Showing posts with label ನಿನ್ನಾಧೀನ ಶರೀರ rangavittala ankita suladi ದಾಸದೀಕ್ಷೆ ಸುಳಾದಿ NINNAADHEENA SHAREERA DASADEEKSHE SULADI. Show all posts
Showing posts with label ನಿನ್ನಾಧೀನ ಶರೀರ rangavittala ankita suladi ದಾಸದೀಕ್ಷೆ ಸುಳಾದಿ NINNAADHEENA SHAREERA DASADEEKSHE SULADI. Show all posts

Monday 9 December 2019

ನಿನ್ನಾಧೀನ ಶರೀರ rangavittala ankita suladi ದಾಸದೀಕ್ಷೆ ಸುಳಾದಿ NINNAADHEENA SHAREERA DASADEEKSHE SULADI

Audio by Mrs. Nandini Sripad

by sripadaraja 

ಶ್ರೀ ಶ್ರೀಪಾದರಾಜ ವಿರಚಿತ ದಾಸದೀಕ್ಷೆ ಸುಳಾದಿ 

 ರಾಗ ಸಾರಂಗ 

 ಧ್ರುವತಾಳ 

ನಿನ್ನಾಧೀನ ಶರೀರ ಕರಣ ಚೇಷ್ಟೆಗಳೆಲ್ಲ
ನಿನ್ನಾಧೀನ ಬಂಧ ಮೋಕ್ಷ ನಿರಯಗಳು
ನಿನ್ನಾಧೀನ ಯೋಗ್ಯತೆ ಸಾಧನ ಸಾಧ್ಯಗಳೆಲ್ಲ
ನಿನ್ನಾಧೀನ ಸುಕೃತ ದುಷ್ಕೃತ ಫಲವೋ
ನಿನ್ನಾಧೀನ ವಿಷಯಾತ್ಮಕ ಬುದ್ಧಿಗಳೆಲ್ಲ
ನಿನ್ನಾಧೀನ ಚರಾಚರವೆಂದು ಶೃತಿ ಸಾರುತಿದೆ
ಎಂತು ಪುಣ್ಯಪಾಪಂಗಳು ನಿನ್ನ ಲೇಪಿಸವೊ ದೇವ
ಇಂತು ಜೀವರನ ನೋಡಿ ಪಾಪಂಗಳುಣಿಸುವೆ
ಅಂತರಾತ್ಮನೆ ನಿನ್ನ ಮಹಿಮೆಗೆ ನಮೊ ನಮೋ
ಎಂತು ಚಿತ್ತವೊ ನೀನೆಂತು ಪಾಲಿಸುವಿಯೋ ರಂಗವಿಟ್ಠಲ ॥ 1 ॥

 ಮಠ್ಯತಾಳ 

ಮುನ್ನ ನಿನ್ನ ಚರಣ ಕಮಲವ 
ನೆನಿಯದೆ ಭವಗಳಲ್ಲಿ ಬಂದೆನೊ
ಪನ್ನಗಶಯನ ಶ್ರೀಹರೆ
ಎನ್ನ ಗುಣ ದೋಷವರಸದೇ
ಇನ್ನು ಕಾಯೋ ರಂಗವಿಟ್ಠಲ ॥ 2 ॥

 ತ್ರಿಪುಟತಾಳ 

ಕರಣಗಳು ಬಿಡದೇ ತಮ್ಮ ತಮ್ಮ
ವಿಷಯಂಗಳಿಗೆ ಎಳವುತಲಿವೆ ಎನ್ನನು 
ಹರಣ ನಿನ್ನದೊ ಕರುಣಾಕರನೆ
ಕರುಣಿ ನಿನ್ನ ಭಕತರಿಗೆ ಶರಣನೆಂದೆ ಎನ್ನನು
ಪೊರೆವದು ಬಿರಿದುಚಿತ
ಕರುಣಾಕರನೆ ರಂಗವಿಟ್ಠಲರೇಯಾ 
ಪೊರೆವದು ಬಿರಿದುಚಿತ ॥ 3 ॥

 ಅಟ್ಟತಾಳ 

ಬಂದು ಬಂದು ನಾನಾ ಭವದಲ್ಲಿ ನೊಂದೆನು
ನಂದನಕಂದ ಇಂದಿರಾನಂದ
ಕುಂದ ಶುದ್ಧ ಧವಳದಂತೆ ಮಂದಹಾಸ
ನಂದನಕಂದ ಇಂದಿರಾನಂದ
ಇಂದೆನ್ನ ಸಲಹಯ್ಯಾ ರಂಗವಿಟ್ಠಲ ॥ 4 ॥

