Showing posts with label ಎಂದು ಕಾಂಬೆನೊ ನಿನ್ನ ಹೇ ಶ್ರೀನಿವಾಸಾ shreeda vittala ENDU KAAMBENO NINNA HE SRINIVASA. Show all posts
Showing posts with label ಎಂದು ಕಾಂಬೆನೊ ನಿನ್ನ ಹೇ ಶ್ರೀನಿವಾಸಾ shreeda vittala ENDU KAAMBENO NINNA HE SRINIVASA. Show all posts

Tuesday, 5 October 2021

ಎಂದು ಕಾಂಬೆನೊ ನಿನ್ನ ಹೇ ಶ್ರೀನಿವಾಸಾ ankita shreeda vittala ENDU KAAMBENO NINNA HE SRINIVASA



RESTART MOBILE IF AUDIO IS NOT PLAYING  

or just scroll down for other devaranama/ CLICK-> HOME

kruti by Srida Vittala Dasaru  Karjagi Dasappa


ಎಂದು ಕಾಂಬೆನೊ ನಿನ್ನ ಹೇ ಶ್ರೀನಿವಾಸಾ ಪ


ನಗೆಮೊಗದ ನತಜನ ಬಂಧು ಬಾಬಾರೆನ್ನ ಬಿ -

ಟ್ಟಗಲದಲೆ ಮನ ಮಂದಿರದೊಳಿರು ಮುನ್ನಾದರು ಸುಪ್ರಸನ್ನ

ಮುಂದೆ ಗತಿ ಏನಯ್ಯ ಮುಕುತರ

ಹಿಂದುಳಿದವನಲ್ಲದಲೆ ತನು ಸಂ -

ಬಂಧಿಗಳ ವಶನಾಗಿ ದುರ್ವಿಷ -

ಯಾಂಧಕಾರದಿ ಮುಳುಗಿದೆನೊ ನಾ ಅ.ಪ.


