Showing posts with label ಕಡೆಗೋಲ ತಾರೆನ್ನ ಚಿನ್ನವೆ ಮೊಸ ರೊಡೆದರೆ ಬೆಣ್ಣೆ srisrinivasa. Show all posts
Showing posts with label ಕಡೆಗೋಲ ತಾರೆನ್ನ ಚಿನ್ನವೆ ಮೊಸ ರೊಡೆದರೆ ಬೆಣ್ಣೆ srisrinivasa. Show all posts

Thursday, 25 February 2021

ಕಡೆಗೋಲ ತಾರೆನ್ನ ಚಿನ್ನವೆ ಮೊಸ ರೊಡೆದರೆ ಬೆಣ್ಣೆ ankita srisrinivasa

ಶ್ರೀಮತಿ ಸರಸ್ವತೀಬಾಯಿಯವರ ಕೃತಿ


 ರಾಗ -  :  ತಾಳ - 


ಕಡೆಗೋಲ ತಾರೆನ್ನ ಚಿನ್ನವೆ ಮೊಸ

ರೊಡೆದರೆ ಬೆಣ್ಣೆ ಬಾರದೊ ಮುದ್ದು ಕೃಷ್ಣಯ್ಯ ll ಪ ll


ಅಣ್ಣ ಬಲರಾಮ ಚಿಣ್ಣರ ಸಹಿತಾಗಿ 

ಬೆಣ್ಣೆ ಹಣ್ಣನು ಮೆಲುವಿಯಂತೆ

ಯನ್ನಣ್ಣನೆ ಸಣ್ಣವನಾಗಿ ಎನ್ನೊಡನಾಟವೆ 

ಕಣ್ಣಿಗೆ ಕಾಡಿಗೆ ಇಡುವೆ ಬಾ ರಂಗಯ್ಯ ll ೧ ll


ಹಸುರಂಗಿ ಕೊಡಿಸುವೆ ಹಸುಳೆ ಬಾ ಕಂದನೆ 

ಹೊಸಪರಿಯಾಭರಣಗಳನಿಡುವೆ

ಹಸನಾದ ಹಸುವಿನ ತುಪ್ಪದ ದೋಸೆಯ

ಹಸುಳೆ ನಿನಗಾರೋಗಣೆಗೆ ಹೊತ್ತಾಯಿತೊ ll ೨ ll


ಪಡೆದ ಜನನಿಯಲ್ಲೆ ಎನ್ನೊಡೆಯ ಶ್ರೀ ಶ್ರೀನಿವಾಸ ನಿನ್ನ

ಕಡೆಹಾಯಿಸೊ ಕಡಗೋಲನಿ ತ್ತು ಎನ್ನ

ವಡನೆ ಪಿಡಿದು ಗೋಪಿ ಕಡುಮುದ್ದು ರಂಗನ 

ಬಿಡದೆತ್ತಿ ಮುದ್ದಿಸಿ ಸಡಗರದಿಂದಲಿ ll ೩ ll

***