 ಏಕತಾಳ 

ಹರಿಯೆ ನಿನ್ನ ನೆನೆದವ ನರಕವ ಹೊಗನಂತೆ
ನಾ ನಿನ್ನೊಮ್ಮೆ ಇಮ್ಮನೆ ನೆನೆವೆ 
ಕರುಣಿಸಿ ಕಾಯೋ ರಂಗವಿಟ್ಠಲ ॥ 5 ॥

 ಜತೆ 

ಮಂಗಳಮಹಿಮ ಭುಜಂಗಶಯನ ನಮೋ

ಜಂಗುಳಿ ದೈವದಗಂಡ ರಂಗವಿಟ್ಠಲ ॥
**********




ಸಾರಂಗರಾಗ , ಧ್ರುವತಾಳ

ನಿನ್ನಾಧೀನ ಶರೀರ ಕರಣ ಚೀಷ್ಟೆಗಳೆಲ್ಲ
ನಿನ್ನಾಧೀನ ಬಂಧ ಮೋಕ್ಷ ನಿರಯಗಳು
ನಿನ್ನಾಧೀನ ಯೋಗ್ಯತೆ ಸಾಧನ ಸಾಧ್ಯಗಳೆಲ್ಲ
ನಿನ್ನಾಧೀನ ಸುಕೃತ ದುಷ್ಕೃತ ಫಲವು
ನಿನ್ನಾಧೀನ ವಿಷಯಾತ್ಮ ಬುದ್ಧಿಗಳೆಲ್ಲ
ನಿನ್ನಾಧೀನ ಚರಾಚರವೆಂದು ಶ್ರುತಿ ಸಾರುತಲಿವೆ
ಇಂತು ಪುಣ್ಯಪಾಪವೆಲ್ಲ ನಿನ್ನ ಲೇಪಿಸವೋ ದೇವ
ಎಂತು ಜೀವರನು ಪುಣ್ಯಪಾಪಂಗಳನುಣಿಸುವೆ
ಅಂತರಾತ್ಮನೆನ್ನ ಮಹಿಮೆಗೆ ನಮೋ ಎಂಬೆ
ಎಂತೋ ಚಿತ್ತವಿನ್ನೆಂತೋ ಪಾಲಿಸೋ ರಂಗವಿಠಲ

(ಮಠ್ಯ ತಾಳ)

ಮುನ್ನ ನಿನ್ನ ಚರಣಕಮಲವ ನಂಬಿದೆ
ಭವಭವಂಗಳಲಿ ಬಂದೆನೊ
ಪನ್ನಗೇಶಶಯನ ಶ್ರೀ ಹರೇ
ಇನ್ನು ಬಿಡೆನು. ಬಿಡೆನಯ್ಯ ಸಂಪನ್ನ
ಎನ್ನ ಗುಣದೋಷವರಸದೆ
ಇನ್ನು ಕಾಯೊ ರಂಗವಿಠಲ

(ರೂಪಕತಾಳ)
ಕರಣಗಳು ಬಿಡದೆ ತಮ್ಮ ತಮ್ಮ
ವಿಷಯಂಗಳಿಗೆ ಎಳೆಯುತಲಿವೆ
ಎನ್ನ ಹರಣ ನಿನ್ನದು ಕರುಣಾಕರನೇ
ಈ ಧರೆ ರವಣ ಮಾಣಿಸೋ ಹರಿಯೇ
ನಿನ್ನ ಚರಣಭಕುತರ ಶರಣನಾದೆನು
ಹೊರೆವುದುಎನ್ನ ರಂಗವಿಠಲರೇಯ

(ಅಟ್ಟತಾಳ)
ಬಂದು ಬಂದು ನಾನಾ ಭವದಲ್ಲಿ ಬೆಂದೆನಯ್ಯ
ನಂದನಂದನ ಇಂದಿರಾನಂದ
ಕುಂದ ಶುದ್ಧ ಧವಳದಂತೆ ಮಂದಹಾಸ
ನಂದನ ಕಂದ ಇಂದಿರಾನಂದ
ಇಂದೆನ್ನ ಸಲಹಯ್ಯ ರಂಗವಿಠಲ

( ಏಕತಾಳ)

ಹರಿಯೇನಿನ್ನ ಒಮ್ಮೆ ನೆನೆದವ
ನರಕವ ಹೊಗನಂತೆ
ಆನು ಒಮ್ಮೆ ಇಮ್ಮೆ ನೆನೆವೆನಯ್ಯ
ಆನು ನಿನ್ನ ನಂಬಿದೆ ಕರುಣಿಗಳರಸ
ಹೊರೆದೆನ್ನ ಕಾಯೊ ರಂಗವಿಠಲ

(ಜತೆ)
ಮಂಗಳ ಮಹಿಮ ಭುಜಂಗಶಯನ ನಮೋ
ಜಂಗುಳಿದೈವದ ಗಂಡರಂಗವಿಠಲ
***********