Showing posts with label ಟೀಕಾಕೃತ್ಪಾದ ಕರುಣಾಕರ ಗುರು uragadrivasa vittala jayateertha stutih. Show all posts
Showing posts with label ಟೀಕಾಕೃತ್ಪಾದ ಕರುಣಾಕರ ಗುರು uragadrivasa vittala jayateertha stutih. Show all posts

Monday 2 August 2021

ಟೀಕಾಕೃತ್ಪಾದ ಕರುಣಾಕರ ಗುರು ankita uragadrivasa vittala jayateertha stutih

ಟೀಕಾಕೃತ್ಪಾದ ಕರುಣಾಕರ ಗುರು

ಶ್ರೀಕಾರಸರಿತವಾಸ

ನಾಕಾಧಿಪನೆ ಮನಶೋಕಾ ಹರಿಸಿ

ನೀ ಕಾಪಾಡುವುದು ನಿತ್ಯ 1


ಪೂರ್ಣಬೋಧರ ಮತಾರ್ಣವಚಂದಿರ

ನಿರ್ಣಯಿಸಿದೆ ಟೀಕಾರ್ಣವದೊಳು ಸುಧ

ಉಣ್ಣಿಸಿದೆಯೊ ಗ್ರಂಥ ವರ್ಣಿಸಿಇರುವೆ ಸತ್ಯ 2


ಮಿಥ್ಯಾವಾದಿಗಳ ಸತ್ಯ ತತ್ತ್ವವೆಲ್ಲ ಕತ್ತರಿಸಿದೆ ನಿತ್ಯ

ಎತ್ತ ನೋಡಲು ತಲೆ ಎತ್ತದಂತೆ

ದೈತ್ಯೋನ್ಮತ್ತರನೆಲ್ಲಾ ಸದೆದೆ3


ನಾಕಾಪತಿಗೆ ದೈತ್ಯಲೋಕಗಳಾ ಬಾಧೆ

ತಾ ಕಳೆಯಲು ನಿತ್ಯ

ಶ್ರೀಕರದಮೃತವ ಶ್ರೀಕಾಂತನಿತ್ತಂತೆ

ನೀ ಸುಧೆಯನು ತಂದೆ 4


ದಶಪ್ರಮತಿಸುಶಾಸ್ತ್ರಶರಧಿಯೊಳು

ವಾಸಿಸುವೆಯೊ ನಿತ್ಯ

ಮೀಸಲಮನ ಕೊಟ್ಟೆನ್ನಾಸೆಯ ಹ

ರಿಸಿ ಪದಸೇವೆಯ ಕೊಡೊ ನಿತ್ಯ5


ಪಾಕಶಾಸನ ಸುಖ ಬೇಕಾಗಿ ತೊರೆದು ನೀ

ನೇಕಾಂತದಲಿ ನಿಂತೇ

ಲೋಕಸುಖದಿ ಭವಶೋಕದಲ್ಲಿಹ ಎ

ನ್ನ ಕಾಪಾಡುವುದು ನಿತ್ಯ6


ಶೇಷಾವೇಶ ಆವೇಶಾಮಹಿಮ ಎನ್ನ

ದೋಷರಾಶಿಯ ಕಳೆದು

ಶೋಷಿಸು ಮನಕಲ್ಮಷವಿಷವನೆಲ್ಲ ನಿ

ಶ್ಶೇಷವ ಮಾಡಿ ಸಲಹೊ 7


ಹಲವು ವಿಷಯದ ಹಂಬಲದಿಂದ ಎನ್ನ e್ಞÁನ

ಹೊಲಬುಗೆಟ್ಟುದು ನಿತ್ಯ

ಅಲವಬೋಧರ ತತ್ತ್ವ ಲವಮಾತ್ರವಾದರು

ನೀ ಎನಗೆ ಪಾಲಿಸೊ8


ಮುಕ್ತಿಮಾರ್ಗಕೆ e್ಞÁನಭಕ್ತಿವೈರಾಗ್ಯಗುರು

ಭಕ್ತಿಯೆ ಮುಖ್ಯಕಾರಣ

ಯುಕ್ತಶಾಸ್ತ್ರ ಪ್ರಸಕ್ತಿ ಇಲ್ಲದ ತ್ವ

ದ್ಭಕ್ತನಾದೆನ್ನ ಸಲಹೊ9


ಅಕ್ಷೋಭ್ಯ ಕಟಾಕ್ಷದಿ ಯತಿ ಹ

ರ್ಯಕ್ಷನಾಗಿಹೆ ದೀಕ್ಷಾ

ಶಿಕ್ಷೆಮಾಡಿ ಪರಪಕ್ಷವಾದಿಗಳನ್ನು ಸ

ತ್ಶಿಕ್ಷಕನಾಗಿ ಮೆರೆದೆ10


ಮರುತಾಂತರ್ಗತ ಶ್ರೀ ವೇಂಕಟೇಶನ ಪಾದ

ಚರಣಕಮಲಮಧುಪ

ನಿರುತ ನೀ ಕರುಣಿಸು

ಉರಗಾದ್ರಿವಾಸವಿಠಲನ ನಿಜದಾಸ 11

****