Showing posts with label ಏಸು ಕಾಯಂಗಳ ಕಳೆದು ಎಂಬತ್ತನಾಲ್ಕು neleyadikeshava ESU KAAYANGALA KALEDU EMBATNALKU DASANAGU VISHESHANAGU. Show all posts
Showing posts with label ಏಸು ಕಾಯಂಗಳ ಕಳೆದು ಎಂಬತ್ತನಾಲ್ಕು neleyadikeshava ESU KAAYANGALA KALEDU EMBATNALKU DASANAGU VISHESHANAGU. Show all posts

Tuesday 5 October 2021

ಏಸು ಕಾಯಂಗಳ ಕಳೆದು ಎಂಬತ್ತನಾಲ್ಕು ankita neleyadikeshava ESU KAAYANGALA KALEDU EMBATNALKU DASANAGU VISHESHANAGU





On Krishna

ಏಸು ಕಾಯಂಗಳ ಕಳೆದು ಎಂಬತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ |

ತಾನಲ್ಲ ತನ್ನದಲ್ಲ ಆಸೆ ಥರವಲ್ಲ ಮುಂದೆ ಬಾಹೋದಲ್ಲ

ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು||ಪ||

ಆಶ ಕ್ಲೇಶ ದೋಷವೆಂಬ ಅಭ್ದಿಯೊಳು ಮುಳುಗಿ ಯಮನ ಪಾಶಕ್ಕೊಳಗಾಗದೆ ನಿರ್ದೋಷಿಯಾಗು ಸಂತೋಷಿಯಾಗು

ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರ  ಏಸು ದೇಶ ತಿರುಗಿದರೆ ಬಾಹೋದೇನೋ ಅಲ್ಲಿ ಹೋದೇನೋ

ದೋಷ ನಾಶ ಕೃಷ್ಣವೇಣಿ ಗಂಗೆ ಗೋದಾವರಿ ಭವ  ನಾಶಿತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ |

ಮೀಸಲಾಗಿ ಮಿಂದು ಜಪ ತಪ ಹೋಮ ನೇಮಗಳ ಏಸು ಬಾರಿ ಮಾಡಿದರು ಫಲವೇನು ಈ ಛಲವೇನು || 1 ||

ಅಂದಿಗೋ ಇಂದಿಗೋ ಒಮ್ಮೆ ಸಿರಿಕಮಲೇಶನನ್ನು ಒಂದು ಬಾರಿ ಯಾರೂ ಹಿಂದ ನೆನೆಯಲಿಲ್ಲ ಮನದಣಿಯಲಿಲ್ಲ |

ಬಂದು ಬಂದು ಭ್ರಮೆಗೊಂಡು ಮಾಯಾಮೋಹಕ್ಕೆ ಸಿಕ್ಕಿ | ನೊಂದು ಬೆಂದು ಒಂದರಿಂದ ಉಳಿಯಲಿಲ್ಲ ಬಂಧ ಕಳೆಯಲಿಲ್ಲ | ಸಂದೇಹವ ಮಾಡದಿರು ಅರಿವು ಎಂಬ ದೀಪವಿಟ್ಟು ಇಂದು ಕಂಡ್ಯ ದೇಹದಲ್ಲಿ ಪಿಂಡಾಂಡ ಹಾಗೆ ಬ್ರಹ್ಮಾಂಡ |

ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ |  ಮುಕುಂದನಿಂದ ಮುಕ್ತಿ ಬೇಡು ಕಂಡ್ಯ ನೀ ನೋಡು ಕಂಡ್ಯ || 2 ||

ನೂರು ಬಾರಿ ಶರಣು ಮಾಡಿ ನೀರ ಮುಳುಗಲ್ಯಾಕೆ ಪರ ನಾರಿಯರ ನೋಟಕೆ ಗುರಿಯ ಮಾಡಿದಿ ಮನ ಸೆರೆಯ ಮಾಡಿದಿ | ಸೂರೆಯೊಳು ಸೂರೆ ತುಂಬಿ ಮೇಲೆ ಹೂವಿನ ಹಾರ ಗೀರು ಗಂಧ ಅಕ್ಷತೆಯ ಧರಿಸಿದಂತೆ ನೀ ಮೆರೆಸಿದಂತೆ |