ಹಲವು ಜನ್ಮದ ನೋವಾ ನಾ

ಹೇಳಿಕೊಳಲೇನೆಲವೊ ದೇವರ ದೇವಾ ನೀ -

ನಲ್ಲದಲೆ ಭೂವಲಯದೊಳಿಗಿನ್ನಾವಾ ನಂಬಿದರ ಕಾವ

ಸುಲಭರೊಳಗತಿ ಸುಲಭನೆಂಬುವ

ಅಲವಬೋಧಮತಾನುಗರು ಎನ -

ಗೊಲಿದು ಪೇಳಲು ಕೇಳಿ ನಿಶ್ಚಂ -

ಚಲದಿ ನಿನ್ನನೆ ಧೇನಿಸುವೆ ನಾ

ಕಲುಷ ಸಂಸ್ಕಾರಗಳ ವಶದಿಂ

ಹೊಲಬುಗಾಣದೆ ಹರುಷಗುಂದುವೆ

ಹೊಲೆ ಮನದ ಹರಿದಾಟ ತಪ್ಪಿಸಿ

ನೆಲೆಗೆ ನಿಲ್ಲಿಸದಿರ್ದ ಬಳಿಕಿನ್ನೆಂದು 1


ಭಾರತೀಪತಿಪ್ರೀಯಾ ಎಂದೆಂದು ಭಕುತರ

ಭಾರ ನಿನ್ನದೊ ಜೀಯಾ ಜಗವರಿಯೆ ಕರುಣಾ -

ವಾರಿಧಿಯೆ ಪಿಡಿ ಕೈಯ್ಯಾ ಫಣಿರಾಜಶಯ್ಯಾ

ತಾರಕನು ನೀನೆಂದು ತಿಳಿಯದ

ಕಾರಣದಿ ಸುಖ ದುಃಖಮಯ ಸಂ -

ಸಾರ ದುಸ್ತರ ಶರಧಿಯೊಳು ನಾ

ಪಾರಗಾಣದೆ ಪರಿದು ಪೋಪೆನೊ

ದೂರನೋಳ್ಪದು ಧರ್ಮವಲ್ಲವೊ

ದ್ವಾರಕಾಪುರನಿಲಯ ಪರಮೋ -

ದಾರ ತನುವೆಂದೆನ್ನ ಪಾಲಿಗೆ

ಬಾರದಲ್ಲದೆ ಭವವಿಮೋಚನ 2


ವಿಕಸನಾರ್ಚಿತಪಾದ ವಿಶ್ವೇಶ ಜನ್ಮಾ -

ದ್ಯಖಿಲ ಕಾರಣನಾದ ನಿರ್ದೋಷ ಸತ್ಯಾ -

ಸುಖಗುಣಾರ್ಣವ ಶ್ರೀದವಿಠಲಪ್ರಸೀದ

ಸಕಲ ಕ್ರಿಯ ಯೋಗಗಳು ತನು ಬಂ-

ಧಕವು ನಿನಗೊಪ್ಪಿಸದಿರಲು ಎನೆ

ನಿಖಿಳ ಜೀವರ ಭಿನ್ನ ನಿನ್ನಯ

ಯುಕುತಿಗೆ ನಮೊ ಎಂಬೆನಲ್ಲದೆ

ಯುಕುತ ಯುಕ್ತಿಗಳೊಂದರಿಯದ -

ರ್ಭಕನ ಬಿನ್ನಪ ಸಲಿಸಿ ನವವಿಧ

ಭಕುತಿ ಭಾಗ್ಯವ ಕೊಟ್ಟು ತವ ಸೇ -

ವಕರ ಸೇವಕನೆನಿಸದಿರ್ದೊಡೆ 3

***

Pallavi

endu kambeno ninna he srinivaasa pa


Anupallavi

nagemogada natajana bandhu baabaarenna bi -

ttagaladale mana mandiradoliru munnaadaru suprasanna

munde gati einayya mukutara

hindulidavanalladale tanu sam -

bandhijala vasanaagi durvisha -

yandhakaaradi mulugideno naa a.pa.


Charana 1

halavu janmada nova naa

helikolalenelavo devara deva nee -

nalladale bhuvalayadoliginnaavaa nambidara kaava

sulabharolagati sulabhaneMbuva

alavabodhamataānugaru ena -

golidu pelalu keli nishchaM -

chaladi ninnane dhenisuve naa

kalusha samsaagara vasadiM

holabugaanaade harushagunduve

hole manada haridaata thappisi

nelege nillisadirda balikinchendu 1


Charana 2

bhaaratepatipriyaa endendu bhakutara

bhaara ninnado jeeya jagavariye karunaa -

vaariyhe pidi kayyaa phaniraajasayya

taarakanu neenendu thiliyada

kaaranadi sukha duhkhamaya sam -

saara dustara sharadhiyolu naa

paaragaanade paridu popeno

dooranolpadu dharmavallavo

dwaarakaapuranilaya paramo -

daara tanuvendenna paalige

baaradallade bhavavimochana 2


Charana 3

vikasanaarcitapaada visvesha janmaa -

dyakhila kaarananaada nirdosha satyaa -

sukhagunaarnava sridavithalapraseeda

sakala kriya yogagalu thanu baM-

dhakavu ninagoppisadiralu enene

nikhila jeevara bhinna ninnaya

yukutigey namo embenalladava

yukuta yuktigalandariyada -

rbhakanu binnapa salisi navavidha

bhakuti bhaagyava kottu thava se -

vakara sevakanenisadirdode 3

***

Pronunciation Guide

Pronounce long vowels on endū, śrīnivāsā, and kāmbenō with a smooth, pleading cadence.

Articulate retroflex and nasal consonants clearly in words like samabandhigaḷa, durviṣayāndhakāradi, and bhavavimōcana.

Maintain an emotional, prayerful flow through devotional descriptions such as karuṇāvāridhiye and phaṇirājaśayyā.

Apply slight emphasis to spiritual surrender and humility like anātha bandhu and arbhakananu binnapa.

Conclude the composition with a serene, devoted finish on the colophon name śrīda viṭhala.

***

Summary (Kannada)

