Showing posts with label ಶರಣು ಹೋಗುವೆನಯ್ಯ ನಾನು krishnavittala. Show all posts
Showing posts with label ಶರಣು ಹೋಗುವೆನಯ್ಯ ನಾನು krishnavittala. Show all posts

Monday 2 August 2021

ಶರಣು ಹೋಗುವೆನಯ್ಯ ನಾನು ankita krishnavittala

ಶರಣು ಹೋಗುವೆನಯ್ಯ ನಾನು ಪ


ಸಿರಿ ಅಜಭವ ಶಕ್ರ

ಸುರಸ್ತೋಮಗಳನೆಲ್ಲ

ಸರಸದಿಂದ ಆಳ್ವ

ಪರಮಪುರುಷ ಹರಿಗೆ

ಶಿರಬಾಗಿ ನಮಿಸುತ ಅ.ಪ.


ನಿರುತ ಆನಂದದಿ

ಮೆರೆದು ಇರುವಂಥ

ನಿರಜ ನಿತ್ಯನು ಆದ

ಉರಗನ ಮೇಲ್ವರಗುತ

ಪರಮ ಪರಾತ್ಪರ

ಪರಮವೇದದ ಸಾರ

ಪರಮ ಸದ್ಗುಣ ಪೂರ್ಣ

ಪುರುಷಸೂಕ್ತ ವಂದ್ಯ

ಪರಿಪರಿ ರೂಪದಿ

ಸರ್ವತ್ರ ಇರುವಂಥ

ನಿರ್ಗುಣ ನಿರಾಕಾರ

ನಿರುಪಮ ನಿಸ್ಸೀಮ

ನಿರುತ ತೃಪ್ತನು ಆದ

ಸರ್ವಸಾರ ಭೋಕ್ತ

ಸರ್ವರ ಬಿಂಬನು

ಸರ್ವಗುಣ ಪೂರ್ಣ

ಸರ್ವರ ಆಧಾರ

ಸರ್ವೇಶ ಸ್ವತಂತ್ರ

ಸರ್ವಶಬ್ದ ವಾಚ್ಯ

ಸರ್ವರಿಂ ಭಿನ್ನನು

ಸರಸಸೃಷ್ಟಿಯ ಮಾಳ್ವ

ನೀರಜನಾಭಗೆ

ಚರಣವ ಪಿಡಿಯುತ್ತ

ಉರುಗಾಯನ ದೇವ

ಸಲಹು ಸಲಹೆಂದು 1

ವಾರಿಯೊಳಾಡುವ

ಭಾರವಹೊರುವ

ಕೋರೆಯತೀಡುವ

ಕರುಳಾನು ಬಗೆಯುವ

ವರವಟು ಆಗುವ

ಪರಶುವ ಪಿಡಿಯುವ

ನಾರಿಯ ಹುಡುಕುವ

ನಾರಿಯ ಕದಿಯುವ

ಬರಿಮೈಯ್ಯ ತೋರುವ

ತುರುಗವನೇರುವ

ನಾರಿಯು ಆದವ

ಭಾರತ ಮಾಡುವ

ವರ ಸಾಂಖ್ಯ ಹೇಳುವ

ಕರಿಯನು ಪೊರೆಯುವ

ಪೋರಗೆ ಒಲಿದವ

ವರ ಋಷಭನಾದ

ಹರಿ ಯಜ್ಞ ನಾದವ

ತರಿವ ರೋಗಂಗಳ

ವರಹಂಸ ರೂಪನು

ತುರುಗ ವೇಷಧಾರಿ

ನಾರಾಯಣ ಮುನಿಯೆ

ಗುರು ದತ್ತಾತ್ರೇಯನೆ

ಪರಿಸರ ಪರಮಾಪ್ತ

ಪೊರೆಯೊ ಮಹಿದಾಸನೆಂದು

ಕರವೆತ್ತಿ ಮುಗಿಯುತ 2

ಪಾಪಿಯ ಪೊರೆದವಗೆ

ತಾಪ ಇಲ್ಲದವಗೆ

ಅಪವರ್ಗದಾತಗೆ

ವಿಪನ ಏರಿದವಗೆ

ಗೋಪತಿಯಾದವಗೆ

