Showing posts with label ಕರವ ಪಿಡಿ ಗುರುರಾಯ ಶಿರಬಾಗಿ ಬೇಡುವೆ ಪೊರೆಯೊ ಸತ್ಕವಿಗೇಯ shyamasundara. Show all posts
Showing posts with label ಕರವ ಪಿಡಿ ಗುರುರಾಯ ಶಿರಬಾಗಿ ಬೇಡುವೆ ಪೊರೆಯೊ ಸತ್ಕವಿಗೇಯ shyamasundara. Show all posts

Wednesday 1 September 2021

ಕರವ ಪಿಡಿ ಗುರುರಾಯ ಶಿರಬಾಗಿ ಬೇಡುವೆ ಪೊರೆಯೊ ಸತ್ಕವಿಗೇಯ ankita shyamasundara

 ..

ಕರವ ಪಿಡಿ ಗುರುರಾಯ | ಶಿರಬಾಗಿ ಬೇಡುವೆ

ಪೊರೆಯೊ ಸತ್ಕವಿಗೇಯ | ನೆರೆನಂಬಿದೆನು ನೀ

ಮರೆಯದಿರು ಶುಭಕಾಯ | ಹೇ ಸೂರಿವರ್ಯ ಪ


ಉರಗಕೇತನ ಮೊರೆಯ ಲಾಲಿಸಿ

ತರಣಿಜನಿಗೆರಡೊಂದು ಯುಗದಲಿ

ಧುರದಿ ಸಾರಥಿಯಾಗಿ ಸ್ಯಂದನ

ಭರದಿ ನಡೆಸಿದ ಪರಮ ಪುರುಷನೆ ಅ.ಪ


ಶರಣು ಜನ ಸುರಧೇನು | ಹೇ ತಾತ ನೀ

ಮೂರೆರಡು ಜನುಮಗಳನ್ನು | ಕಳೆದು ಮ

ತ್ತುರುವ ಅವತಾರವನು ಭಕ್ತಿಪೂರ್ವಕ

ಪಿರಿಯರಾಜ್ಞದಿ ನೀನು ಪೂರೈಸಲಿನ್ನು

ಧರಣಿಯೊಳಗವತರಿಸಿ ನರರಿಗೆ

ಅರಿಯದಂದದಿ ಹರಿಯ ದಿಸೆಯೋಳ್

ಹರಿಯ ಸ್ಮರಿಸುತ ಚರಿಪ ಧೊರೆ ತವ

ಚರಣ ದರುಶನಗರೆದು ಕರುಣದಿ 1


ಬಿಡಿಸೊ ಎನ್ನ ಕ್ಲೇಶ ತಡಮಾಡದಲೆ ನೀ

ಕಡಿಯೊ ಈ ಭವ ಪಾಶ | ದೃಢಮನವ ಕೊಡು ನಿ

ನ್ನಡಿಗಳಲಿ ನಿರ್ದೋಷ | ನುಡಿಯಲಾಲಿಸಿ

ಬಿಡದೆ ಮಾಡುಪದೇಶ ಪೊಡವೀಶದಾಸ

ಒಡೆಯನೇ ನೀನಡಗಿ ಎನ್ನನು

ಕಡೆಗೆ ನೋಡಲು ಪಡೆದ ಜನನಿಯು

ಪಿಡಿದು ಬಾಲನ ಮಡುವಿನೋಳ್ ತಾ

ಬಿಡುವ ತೆರ ತವ ನಡತೆ ಎನಿಪುದು 2


ಮಂದನಾನಿಜವಯ್ಯ | ಸಂದೇಹವಿಲ್ಲದೆ

ಕುಂದು ಎಣಿಸದೆ ಜೀಯ ಬಂದೆನ್ನ ಮನದಲಿ

ನಿಂದು ನೀಸಲಹಯ್ಯ ವಂದಿಪೆನು ಶ್ರೀ ಪು

ರಂದರಾರ್ಯರ ಪ್ರೀಯ ಆನಂದ ನಿಲಯ 3

***