ಶ್ರೀದ ವಿಠಲ ದಾಸರ (ಕಾರ್ಜಗಿ ದಾಸಪ್ಪ) ಈ ಭಕ್ತಿಪೂರ್ವಕ ಕೃತಿಯಲ್ಲಿ, ಭಕ್ತನು ಸಂಸಾರದ ದುರ್ವಿಷಯಗಳಲ್ಲಿ ಸಿಲುಕಿ ನೊಂದಿದ್ದು, ತನ್ನ ಅಜ್ಞಾನ ಹಾಗೂ ಕಲುಷಿತ ಮನಸ್ಸಿನ ಹರಿದಾಟವನ್ನು ತಪ್ಪಿಸಿ ಶ್ರೀನಿವಾಸನ ದಿವ್ಯ ದರ್ಶನವನ್ನು ಯಾವಾಗ ಪಡೆಯಲಿ ಎಂದು ಆರ್ತನಾಗಿ ಬೇಡಿಕೊಳ್ಳುತ್ತಾನೆ. ಭಾರತೀಪತಿ ಪ್ರಿಯನಾದ, ಕರುಣಾವಾರಿಧಿಯಾದ ದ್ವಾರಕಾಪುರ ನಿಲಯನಿಗೆ ಶರಣಾಗಿ ನವವಿಧ ಭಕ್ತಿ ಭಾಗ್ಯವನ್ನು ಕರುಣಿಸುವಂತೆ ಪ್ರಾರ್ಥಿಸುವ ಭಕ್ತಿಪರವಾದ ಭಾವ ಇಲ್ಲಿದೆ.


Padyada Artha (Kannada Stanza by Stanza)

Pallavi

ಎಂದು ಕಾಂಬೆನೊ ನಿನ್ನ ಹೇ ಶ್ರೀನಿವಾಸಾ ಪ


ಅರ್ಥ: ಓ ಶ್ರೀನಿವಾಸನೇ, ನಾನು ನಿನ್ನ ದರ್ಶನವನ್ನು ಯಾವಾಗ ಪಡೆಯಲಿ?


Anupallavi

ನಗೆಮೊಗದ ನತಜನ ಬಂಧು ಬಾಬಾರೆನ್ನ ಬಿ -

ಟ್ಟಗಲದಲೆ ಮನ ಮಂದಿರದೊಳಿರು ಮುನ್ನಾದರು ಸುಪ್ರಸನ್ನ

ಮುಂದೆ ಗತಿ ಏನಯ್ಯ ಮುಕುತರ

ಹಿಂದುಳಿದವನಲ್ಲದಲೆ ತನು ಸಂ -

ಬಂಧಿಗಳ ವಶನಾಗಿ ದುರ್ವಿಷ -

ಯಾಂಧಕಾರದಿ ಮುಳುಗಿದೆನೊ ನಾ ಅ.ಪ.


ಅರ್ಥ: ಸದಾ ನಗೆಮೊಗದವನೇ, ಶರಣಾದ ಜನರಿಗೆ ಬಂಧುವೇ, ನನ್ನನ್ನು ಬಿಟ್ಟು ಅಗಲದೆ ನನ್ನ ಮನವೆಂಬ ಮಂದಿರದಲ್ಲಿ ನೆಲೆಸಿ ಸುಪ್ರಸನ್ನನಾಗು. ನನಗೆ ಮುಂದಿನ ಗತಿಯೇನು? ಮುಕ್ತರ ಸಾಲಿನಲ್ಲಿ ಹಿಂದುಳಿಯದಂತೆ, ಈ ಶರೀರ ಸಂಬಂಧಿಗಳ ವಶನಾಗಿ ದುರ್ವಿಷಯಗಳೆಂಬ ಅಂಧಕಾರದಲ್ಲಿ ಮುಳುಗಿಹೋಗಿದ್ದೇನೆ.


