Showing posts with label ಪಾಹಿ ಪಾಹಿ ಜಿತಮಾರ ಪಾಹಿ ಸುಬೋಧೇಂದ್ರ ಸಮೀರ pranesha vittala subodhendra teertha stutih. Show all posts
Showing posts with label ಪಾಹಿ ಪಾಹಿ ಜಿತಮಾರ ಪಾಹಿ ಸುಬೋಧೇಂದ್ರ ಸಮೀರ pranesha vittala subodhendra teertha stutih. Show all posts

Saturday 1 May 2021

ಪಾಹಿ ಪಾಹಿ ಜಿತಮಾರ ಪಾಹಿ ಸುಬೋಧೇಂದ್ರ ಸಮೀರ ankita pranesha vittala subodhendra teertha stutih

 subodhendra teertha rayara mutt stutih

ರಾಗ : ಕಾಂಬೋಧಿ ತಾಳ : ಏಕ  

ಪಾಹಿ ಪಾಹಿ ಜಿತಮಾರ ।
ಪಾಹಿ ಸುಬೋಧೇಂದ್ರ ಸಮೀರ ।
ಮಹಾ ಮತಾಬ್ದೀಂದು ದೀನಾಮರ ।
ಮಹಿಜ ಸುಹಿತ ಮಹಿತ ।। ಪಲ್ಲವಿ ।।

ನಿರ್ಮಲಾತ್ಮ ಸದ್ಗುರು ಧೀರ ।
ಕರ್ಮ ವಿಷಯಾಪೇಕ್ಷ ದೂರ ।
ಧರ್ಮಾಸಕ್ತ ಲೋಕೋದ್ಧಾರ ಶರ್ಮ । ಸು ।
ಶರ್ಮಾದ ಭರ್ಮಾಂಗ ಮರ್ಮಜ್ಞ ।। ಚರಣ ।।

ಅರ್ಕ ಮಹಿಮನೆ ಧೀಮಂತ ।
ಅರ್ಕಜನೋಲಿದಾನೀ ಶಾಂತ ।
ಮರ್ಕಟ ದುರ್ವಾದಿ ಧ್ವಾಂತ ಅರ್ಕ । ಕು ।
ತರ್ಕ ಸಂಪರ್ಕಾರ್ಹ ಅರ್ಕಾಭ ಪಾಹಿ ।। ಚರಣ ।।

ತೀರ್ಥ ಪಾಲಾ ಭಕ್ತಾಧೀನಾ ।
ತೀರ್ಥಾ೦ಗ್ರಿ ಪ್ರಾಣೇಶ ವಿಠ್ಠಲನ ।
ತೀರ್ಥ ದೂತ ನೀನಿದ್ದ ಸ್ಥಾನ ತೀರ್ಥವು ।
ತೀರ್ಥಪ ತೀರ್ಥಪ ತೀರ್ಥ ಮಾಂ ಪಾಹಿ ।। ಚರಣ ।।
****


ವಿವರಣೆ :
ಜಿತಮಾರ = ಮನ್ಮಥನ ಗೆದ್ದವರು 
ಅಮರ ಮಹಿ = ಕಲ್ಪವೃಕ್ಷ 
ಶರ್ಮ = ಆನಂದ 
ಸುಶರ್ಮದ = ಬ್ರಹ್ಮ ಜ್ಞಾನವನ್ನು ಕೊಡುವವ 
ಭರ್ಮಾಂಗ = ಬಂಗಾರದಂತಹ ಕಾಂತಿಯುಳ್ಳ ಅಂಗ ಉಳ್ಳವರು 
ಅರ್ಕ = ಸೂರ್ಯ 
ಅರ್ಕ ಮಹಿಮಾ = ಅನಂತ ಮಹಿಮಾ 
ಸಂಪರ್ಕಾಹ = ಮಿಥ್ಯಾವಾದದ ಸಂಪರ್ಕವನ್ನು ಹಾಳು ಮಾಡತಕ್ಕವರು 
ತೀರ್ಥ ಪಾಲ = ಸದ್ಧರ್ಮಗಳನ್ನು ಪಾರಿಪಾಲಿಸುವವ 
ತೀರ್ಥಾ೦ಘ್ರಿ = ಪಾದದಿಂದ ಗಂಗೆಯನ್ನು ಪಡೆದವನು
ತೀರ್ಥ ದೂತ = ಧರ್ಮ ದೂತ 
ತೀರ್ಥವು = ಪುಣ್ಯ ಕ್ಷೇತ್ರ 
ತೀರ್ಥಪ = ಶಾಸ್ತ್ರ ಪಾಲನ 
ತೀರ್ಥಪ = ಯತಿ ಶ್ರೇಷ್ಠ 
ತೀರ್ಥಮಾಂ = ನನ್ನನ್ನು ಪುನೀತನನ್ನಾಗಿ ಮಾಡು!!
by ಆಚಾರ್ಯ ನಾಗರಾಜು ಹಾವೇರಿ 
     ಗುರು ವಿಜಯ ಪ್ರತಿಷ್ಠಾನ
*******

by ಪ್ರಾಣೇಶದಾಸರು
ಪಾಹಿಪಾಹಿಜಿತಮಾರ |ಪಾಹಿಸುಬೋಧೇಂದ್ರಸಮೀರ||ಮಹಾ ಮತಾಬ್ಧೀಂದು ದೀನಾಮರ |ಮಹಿಜ, ಸುಹಿತ, ಮಹಿತ ಪ

ನಿರ್ಮಲಾತ್ಮ ಸದ್ಗುರು ಧೀರ |ಕರ್ಮವಿಷಯಾಪೇಕ್ಷಾ ದೂರ ||ಧರ್ಮಾಸಕ್ತ ಲೋಕೋದ್ಧಾರಶರ್ಮಸು |ಶರ್ಮಾದ ಭರ್ಮಾಂಗ ಮರ್ಮಜÕ 1

ಅರ್ಕಮಹಿಮನೆ ಧೀಮಂತ |ಅರ್ಕಜನೊಲಿದಾನೀ ಶಾಂತ ||ಮರ್ಕಟದುರ್ವಾದಿಧ್ವಾಂತಅರ್ಕಕು |ತರ್ಕ ಸಂಪರ್ಕಾಹ ಅರ್ಕಾಭ ಪಾಹಿ 2

ತೀರ್ಥ ಪಾಲಾ ಭಕ್ತಾಧೀನ |ತೀರ್ಥಾಂಘ್ರಿ ಪ್ರಾಣೇಶ ವಿಠಲನ ||ತೀರ್ಥದೂತ ನೀನಿದ್ದ ಸ್ಠಾನ ತೀರ್ಥವು |ತೀರ್ಥಪ ತೀರ್ಥಪ ತೀರ್ಥ ಮಾಂ ಪಾಹಿ 3
*******