Showing posts with label ತಿರುಮಲೇಶನೆ ನಿನ್ನ ಚರಣ ಪಂಕಜಯುಗಲ karpara narahari TIRUMALESHANE NINNA CHARANA PANKAJAYUGALA. Show all posts
Showing posts with label ತಿರುಮಲೇಶನೆ ನಿನ್ನ ಚರಣ ಪಂಕಜಯುಗಲ karpara narahari TIRUMALESHANE NINNA CHARANA PANKAJAYUGALA. Show all posts

Thursday 2 December 2021

ತಿರುಮಲೇಶನೆ ನಿನ್ನ ಚರಣ ಪಂಕಜಯುಗಲ ankita karpara narahari TIRUMALESHANE NINNA CHARANA PANKAJAYUGALA



ತಿರುಮಲೇಶನೆ ನಿನ್ನ ಚರಣ ಪಂಕಜಯುಗಲ

ನೆರೆನಂಬಿದವ ಧನ್ಯನೋ ಪ


ಗುರು ಮೂಲ ಪುರುಷ ನಾರಪ್ಪಯ್ಯ ಮುನಿಗೊಲಿದು

ಕುರಿಕಿಹಳ್ಳಿಯಲಿ ಬಂದಾ ನಿಂದಾ ಅ.ಪ


ವರಋಷಿಯ ಪೂರ್ವದಲಿ

ತಿರುಪತಿಯ ಮುಟ್ಟಿ ಮಲ-

ಗಿರಲು ಸ್ವಪ್ನವ ಕಾಣುತ

ತುರುರೂಪದಲಿ ನಾನೆ ಬರುವೆ ಕಾ-

ರ್ಪರ ವನಕೆ ದರುಶನವÀÀ ಕೊಡುವೆ

ನಿರುತ ಬರುತ ಬರುತಲಿ ವಿಪ್ರ

ತಿರುಗಿ ನೋಡಲು ಪದದಿ ಕಿರುಗಜ್ಜೆಗಳ ನುಡಿಸುತಾ

ಕುರಿಕಿ ಹಳ್ಳಿಯ ಸುಮಂದಿರನೆನಿಸಿ

ಸಿರಿಸಹಿತ ವರಶಿಲೆಯ ಮೇಲೆ ಪಾ

ಲ್ಗರಿದು ನೆಲೆಸಿರುವಂಥ 1


ತೋಂಡಮಾನಕ್ಷಿತಿಪ ಪುಂಡಲೀಕಾದಿ ಬಹು

ತೋಂಡರಿಗೆ ಒಲಿದು ದೇವಾ

ಕುಂಡಲಿ ಪರ್ವತದಿ ತಂಡತಂಡದಿ ಭಕುತ

ಮಂಡಲಿಗೆ ಫಲವ ಕೊಡುವ

ದುಂಡುಮುತ್ತಿನಹಾರ ಮುಕುಟ ರತ್ನಾಭರಣ

ಮಂಡಿತನಾಗಿ ಮೆರೆವ

ಕಂಡೆನಾನಿಮ್ಮ ಪದ ಪುಂಡಲೀಕವನು ಈ

ಗುಂಡಿನಾ ತಿಮ್ಮಯ್ಯನೆಂದು ಕರೆಸಿಕೊಳುವಿ 2


ಕರಮುಗಿವೆ ಮನ್ಮನದಿ

ಕರುಣದಲಿ ತೋರೋತವ

ಪರಮ ಸುಂದರ ಚರಣವ

ನಿರುತ ಸ್ಮರಿಸುವ ಜನರ

ದುರಿತ ತಿಮಿರಕೆ ದಿವಾ

ಕರನೆನಿಸಿ ಸುಖವಗರಿವಾ

ಸುರನಿಕರ ಸೇವ್ಯ ಕಾರ್ಪರನಿಲಯನೆನಿಸೆ ಬಹು

ಶರಣು ಜನರನು ಪೊರಿಯುವಾ

ವರಕೃಷ್ಣ ಗರ್ಭದಲಿ ಒಪ್ಪುವ ಪಿಪ್ಪಲಸ್ಥಶ್ರೀ

ನರಹರಿಯ ಬಳಿಯಲಿರುವಾಮೆರೆವಾ 3

****