋಷ ನಾ ನಿನ್ನ ದಾಸ ಪ


ಏನಾದರು ಎನ್ನ ಹೀನತೆ ಎಣಿಸದೇಸಾನುರಾಗದಿ ನಿನ್ನ ಅಧೀನದೊಳಗಿರುವುದು ಅ.ಪ.


ನಾನು ನನ್ನದು ಎಂಬುದು ಬಿಡಿಸಿ | ಸುಜ್ಞಾನವ ಕೊಡಿಸಿ ಸು-ಜ್ಞಾನವಂತರ ಸಂಗದೊಳಿರಿಸಿ | ಸನ್ಮಾನದಿ ನೀ ಇಡಿಸಿ ಮಾನಸದೊಳು ಅನುಮಾನವಿಲ್ಲದೇ ನಿನ್ನ ಧ್ಯಾನವ ಕೊಡುವುದು ಉದಾಸೀನ ಮಾಡದೆ ನಿತ್ಯ 1

ಅಗ್ನಿಹೋತ್ರವ ನಡೆಸುವ ತೆರದಿ | ಆಗ್ಯನ್ನನು ಮುದದಿಸುಜ್ಞಾನಿ ನೀನೇ ಕರಗಳ ಪಿಡಿದೀ | ಅಜ್ಞಾನವ ಬಿಡಿಸೀವಿಘ್ನವಗೊಳಿಸದೆ ಸರ್ವಜ್ಞ ಪಾದದೀಮಗ್ನನ ಮಾಡು ಪ್ರಾಜ್ಞ ಶಿರೋಮಣಿ2

ನಿನ್ನ ನಂಬಿದ ಪಾಮರ ನಾನು | ಪಾವನ್ನ ನೀನುಎನ್ನ ಗುಣ ದೋಷಗಳನ್ನು | ಮನ್ನಿಸುವಾದೇನು ಅನ್ನಂತ ಪಾಪಿ ನಾನು ನೀನಾದರೊ ದಯವನ್ನು ಮಾಡುನಿನ್ನ ಪೊಂದಿದೆ ಮಹಾನುಭಾವ 3

ಹರಿದಾಸನು ಎನಿಸಿದ ಬಳಿಕ ಎನ್ನ |ಗುರು ಶಿರೋರನ್ನ ||ಪರಮ ಪಾತಕಿ ನಾನಾದರೂ ನಿನ್ನಚರಣಕ್ಕೆ ಸುತ್ತಿದ ಬಿರಿದು ಬಿಡುವುದುಂಟೇ4

ಅನ್ಯರಿಗಾನು ಎರಗುವನಲ್ಲ | ನೀ ಬಲ್ಲಿ ಎಲ್ಲಮನ್ನಿಸಿ ದಯದಿ ಎನ್ನಯ ಸೊಲ್ಲ ಶಿರಿ ಲ-ಕ್ಷ್ಮೀ ನಲ್ಲ ಎನ್ನ ಪಿಡಿಯೊ ಮೋ-ಹನ್ನ ವಿಠಲನ್ನ ತೋರಿ ಪಾವನನೆನಿಸುವುದು 5

***