Showing posts with label ಪಂಚಮುಖ ಹನುಮತೇ ಶರಣುಮಾಂಪಾಹಿ prasannashreenivasa. Show all posts
Showing posts with label ಪಂಚಮುಖ ಹನುಮತೇ ಶರಣುಮಾಂಪಾಹಿ prasannashreenivasa. Show all posts

Thursday 5 August 2021

ಪಂಚಮುಖ ಹನುಮತೇ ಶರಣುಮಾಂಪಾಹಿ ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru


ಪಂಚಮುಖ ಹನುಮತೇ ಶರಣುಮಾಂಪಾಹಿ ಪ


ಜ್ಞಾನ ಬಲ ರೂಪನೇ ಹನುಮ ಮುಖ್ಯಪ್ರಾಣ

ಅನಿಮಿಷವೃಂದದಲಿ ಪ್ರವರನೇ ಶರಣು

ಅನುಪಮಾನಂದಮಯ ಅನಘ ಸೀತಾಪತಿಯ

ಅನುಪಮ ಮಹಾದಾಸ ಹನುಮ ಪಾಲಯಮಾಂ 1

ನಿರುಪಮಮಹಾತೇಜ ಸರ್ವತೋಮುಖ ಉಗ್ರ

ವೀರ ಭೀಕರ ಮೃತ್ಯುಮಾರಕ ಮಹಾವಿಷ್ಣು

ನರಸಿಂಹ ಶುಭಕರಗೆ ಪ್ರಿಯತಮನೆ ಶರಣಾದೆ

ಕರುಣದಿಂದಲಿ ಎನ್ನ ತ್ರುಟಿ ಬಿಡದೆ ಸಲಹೋ 2

ಬಂಗಾರಮಯ ಸುಧಾ ಪೂರ್ಣ ಕುಂಭವುಕರದಿ

ಜಂಗಮದ ಸ್ಥಾವರದ ವಿಷಹರ ಅಭಯದ

ಖಗರಾಜನಿಗೆ ವರನೆ ತದ್ರೂಪಮುಖಧರನೆ

ಖಗಪ ಗಮನ ಶ್ರೀಕರನ ಒಲಿಸೆನಗೆ 3

ಶ್ಯಾಮ ಅರಿ ಶಂಖಧರ ಅಭಯ ಸದ್ವರಹಸ್ತ

ಭೂಮಿಧರ ಸರ್ವವಾಂಛಿತ ಸಿದ್ಧಿದಾತ

ಭೂಮ ನಿರ್ಮಲ ಕೋಲ ರೂಪ ಸರ್ವೋತ್ತಮನು

ಮನ್ಮನದಿ ಪೊಳೆವಂತೆ ನೀದಯ ಮಾಡೋ 4

ಜ್ಞಾನ ವಿದ್ಯಾಕಾಂತಿ ಪ್ರತಿ ವಾದಿಜಯದಾತ

ಮನಬುಧ್ಧಿದೇಹ ದಾರುಢ್ಯ ಸ್ಥೈರ್ಯ

ಘನ ಭಕ್ತಿ ಮುಕ್ತಿ ಸಾಧನ ವೀವ ಹಯಶೀರ್ಷ

ಪ್ರಸನ್ನ ಶ್ರೀನಿವಾಸನ ಒಲಿಸೆನಗೆ ಗುರುತಮನೇ 5

|| ಶ್ರೀ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಕೃಷ್ಣಾರ್ಪಣಮಸ್ತು ||

***