Charana 1

ಹಲವು ಜನ್ಮದ ನೋವಾ ನಾ

ಹೇಳಿಕೊಳಲೇನೆಲವೊ ದೇವರ ದೇವಾ ನೀ -

ನಲ್ಲದಲೆ ಭೂವಲಯದೊಳಿಗಿನ್ನಾವಾ ನಂಬಿದರ ಕಾವ

ಸುಲಭರೊಳಗತಿ ಸುಲಭನೆಂಬುವ

ಅಲವಬೋಧಮತಾನುಗರು ಎನ -

ಗೊಲಿದು ಪೇಳಲು ಕೇಳಿ ನಿಶ್ಚಂ -

ಚಲದಿ ನಿನ್ನನೆ ಧೇನಿಸುವೆ ನಾ

ಕಲುಷ ಸಂಸ್ಕಾರಗಳ ವಶದಿಂ

ಹೊಲಬುಗಾಣದೆ ಹರುಷಗುಂದುವೆ

ಹೊಲೆ ಮನದ ಹರಿದಾಟ ತಪ್ಪಿಸಿ

ನೆಲೆಗೆ ನಿಲ್ಲಿಸದಿರ್ದ ಬಳಿಕಿನ್ನೆಂದು 1


ಅರ್ಥ: ಹಲವು ಜನ್ಮಗಳ ನನ್ನ ನೋವನ್ನು ಯಾರಿಗೆಂದು ಹೇಳಿಕೊಳ್ಳಲಿ? ದೇವರ ದೇವನೇ, ನೀನಲ್ಲದೆ ಈ ಭೂಮಿಯಲ್ಲಿ ನಂಬಿದವರನ್ನು ಕಾಪಾಡುವವರು ಯಾರು? ಮಧ್ವಮತಾನುಯಾಯಿಗಳು ನೀನು ಸುಲಭರಲ್ಲಿ ಅತಿ ಸುಲಭನೆಂದು ಹೇಳಿರುವುದನ್ನು ಕೇಳಿ ನಿಶ್ಚಂಚಲವಾಗಿ ನಿನ್ನನ್ನೇ ಧ್ಯಾನಿಸುತ್ತೇನೆ. ಆದರೆ ಪಾಪ ಸಂಸ್ಕಾರಗಳ ವಶದಿಂದ ಸರಿಯಾದ ದಾರಿ ಕಾಣದೆ ತಲ್ಲಣಿಸುತ್ತೇನೆ. ನನ್ನ ಈ ಹೊಲೆ ಮನದ ಚಂಚಲತೆಯನ್ನು ತಪ್ಪಿಸಿ ನಿನ್ನ ಚರಣಗಳಲ್ಲಿ ನೆಲೆಗೊಳಿಸು.


Charana 2

ಭಾರತೀಪತಿಪ್ರೀಯಾ ಎಂದೆಂದು ಭಕುತರ

ಭಾರ ನಿನ್ನದೊ ಜೀಯಾ ಜಗವರಿಯೆ ಕರುಣಾ -

ವಾರಿಧಿಯೆ ಪಿಡಿ ಕೈಯ್ಯಾ ಫಣಿರಾಜಶಯ್ಯಾ

ತಾರಕನು ನೀನೆಂದು ತಿಳಿಯದ

ಕಾರಣದಿ ಸುಖ ದುಃಖಮಯ ಸಂ -

ಸಾರ ದುಸ್ತರ ಶರಧಿಯೊಳು ನಾ

ಪಾರಗಾಣದೆ ಪರಿದು ಪೋಪೆನೊ

ದೂರನೋಳ್ಪದು ಧರ್ಮವಲ್ಲವೊ

ದ್ವಾರಕಾಪುರನಿಲಯ ಪರಮೋ -

ದಾರ ತನುವೆಂದೆನ್ನ ಪಾಲಿಗೆ

ಬಾರದಲ್ಲದೆ ಭವವಿಮೋಚನ 2


ಅರ್ಥ: ಮುಖ್ಯಪ್ರಾಣದೇವರ (ಭಾರತೀಪತಿಯ) ಪ್ರೀಯನೇ, ಭಕ್ತರ ಭಾರವೆಲ್ಲವೂ ನಿನ್ನದೇ ಎಂಬುದು ಜಗತ್ತಿಗೆ ತಿಳಿಯಿತಲ್ಲವೇ? ಕರುಣಾಸಾಗರನೇ, ಆದಿಶೇಷನ ಮೇಲೆ ಶಯನಿಸಿದವನೇ, ನನ್ನ ಕೈಹಿಡಿದು ನಡೆಸು. ನೀನೇ ಉದ್ಧಾರಕನೆಂದು ತಿಳಿಯದೆ ಈ ಸುಖ-ದುಃಖಮಯವಾದ ಸಂಸಾರವೆಂಬ ದಾಟಲಾಗದ ಸಮುದ್ರದಲ್ಲಿ ಮುಳುಗಿ ತೊಳಲಾಡುತ್ತಿದ್ದೇನೆ. ನನ್ನನ್ನು ದೂರವಿಡುವುದು ಧರ್ಮವಲ್ಲ; ದ್ವಾರಕಾಪುರದಲ್ಲಿ ನೆಲೆಸಿರುವ ಪರಮೋದಾರನೇ, ಬಂದು ನನ್ನ ಭವಬಂಧನವನ್ನು ಬಿಡಿಸು.


