Showing posts with label ತೇರನೇರಿ ಮೆರೆದು ಬರುವ ಭೂಸುರವಂದ್ಯ ananda vittala TERANERI MEREDU BARUVA BHUSURAVANDYA. Show all posts
Showing posts with label ತೇರನೇರಿ ಮೆರೆದು ಬರುವ ಭೂಸುರವಂದ್ಯ ananda vittala TERANERI MEREDU BARUVA BHUSURAVANDYA. Show all posts

Friday 1 October 2021

ತೇರನೇರಿ ಮೆರೆದು ಬರುವ ಭೂಸುರವಂದ್ಯ ankita ananda vittala TERANERI MEREDU BARUVA BHUSURAVANDYA



ತೇರನೇರಿ ಮೆರೆದು ಬರುವ ಭೂಸುರವಂದ್ಯ ಯಾರಕ್ಕ ಕ|
ಗುರು ರಾಘವೇಂದ್ರರೆಂತೆಂಬೋ ಯತಿ ಕುಲ ತಿಲಕ  ಕೇಳ್ತಾಂಗಿ ||ಪ||

ಚಂದದಿ ಕುಂದನ ಮುಕುಟವ ಧರಿಸಿದ ಸುಂದರನೀತ ಯಾರಕ್ಕ|
ತಂದೆಯ ಆಘಹರಿದು ನರಹರಿಯ ತೋರಿದ ಪ್ರಹ್ಲಾದರಾಯ ಕೇಳ್ತಾಂಗಿ ||1||

ವಿಪ್ರರು ದಾಸರು ಯತಿತತಿಗಳ ಕೂಡಿ ಬರುತಿಹ ನೀತ ಯಾರಕ್ಕ|
ಕಪ್ಪು ಕೃಷ್ಣನ ಒಪ್ಪಿಸಿ ಕುಣಿಸಿದ ವ್ಯಾಸರಾಯ ಕೇಳ್ತಾಂಗಿ ||2||

ವರಹಜ ನದಿಯ ತೀರದಿ ಇದ್ದು ಭಕುತರ ಪೊರೆವವ ಯಾರಕ್ಕ|
ಹರುಷದಿ ಆನಂದ ವಿಠಲನ ಸಾರಿದ ಪರಿಮಳ ರಾಯ  ಕೇಳ್ತಾಂಗಿ ||3
*********