ಶ್ರೀಮತಿ ಸರಸ್ವತೀಬಾಯಿಯವರ ಕೃತಿ
ರಾಗ - : ತಾಳ -
ಕಡೆಗೋಲ ತಾರೆನ್ನ ಚಿನ್ನವೆ ಮೊಸ
ರೊಡೆದರೆ ಬೆಣ್ಣೆ ಬಾರದೊ ಮುದ್ದು ಕೃಷ್ಣಯ್ಯ ll ಪ ll
ಅಣ್ಣ ಬಲರಾಮ ಚಿಣ್ಣರ ಸಹಿತಾಗಿ
ಬೆಣ್ಣೆ ಹಣ್ಣನು ಮೆಲುವಿಯಂತೆ
ಯನ್ನಣ್ಣನೆ ಸಣ್ಣವನಾಗಿ ಎನ್ನೊಡನಾಟವೆ
ಕಣ್ಣಿಗೆ ಕಾಡಿಗೆ ಇಡುವೆ ಬಾ ರಂಗಯ್ಯ ll ೧ ll
ಹಸುರಂಗಿ ಕೊಡಿಸುವೆ ಹಸುಳೆ ಬಾ ಕಂದನೆ
ಹೊಸಪರಿಯಾಭರಣಗಳನಿಡುವೆ
ಹಸನಾದ ಹಸುವಿನ ತುಪ್ಪದ ದೋಸೆಯ
ಹಸುಳೆ ನಿನಗಾರೋಗಣೆಗೆ ಹೊತ್ತಾಯಿತೊ ll ೨ ll
ಪಡೆದ ಜನನಿಯಲ್ಲೆ ಎನ್ನೊಡೆಯ ಶ್ರೀ ಶ್ರೀನಿವಾಸ ನಿನ್ನ
ಕಡೆಹಾಯಿಸೊ ಕಡಗೋಲನಿ ತ್ತು ಎನ್ನ
ವಡನೆ ಪಿಡಿದು ಗೋಪಿ ಕಡುಮುದ್ದು ರಂಗನ
ಬಿಡದೆತ್ತಿ ಮುದ್ದಿಸಿ ಸಡಗರದಿಂದಲಿ ll ೩ ll
***