Showing posts with label ಬೇಡಲೇತಕೆ ಪರರ ದೇಹಿಯೆಂದು jagannatha vittala. Show all posts
Showing posts with label ಬೇಡಲೇತಕೆ ಪರರ ದೇಹಿಯೆಂದು jagannatha vittala. Show all posts

Saturday 14 December 2019

ಬೇಡಲೇತಕೆ ಪರರ ದೇಹಿಯೆಂದು ankita jagannatha vittala

by ಜಗನ್ನಾಥದಾಸರು
ರಾಗ - ಕಾಂಬೋಧಿ (ಭೂಪ್ ) ಝಂಪೆತಾಳ

ಬೇಡಲೇತಕೆ ಪರರ ದೇಹಿಯೆಂದು ||ಪ||
ನೀಡುವ ದೊರೆ ನಮಗೆ ನೀನಿರಲು ಸರ್ವದಾ ||ಅ.ಪ||

ಗ್ರಾಸವನು ಬೇಡೆ ದೂರ್ವಾಸ ಮುನಿಗನ್ನನಾ-
ಯಾಸದಿಂ ತತ್ಕಾಲದಲಿ ಕಲ್ಪಿಸಿ
ಆ ಸಂಯಮಿಗೆ ಉಣಿಸಿ ದಣಿಸಿದ ಮಹಾದಾತ
ದಾಶರಥೆ ನಿನ್ನ ಬಿಟ್ಟನ್ಯದೇವತೆಗಳನು ||೧||

ಖೂಳ ದುಶ್ಶಾಸನನು ದ್ರೌಪದಿಯ ಸಭೆಯೊಳು ದು-
ಕೂಲವನು ಸೆಳೆಯೆ ದ್ವಾರಕಾಮಂದಿರ
ಶ್ರೀಲೋಲ ಶ್ರೀಕೃಷ್ಣ ಕರುಣಿಸು ಕರುಣಿಸೆನೆ
ಪಾಂಚಾಲಿ ಮೊರೆ ಕೇಳಿ ದಿವ್ಯಾಂಬರನಿಚಯವಿತ್ತೆ ||೨||

ಮಡದಿ ಕಳುಹಲು ಬಂದ ಬ್ರಾಹ್ಮಣನ ಪೀಡಿಸುವ
ಬಡತನವ ಕಳೆದೆ ಒಪ್ಪಿಡಿ ಅವಲಿಗೆ
ಪೊಡವಿಯನ್ನಾಳಿದೆ ಕ್ರಿಮಿಗೊಲಿದು , ಕರುಣದಲಿ
ಜಡಜಸಂಭವ ಮೃಡಬಿಡೌಜರೀಪ್ಸಿತ ಕೊಡುತೆ ||೩||

ತಾಪಸೋತ್ತಮ ಮೃಕಂಡಾತ್ಮಜಗೆ ಕಲ್ಪಾಯು
ನೀ ಪೂರ್ತಿ ಮಾಡಿ ಅಲ್ಪಾಯು ಕಳೆದೆ
ಆ ಪರ್ವತೇಶ್ವರನ ಪಟ್ಟಣವ ಸಾರ್ದ ಸಾಂ-
ದೀಪತನಯನ ತಂದ ಸರ್ವಾಂತರ್ಯಾಮಿ ||೪||

ಕಲ್ಪಕಲ್ಪಗಳಲ್ಲಿ ವಿಶ್ವಜೀವರಿಗನ್ನ-
ಕಲ್ಪಕನು ನೀನಿರಲು ಭ್ರಾಂತಿಯಿಂದ
ಅಲ್ಪ ಮಾನವರಿಗಾಲ್ಪರಿದರೇನಹುದು ಅಹಿ-
ತಲ್ಪ ಜಗನ್ನಾಥವಿಠ್ಠಲ ಕಲ್ಪತರುವಿರಲು ||೫||
***

pallavi

bEDa bEDa lEtake parara dEhi endu

anupallavi

nIDuve dore namage nIniralu sarvadA

caraNam 1

grAsavanu bEDe durvAsa muni gannanAyAasadim tatkAladali kalpisi
A sayyamige uNisi daNisida mahAdAta dAsharathE ninna biTTanya dEvategaLanu

