ಕಾಖಂಡಕಿ ಶ್ರೀ ಕೃಷ್ಣದಾಸರು
ಶರಣು ಶರಣು ಶ್ರೀ ದತ್ತಾತ್ರೇಯಾ
ಶರಣು ಸಕಲ ಭುವನಾಶ್ರಯಾ
ಶರಣೆಂಬೆ ಸಿಂಹಾಚಲ ನಿಲಯಾ
ಸುರಜನ ರೇಯಾ ಸಲಹಯ್ಯಾ ll 1 ll
ವನರುಹ ಸಂಭವ ತ್ರಿಲೋಚನ
ಸನಕಾದಿ ಮುನಿ ವಂದಿತ ಚರಣ
ಜನವನ ವಿಜನ ವ್ಯಾಪಕ ಘನ
ಅನಸೂಯಾ ನಂದನ ಯೋಗೀಶಾ ll 2 ll
ತತ್ವಯೋಗ ಸಿದ್ಧಿ ಬುದ್ಧಿ ದಾತಾರಾ
ಸತ್ವ ಗುಣಾಲಂ ಕೃತ ಜ್ಞಾನ ಸಾಗರಾ
ಸತ್ಯ ಸನಾತನೇ ಮುನಿ ದಿಗಂಬರಾ
ಭಕ್ತ ಸಹಕಾರಾ ಅವಧೂತಾ ll 3 ll
ಕಂದರ್ಪ ಕೋಟಿ ಸುಂದರಾಕಾರಾ
ಹೊಂದಿದಾಭರಣಾನೇಕ ಶೃಂಗಾರಾ
ಇಂದು ಸೂರ್ಯಾನಳ ತೇಜ ವ್ಯಾಪಾರಾ
ಎಂದೆಂದೆಚ್ಚರಾ ಕಂಡು ನಿನ್ನಾ ll 4 ll
ಮಂದಮತಿ ಬಾಲನ ಬಿನ್ನಾಹದ ಸ್ತುತಿ
ಬಂದು ಅರ್ಪಿಸಿಕೋದುದಿ ಶ್ರೀಪತಿ
ಇಂದು ಮೊರೆ ಹೊಕ್ಕೆನು ಅನನ್ಯಾಗತಿ
ತಂದೇ ಮಹಿಪತಿ ಸುತ ಸ್ವಾಮೀ ll 5 ll
***
ಶರಣು ಶರಣು ಶ್ರೀ ದತ್ತಾತ್ರೇಯಾ ಶರಣು ಸಕಲಾ ಭುವನಾಶ್ರಯಾ ಶರಣೆಂಬೆ ಸಿಂಹಾಚಲ ನಿಲಯಾ ಸುರಜನ ರೇಯಾ ಸಲಹಯ್ಯಾ 1
ವನರುಹ ಸಂಭವ ತ್ರಿಲೋಚನ ಸನಕಾದಿ ಮುನಿ ವಂದಿತ ಚರಣ ಜನವನ ವಿಜನ ವ್ಯಾಪಕ ಘನ ಅನಸೂಯಾ ನಂದನ ಯೋಗೀಶಾ 2
ತತ್ವಯೋಗ ಸಿದ್ಧಿ ಬುದ್ಧಿ ದಾತಾರಾ ಸತ್ವ ಗುಣಾಲಂ ಕೃತ ಜ್ಞಾನ ಸಾಗರಾ ಸತ್ಯ ಸನಾತನೇ ಮುನಿ ದಿಗಂಬರಾ ಭಕ್ತ ಸಹಕಾರಾ ಅವಧೂತಾ 3
ಕಂದರ್ಪ ಕೋಟಿ ಸುಂದರಾಕಾರಾ ಹೊಂದಿದಾಭರಣಾನೇಕ ಶೃಂಗಾರಾ ಇಂದು ಸೂರ್ಯಾನಳ ತೇಜ ವ್ಯಾಪಾರಾ ಎಂದೆಂದೆಚ್ಚರಾ ಕಂಡು ನಿನ್ನಾ 4
ಮಂದಮತಿ ಬಾಲನ ಬಿನ್ನಾಹದ ಸ್ತುತಿ ಬಂದು ಅರ್ಪಿಸಿಕೋ ದುದಿ ಶ್ರೀಪತಿ ಇಂದು ಮೊರೆ ಹೊಕ್ಕೆನು ಅನನ್ಯಾಗತಿತಂದೇ ಮಹಿಪತಿ ಸುತ ಸ್ವಾಮೀ 5
***