Charana 3

ವಿಕಸನಾರ್ಚಿತಪಾದ ವಿಶ್ವೇಶ ಜನ್ಮಾ -

ದ್ಯಖಿಲ ಕಾರಣನಾದ ನಿರ್ದೋಷ ಸತ್ಯಾ -

ಸುಖಗುಣಾರ್ಣವ ಶ್ರೀದವಿಠಲಪ್ರಸೀದ

ಸಕಲ ಕ್ರಿಯ ಯೋಗಗಳು ತನು ಬಂ-

ಧಕವು ನಿನಗೊಪ್ಪಿಸದಿರಲು ಎನೆ

ನಿಖಿಳ ಜೀವರ ಭಿನ್ನ ನಿನ್ನಯ

ಯುಕುತಿಗೆ ನಮೊ ಎಂಬೆನಲ್ಲದೆ

ಯುಕುತ ಯುಕ್ತಿಗಳೊಂದರಿಯದ -

ರ್ಭಕನ ಬಿನ್ನಪ ಸಲಿಸಿ ನವವಿಧ

ಭಕುತಿ ಭಾಗ್ಯವ ಕೊಟ್ಟು ತವ ಸೇ -

ವಕರ ಸೇವಕನೆನಿಸದಿರ್ದೊಡೆ 3


ಅರ್ಥ: ಅತಿ ಸುಂದರವಾದ ಪಾದವುಳ್ಳವನೇ, ವಿಶ್ವೇಶನೇ, ಜನ್ಮಾದಿ ಸಕಲ ಕಾರಣನಾದವನೇ, ನಿರ್ದೋಷಿಯೇ, ಸತ್ಯ ಸುಖಗುಣಗಳ ಸಮುದ್ರವೇ, ಶ್ರೀದ ವಿಠಲನೇ ಪ್ರಸನ್ನನಾಗು. ಸಕಲ ಕರ್ಮಗಳು ತನುಬಂಧಕವಾಗುತ್ತವೆ ಎಂದು ತಿಳಿದು ಅವುಗಳನ್ನು ನಿನಗೆ ಅರ್ಪಿಸದಿದ್ದರೆ ಹೇಗೆ? ಜೀವರು ನಿನ್ನಿಂದ ಭಿನ್ನರೆಂಬ ತತ್ವಕ್ಕೆ ನಮಿಸುತ್ತೇನೆ. ಜ್ಞಾನ-ಯುಕ್ತಿಗಳೊಂದೂ ತಿಳಿಯದ ಈ ಮಗುವಿನ ಪ್ರಾರ್ಥನೆಯನ್ನು ಮನ್ನಿಸಿ, ನವವಿಧ ಭಕ್ತಿಯ ಭಾಗ್ಯವನ್ನು ಕರುಣಿಸಿ ನಿನ್ನ ಸೇವಕರ ಸೇವಕನನ್ನಾಗಿ ಮಾಡಿಕೋ.

***

Summary (English)

In this soulful composition by Srida Vittala Dasaru (Karjagi Dasappa), the devotee expresses deep repentance for being caught in the illusions and darkness of worldly desires. He prays to Lord Srinivasa, the consort of Bhudevi and beloved of Mukhya Prana, to steady his wandering mind, rescue him from the ocean of samsara, and grant him the fortune of true devotion and servitude to His devotees.


Meaning (English Transliterated Stanza with English Meaning)

Pallavi

endu kambeno ninna he srinivaasa pa


Meaning: When shall I behold you, O Lord Srinivasa?


Anupallavi

nagemogada natajana bandhu baabaarenna bi -

ttagaladale mana mandiradoliru munnaadaru suprasanna


Meaning: O ever-smiling protector of the surrendered, do not leave me; abide forever within the temple of my mind and be graciously pleased.


Charana 1

halavu janmada nova naa

helikolalenelavo devara deva nee -

nalladale bhuvalayadoliginnaavaa nambidara kaava


Meaning: To whom can I pour out the sorrows of my many births, O God of gods? Except for You, who is there in this world to protect those who trust in Him?


Charana 2

bhaaratepatipriyaa endendu bhakutara

bhaara ninnado jeeya jagavariye karunaa -

vaariyhe pidi kayyaa phaniraajasayya


Meaning: O beloved of the Lord of Bharati (Mukhya Prana), the burden of devotees is entirely Yours, as the world knows. O ocean of compassion, reclining on the serpent king, take my hand and guide me!


Charana 3

vikasanaarcitapaada visvesha janmaa -

dyakhila kaarananaada nirdosha satyaa -

sukhagunaarnava sridavithalapraseeda


Meaning: O Lord whose feet are worshipped, Supreme Lord, the prime cause of creation, faultless one, ocean of true bliss, O Srida Vithala, be gracious unto me!

***