caraNam 2

khULa dusshAsananu draupaidiya sabheyoLu dukUlavanu saLeya dvArakAmandira
shrI lOla shrI krSNa karuNisu karuNisene pAncAli more kELI divyAmabara nicayavittE

caraNam 3

maDadi kaLuhalu banda brAhmaNana piDisuva baDatanava kaLede oppiDa avalige
poDaviyennALiside krimigolidu karuNadali jaDa sambhava mrga biDau jaripsita koDutE

caraNam 4

tApasOttama mrkaNDAtma jage kalpAyu nI pUri mADi alpAyu kaLede
A parvatEshvarana paTTaNava sArdha sAndIpa tanayana tanda sarvAntaryAmi

caraNam 5

kalp kalpagaLalli vishva jIvariganna kalpakanu nIniralu bhrAntiyinda
alpa mAnavarigAlparEnahudu ahitalpa jagannAtha viThaLa kalpataru viravu
***

ಬೇಡಲೇತಕೆ ಪರರ ದೇಹಿಯೆಂದು ಪ

ನೀಡುವಾ ಧೊರೆ ಎನಗೆ ನೀನಿರಲು ಸರ್ವದಾ ಅ.ಪ.

ಗ್ರಾಸವನು ಬೇಡೆ ದೂರ್ವಾಸ ಮುನಿಗಂದನ್ನ ಅನಾ
ಯಾಸದಿಂ ತತ್ಕಾಲದಲಿ ಕಲ್ಪಿಸಿ
ಆ ಸಂಯಮಿಗೆ ಉಣಿಸಿ ದಣಿಸಿದ ಮಹಾ ದಾತಾ
ದಾಶರಥೆ ನಿನ್ನ ಬಿಟ್ಟನ್ಯ ದೇವತೆಗಳನು 1

ಖಳ ದುಶ್ಯಾಸನನು ದ್ರೌಪದಿಯ ಸಭೆಯೊಳು ದು
ಕೂಲವನು ಸೆಳೆಯೆ ದ್ವಾರಕ ಮಂದಿರಾ
ಶ್ರೀ ಲೋಲ ಶ್ರೀ ಕೃಷ್ಣ ಕರುಣಿಸು ಕರುಣಿಸೆನೆ ಪಾಂ
ಚಾಲಿ ಮೊರೆ ಕೇಳಿ ದಿವ್ಯಾಂಬರ ನಿಚಯವಿತ್ತೆ 2

ಮಡದಿ ಕಳುಹಲು ಬಂದ ಬ್ರಾಹ್ಮಣನ ಪೀಡಿಸುವ
ಬಡತನವ ಕಳೆದೆ ಒಪ್ಪಿಡಿಯವಲಿಗೆ
ಪೊಡವಿಯನ್ನಾಳಿಸಿದೆ ಕ್ರಿಮಿಗೊಲಿದು ಕಾರುಣ್ಯದಲ್ಲಿ
ಮೃಡ ಬಿಡೌಜರೀಪ್ಸಿತ ಕೊಡುವೆ 3

ತಾಪಸೋತ್ತಮ ಮೃಕಂಡಾತೃಜಗೆ ಕಲ್ಪಾಯು
ನೀ ಪೂರ್ತಿ ಮಾಡಿ ಅಲ್ಪಾಯು ಕಳೆದು
ಆ ಪರ್ವತೇಶ್ವರನ ಪಟ್ಟಣವ ಸಾರ್ದು ಸಾಂ
ದೀಪ ತನಯನ ತಂದ ಸರ್ವಾಂತರ್ಯಾಮಿ 4

ವಿಶ್ವ ಜೀವರಿಗನ್ನ
ಕಲ್ಪಕನೆ ನೀನಿರಲು e್ಞÁನ ದ್ರವ್ಯ
ಅಲ್ಪ ಮಾನವರಿಗಾಲ್ಪರಿರೇನಹುದು ಅಹಿ
ತಲ್ಪ ಜಗನ್ನಾಥ ವಿಠ್ಠಲ ಕಲ್ಪತರುವಿರಲು 5
*******