ಗಾರುಢಿಯ ಮಾತ ಬಿಟ್ಟು ನಾದಬ್ರಹ್ಮನ ಪಿಡಿದು ಸಾರಿ ಸೂರಿ ಮುಕ್ತಿಯನ್ನು ಶಮನದಿಂದ ಮತ್ತೆ ಸುಮನದಿಂದ |

ನಾರಾಯಣ ಅಚ್ಯುತ ಅನಂತಾದಿ ಕೇಶವನ | ಸಾರಾಮೃತವನ್ನುಂಡು ಸುಖಿಸೋ ಲಂಡ ಜೀವವೇ ಎಲೇ ಭಂಡ ಜೀವವೇ || 3 ||
***

Ēsu kāyaṅgaḷa kaḷedu embatnālku lakṣa jīvarāśiyannu dāṭi banda ī śarīra |

tānalla tannadalla āse tharavalla munde bāhōdalla

dāsanāgu viśēṣanāgu dāsanāgu viśēṣanāgu||pa||

āśa klēśa dōṣavemba abhdiyoḷu muḷugi yamana pāśakkoḷagāgade nirdōṣiyāgu santōṣiyāgu

kāśi vāraṇāsi kan̄ci kāḷahasti rāmēśvara ēsu dēśa tirugidare bāhōdēnō alli hōdēnō

dōṣa nāśa kr̥ṣṇavēṇi gaṅge gōdāvari bhava nāśituṅgabhadre yamune vāsadalli upavāsadalli |

mīsalāgi mindu japa tapa hōma nēmagaḷa ēsu bāri māḍidaru phalavēnu ī chalavēnu || 1 ||

andigō indigō om’me sirikamalēśanannu ondu bāriyārū hinda neneyalilla manadaṇiyalilla |

bandu bandu bhramegoṇḍu māyāmōhakke sikki nondu bendu ondarinda uḷiyalilla bandha kaḷeyalilla | sandēhava māḍadiru arivu emba dīpaviṭṭu indu kaṇḍya dēhadalli piṇḍāṇḍa hāge brahmāṇḍa |

indu hariya dhyānavannu māḍi vivēkadi mukundaninda mukti bēḍu kaṇḍya nī nōḍu kaṇḍya || 2 ||

nūru bāri śaraṇu māḍi nīra muḷugalyāke para nāriyara nōṭake guriya māḍidi mana sereya māḍidi |

sūreyoḷu sūre tumbi mēle hūvina hāra gīru gandha akṣateya dharisidante nī meresidante |

gāruḍhiya māta biṭṭu nādabrahmana piḍidu sāri sūri muktiyannu śamanadinda matte sumanadinda | nārāyaṇa acyuta anantādi kēśavana | sārāmr̥tavannuṇḍu sukhisō laṇḍa jīvavē elē bhaṇḍa jīvavē || 3 ||
***


ಏಸು ಕಾಯಂಗಳ ಕಳೆದು 
ಎಂಬತ್ತನಾಲ್ಕು ಲಕ್ಷ ಜೀವರಾಶಿಯನ್ನು 
ದಾಟಿ ಬಂದ ಇ ಶರೀರ||ಏಸು||
ತಾನಲ್ಲ ತನ್ನದಲ್ಲ||2|| 
ಆಸೆ ತರವಲ್ಲ ಮುಂದೆಬಹುದಲ್ಲಾ...
ದಾಸನಾಗು ವಿಶೇಷನಾಗು ||4||

