Showing posts with label ಕರುಣಾಕರ ಶ್ರೀ ರಾಘವೇಂದ್ರಾ ಕರುಣಾನಿಧಿ ಶ್ರೀ ಹರಿ venkatanatha. Show all posts
Showing posts with label ಕರುಣಾಕರ ಶ್ರೀ ರಾಘವೇಂದ್ರಾ ಕರುಣಾನಿಧಿ ಶ್ರೀ ಹರಿ venkatanatha. Show all posts

Saturday 1 May 2021

ಕರುಣಾಕರ ಶ್ರೀ ರಾಘವೇಂದ್ರಾ ಕರುಣಾನಿಧಿ ಶ್ರೀ ಹರಿ ankita venkatanatha

 " ಶ್ರೀ ರಾಘವೇಂದ್ರ ಸ್ತುತಿ "


ರಚನೆ: ಆಚಾರ್ಯ ನಾಗರಾಜು ಹಾವೇರಿ 

ಮುದ್ರಿಕೆ : ವೇಂಕಟನಾಥ 

ರಾಗ : ಹಂಸಾನಂದೀ  ತಾಳ : ಆದಿ 


ಕರುಣಾಕರ ಶ್ರೀ ರಾಘವೇಂದ್ರಾ ।

ಕರುಣಾನಿಧಿ ಶ್ರೀ ಹರಿ -

ಸನ್ನಿಧಾನಪಾತ್ರಾ ।। ಪಲ್ಲವಿ ।।


ಭಜಕ ಜನ ಮಂದಾರ ಗುರುರಾಜಾ । ಜ ।

ಡಜಲೋಚನ ನರಹರಿಯ ಏಕಾಂತದಿ । 

ಭಜಿಪ ದೇಶಿಕವರ್ಯ ।। ಚರಣ ।।


ಯತಿಕುಲ ತಿಲಕ ಮಂಚಾಲೆ ಪುರ ವಾಸಾ ।

ಸಂತತ ಸಲಹಾ ಖಗರಾಜ -

ಗಮನ ಪ್ರೇಷ್ಠಾ ।। ಚರಣ ।।

ಕಾಮಿತ ಫಲವೀವ ಸುರ ಕಾಮಧೇನು ।

ಕಾಮಿತದಾತೆ ಸುತ ಶ್ರೀ ಶಂಖುಕರ್ಣಾ ।। ಚರಣ ।।


ಕೃತದಿ ಪ್ರಹ್ಲಾದರಾಯನಾಗಿ ।

ಕ್ರತು ಮಾಡ್ದ ಸ್ಥಳದಿ -

ಸ್ಥಿರವಾಗಿ ನಿಂತ ।। ಚರಣ ।।

ವೇದ ಮತಾಬ್ಧಿಗೆ ಪೂರ್ಣೇ೦ದುನೆನಿಸಿ ।

ಮಧ್ವ ಪಿತ ವೇಂಕಟನಾಥ ಮೂಲರಾಮ ।

ಪದಾರ್ಚಕ ಸುಬುಧೇಂದ್ರ ಪ್ರಿಯ ।। ಚರಣ ।।

****