ತಾಪವ ಮೆದ್ದವಗೆ

ಚಾಪವ ಮುರಿದವಗೆ

ಚಪಲ ಇಲ್ಲ ದವಗೆ

ಕಪಟರ ವೈರಿಗೆ

ಗುಪ್ತದಿ ಇರುವಗೆ

ವಿಪ್ರನ ಸಖನಿಗೆ

ಅಪ್ರಮೇಯನಿಗೆ

ಗೋಪೇರ ವಿಟನಿಗೆ

ತಾಪಸ ಪ್ರೀಯಗೆ

ವಿಪ್ರಶಿಶು ತಂದವಗೆ

ಮುಪ್ಪಿಲ್ಲ ದವಗೆ

ತ್ರಿಪುರಾರಿ ಸಖಗೆ

ಕೃಪಣ ವತ್ಸಲನಿಗೆ

ತಪ್ಪು ಮಾಡದವಗೆ

ಆಪ್ತತಮನಿಗೆ

ಸಪ್ತ ಶಿವವ್ಯಕ್ತನಿಗೆ

ಶ್ರೀಪತಿಯಾದವಗೆ

ಕಪಟನಾಟಕ ಪ್ರಭು

ಗೋಪಾಲಕೃಷ್ಣಗೆ

ಒಪ್ಪಿಸಿ ಸರ್ವಸ್ವ

ಅಪ್ಪನೆ ಅಪ್ಪನೆ

ತಪ್ಪದೆ ಸಲಹೆಂದು 3

ಅನ್ನವು ಆದವಗೆ

ಅನ್ನಾದ ನೆಂಬುವಗೆ

ಅನ್ನದ ಖ್ಯಾತನಿಗೆ

ಚಿನ್ಮಯ ರೂಪಗೆ

ಬೆಣ್ಣೆಯ ಕಳ್ಳಗೆ

ಅನಾಥನಾದವಗೆ

ಕನಕಮಯನಿಗೆ

ಅನಂತರೂಪನಿಗೆ

ಉಣ್ಣದೆ ಇರುವವಗೆ

ಉಣ್ಣುತ ಉಣಿಸುವವಗೆ

e್ಞÁನಿಗಮ್ಯನಿಗೆ

e್ಞÁನ ದಾಯಕನಿಗೆ

ಗುಣತ್ರಯ ದೂರಗೆ

ಭಾನುವ ತಡೆದವಗೆ

ಆನತ ಬಂಧುವಿಗೆ

ಅನುಪಮನಾದವಗೆ

ತನುಮನ ಪ್ರೇರಿಪಗೆ

ದಾನವ ವೈರಿಗೆ

ತನ್ನಲ್ಲೆ ರಮಿಸುವನಿಗೆ

ಮನ್ಮಥ ಪಿತನಿಗೆ

ಪೆಣ್ಣಿನ ಪೊರೆದವಗೆ

ಅಣುವಿಗೆ ಅಣುವಿಹಗೆ

ಘನಕೆ ಘನ ತಮನಿಗೆ

ಕಣ್ಣಿಲ್ಲದೆ ನೋಳ್ಪ

ಉನ್ನತ ಪ್ರಭುವಿಗೆ

ಬೆನ್ನು ಬೀಳುವೆ ನಾನು

ಇನ್ನು ಕಾಯೋ ಎಂದು 4

ಹೇಯನಾಗದ ಶೃತಿ

ಗೇಯನು ಸುಜನರ

ಪ್ರೀಯನು ಸರ್ವರ

ಕಾಯುವ ಸುಂದರ

ಹಯಮುಖ ಸರ್ವದ

ಪ್ರಾಯದಿ ಮೆರೆಯುವ

ಗಾಯನ ಪ್ರಿಯನಾದ

ಮಾಯಾರಮಣ ಭಾವ

ಮಾಯೆ ಹರಿಸಿ ಮುಕ್ತಿ

ಭಾಗ್ಯ ಭಕ್ತರಿಗೀವ

ತೋಯಜಾಂಬಕ ಸುರ

ನಾಯಕರಿಗೆ ಭಕ್ತಿ

ತೋಯದಿ ಮುಳುಗಿಪ

ಶ್ರೀಯರಸಾಭಯ

ದಾಯಕ ಗುರು ಮಧ್ವ

ರಾಯರ ಪ್ರಿಯನಾದ

ಜೇಯ ಜಯಮುನಿ

ವಾಯುವಿನ ಅಂತರದಿ

ನವನೀತ ಧರಿಸಿರ್ಪ

ತಾಂಡವ ಸಿರಿಕೃಷ್ಣ

ವಿಠಲ ರಾಯನಿಗೆ

ಕಾಯ ವಾಚಮನದಿ

ಗೈಯ್ಯುವ ಸಕಲವನು

ಈಯುತ ನಮಿಸುತ

ಜೀಯನೆ ಜೀಯನೆ

ಕಾಯಯ್ಯ ಕಾಯೆಂದು 5

***