Showing posts with label ಭಕುತಿ ಪೂರ್ವಕವಾಗಿ ಬಿಡದಲೆ ಸಕಲಕ್ಷೇತ್ರವ ಚಲಿಸಿದಾ shyamasundara. Show all posts
Showing posts with label ಭಕುತಿ ಪೂರ್ವಕವಾಗಿ ಬಿಡದಲೆ ಸಕಲಕ್ಷೇತ್ರವ ಚಲಿಸಿದಾ shyamasundara. Show all posts

Wednesday 1 September 2021

ಭಕುತಿ ಪೂರ್ವಕವಾಗಿ ಬಿಡದಲೆ ಸಕಲಕ್ಷೇತ್ರವ ಚಲಿಸಿದಾ ankita shyamasundara

 ..


ವಿಜಯರಾಯರ ಪಾದವ ನೀ

ಭಜಿಸಿ ಬದುಕೆಲೊ ಮಾನವ ಪ


ವೃಜಿನವೆಲ್ಲವ ಕಳೆದು ಕರುಣದಿ |

ಅಜನನಯ್ಯನ ತೋರುವ ಅ.ಪ.


ಜಗಕೆ ಹರಿ ಪರನೆಂದು ತಾ ಭುಜ

ಯುಗಗಳೆತ್ತಿ ಸಾರಿದಾ ||

ಭೃಗು ಮುನಿ ಇವರೆಂದು ಭಾವಿಸಿ

ಮಿಗೆ ಸುಭಕ್ತಿಲಿ ಸರ್ವದಾ 1


ವರಹಜಾ ತಟದಲ್ಲಿ ಚೀಕಲ |

ಪರವಿಗ್ರಾಮದಿ ಜನಿಸಿದ ||

ಪರಿಪರಿಯಲನುಭವಿಸಿ ಬಡತನ

..

ಜರಿದು ಭವ ವೈರಾಗ್ಯ ಧರಿಸಿದ 2

ಭಕುತಿ ಪೂರ್ವಕವಾಗಿ ಬಿಡದಲೆ |

ಸಕಲಕ್ಷೇತ್ರವ ಚಲಿಸಿದಾ ||

ಮುಕುತಿ ಸುಖದಾತಾರನಾದ |

ಲಕುಮಿ ರಮಣನ ತುತಿಸಿದಾ 3


ತಾ ಸುಸ್ವಪ್ನದೊಳೊಂದು ದಿನ ಶ್ರೀ

ವ್ಯಾಸ ಕಾಶಿಗೆ ತೆರಳಿದಾ ||

ವಾಸುದೇವನ ಕಂಡು ನಮಿಸಿ

ಲೇಸು ವರ ಸ್ವೀಕರಿಸಿದಾ 4


ಪುರಂದರಾರ್ಯರ ಕವನಗಳು

ಮೂರೆರಡು ಲಕ್ಷಕೆ ತ್ರಯಪದ

ಕೊರತೆ ತಾ ಪೂರೈಸಿದ 5


ಬಾಲೆಯೋರ್ವಳು ಬಂದು ಪ್ರಾರ್ಥಿಸೆ

ಕೇಳುತಾಕೆಯ ಪತಿಯನು

ಕಾಲ ಪಾಶವ ಬಿಡಿಸಿ ಕರುಣದಿ

ಪಾಲಿಸಿದ ಸುಮಹಾತ್ಮರ 6


ಶ್ರೀಮನೋಹರ ಶಾಮಸುಂದರ

ನಾಮ ಮಹಿಮೆಯ ವಿಧ ವಿಧ

ಭೂಮಿ ಸುಮನಸ ಸ್ತೋಮಕನುದಿನ

ಪ್ರೇಮದಿಂದಲಿ ಬೀರಿದ 7

***