ಆಶ ಕ್ಲೇಶ ದೋಷವೆಂಬ ಅಬ್ಧಿಯೊಳು 
ಮುಳುಗಿ ಯಮನ ಪಾಶಕ್ಕೊಳಗಾಗದೆ 
ನಿರ್ದೋಷಿಯಾಗು ಸಂತೋಷಿಯಾಗು
                  ‌ ‌‌  ‌‌‌‌‌‌                 ||ಆಶ ಕ್ಲೇಶ||
ಕಾಶಿ, ವಾರಣಾಸಿ, ಕಂಚಿ, ಕಾಳಹಸ್ತಿ, 
ರಾಮೇಶ್ವರ ಏಸು ದೇಶ ತಿರುಗಿದರೆ ಬಹುದೇನು, 
ಅಲ್ಲಿ ಹೋದೇನು.
ದೋಷ ನಾಶ ಕ್ರಷ್ಣವೇಣಿ, ಗಂಗೆ, ಗೋದಾವರಿ
ಭವನಾಶಿ ತುಂಗಭದ್ರೆ, ಯಮುನೆ ವಾಶದಲ್ಲಿ
ಉಪವಾಶದಲ್ಲಿ
ಮೀಸಲಾಗಿ ಮಿಂದು ಜಪ ತಪ 
ಹೋಮ ನೇಮಗಳ ಏಸು ಬಾರಿ 
ಮಾಡಿದರು ಫಲವೇನು ಇ ಛಲವೇನು
                                   ||ದಾಸನಾಗು||
ಅಂದಿಗೊ ಇಂದಿಗೊ ಒಮ್ಮೆ 
ಸಿರಿ ಕಮಲೇಶನನ್ನು, ಒಂದು ಬಾರಿಯಾರು 
ಹಿಂದೆ ನೆನೆಯಲಿಲ್ಲ ,ಮನ ದಣಿಯಲಿಲ್ಲಾ
                                  ||ಅಂದಿಗೋ||
ಬಂದು ಬಂದು ಭ್ರಮೆಗೊಂಡು  
ಮಾಯಮೋಹಕ್ಕೆ ಸಿಕ್ಕಿ
ನೊಂದುಬೆಂದು ಒಂದರಿಂದ ಉಳಿಯಲಿಲ್ಲ
ಬಂದ ಕಳೆಯಲಿಲ್ಲ
ಸಂದೇಹವ  ಮಾಡದಿರು 
ಆರಿವು ಎಂಬ ದೀಪ ಬಿಟ್ಟು
ಇಂದು ಕಂಡ್ಯ ದೇಹದಲ್ಲಿ ಪಿಂಡಾಂಡ 
ಹಾಗೆ ಬ್ರಹ್ಮಾಂಡ
ಇಂದು ಹರಿಯಧ್ಯಾನವನ್ನು ಮಾಡಿ ವಿವೇಕದಿ
ಮುಕುಂದನಿಂದ ಮುಕ್ತಿ ಬೇಡು ಕಂಡ್ಯ
ನೀ ನೋಡು ಕಂಡ್ಯಾ.....
              ‌‌‌‌‌                          ||ದಾಸನಾಗು||
ನೂರುಬಾರಿ ಶರಣು ಮಾಡಿ 
ನೀರ ಮುಳುಗಲ್ಯಾಕೆ ಪರನಾರಿಯರ 
ನೋಟಕೆ ಗುರಿಯ ಮಾಡಿದಿ, 
ಮನ ಸೆಳೆಯ ಮಾಡಿದಿ||ನೂರು||
ಸೂರೆಯೊಳು ಸೂರೆ ತುಂಬಿ
ಮೇಲೆ ಹೂವಿನ ಹಾರ
ಗೀರುಗಂಧ ಅಕ್ಷತೆಯ ಧರಿಸಿದಂತೆ
ನೀ ಮೆರೆಸಿದಂತೆ
ಗಾರುಡಿಯ ಮಾತ ಬಿಟ್ಟು 
ನಾದಬ್ರಹ್ಮನ ಪಿಡಿದು, 
ಸಾರಿಸೂರಿ ಮುಕ್ತಿಯನ್ನು ಶಮನದಿಂದ 
ಮತ್ತೆ ಸುಮನದಿಂದ
ನಾರಾಯಣ, ಅಚ್ಯುತಾ, 
ಅನಂತಾದಿ, ಕೇಶವನಾ......
ಆಆ...ಆಆಆ...ಆಆಆ..ಆಆಆಆ..
ನಾರಾಯಣ, ಅಚ್ಯುತಾ, ಅನಂತಾದಿ, ಕೇಶವನ 
ಸಾರಾಮ್ರತವನ್ನುಂಡು ಸುಕಿಸೊ 
ಲಂಢಜೀವವೇ ಎಲೋ ಭಂಢ ಜೀವವೇ..
                                    ||ದಾಸನಾಗು||
                                 ||ಏಸು ಕಾಯಂಗಳ||
******