Showing posts with label ಕೃಷ್ಣ ಎನಗೆ ಬಂದರಿಷ್ಟವ ಕಳೆದು vijaya vittala. Show all posts
Showing posts with label ಕೃಷ್ಣ ಎನಗೆ ಬಂದರಿಷ್ಟವ ಕಳೆದು vijaya vittala. Show all posts

Wednesday 16 October 2019

ಕೃಷ್ಣ ಎನಗೆ ಬಂದರಿಷ್ಟವ ಕಳೆದು ankita vijaya vittala

ಕೃಷ್ಣ ಎನಗೆ ಬಂದರಿಷ್ಟವ ಕಳೆದು ನಿನ್ನ
ನಿಷ್ಠೆಯಲಿ ಇರುವಂತೆ ಇಷ್ಟೆ ಮಾತುರವೀಯೋ

ನಿರ್ದೋಷ ಗುಣವಾರುಧಿ
ನಿರ್ಧಾರವಾಗಿ ನುಡಿವೆ
ಸಿದ್ಧಾಂತ ಮತದಲಿ ಪೊದ್ದಿಪದೆ ಸಾಕು ||1||

ಅಜ ಭವಾದ್ಯರು ನಿನ್ನ
ಭಜಿಪರಾರು ದೋಷ
ವ್ರಜದ ಮಾನವ ತಿಳಿದು ಭಜಿಸಬಲ್ಲೆನೆ ದೇವಾ ||2||

ಮಧ್ವ ಸರೋವರದಲ್ಲಿ
ಇದ್ದು ಪೂಜೆಯಗೊಂಬ
ಮುದ್ದು ವಿಜಯವಿಠಲ ಬಿದ್ದೆ ನಿನ್ನಯ ಪದಕೆ ||3||
*********

ವಿಜಯದಾಸ
ಕೃಷ್ಣ ಎನಗೆ ಬಂದರಿಷ್ಟವ ಕಳೆದು ನಿನ್ನ
ನಿಷ್ಠೆಯಲಿ ಇರುವಂತೆ ಇಷ್ಟೆ ಮಾತುರವೀಯೋ ಪ

ನಿರ್ದೋಷ ಗುಣವಾರುಧಿ
ನಿರ್ಧಾರವಾಗಿ ನುಡಿವೆ
ಸಿದ್ಧಾಂತ ಮತದಲಿ ಪೊದ್ದಿಪದೆ ಸಾಕು 1

ಅಜ ಭವಾದ್ಯರು ನಿನ್ನ
ಭಜಿಪರಾರು ದೋಷ
ಮಾನವ ತಿಳಿದು ಭಜಿಸಬಲ್ಲೆನೆ ದೇವಾ 2

ಮಧ್ವ ಸರೋವರದಲ್ಲಿ
ಇದ್ದು ಪೂಜೆಯಗೊಂಬ

ಮುದ್ದು ವಿಜಯವಿಠಲ ಬಿದ್ದೆ ನಿನ್ನಯ ಪದಕೆ 3
*********