Showing posts with label ಚಂದ್ರಾ ಧರೆಯೊಳು ಮೂಡಿದಾ ಪ್ರಹ್ಲಾದನೆಂಬ ಚಂದ್ರಾ kadarundalageesha vyasaraja stutih. Show all posts
Showing posts with label ಚಂದ್ರಾ ಧರೆಯೊಳು ಮೂಡಿದಾ ಪ್ರಹ್ಲಾದನೆಂಬ ಚಂದ್ರಾ kadarundalageesha vyasaraja stutih. Show all posts

Monday 2 August 2021

ಚಂದ್ರಾ ಧರೆಯೊಳು ಮೂಡಿದಾ ಪ್ರಹ್ಲಾದನೆಂಬ ಚಂದ್ರಾ ankita kadarundalageesha vyasaraja stutih

ವ್ಯಾಸರಾಯರು

ಚಂದ್ರಾ ಧರೆಯೊಳು ಮೂಡಿದಾ

ಪ್ರಹ್ಲಾದನೆಂಬ ಚಂದ್ರಾ ಪ


ಹೊಂದಿದವರ ಹೃದಯಾಂಧಕಾರನೀಗುವ ಗುಣ-

ಸಾಂದ್ರ ವ್ಯಾಸರಾಜೇಂದ್ರನೆಂಬುವ ಅ.ಪ.


ವಿಕಸಿತಸತ್ಕುಮುದಕೆ ಬಂಧೂ ಖಳ

ಮುಖಾರವಿಂದವಳಿದು ಕೊಂದೂ

ಸುಖದಿ ಕುಳಿವ ಬುಧಚಕೋರ ತತ್ವ

ಪ್ರಕಾಶಕರ ಚಂದ್ರಿಕಾಪೂರ್ಣನೆಂಬ 1


ಹೇಯಮತಗಳೆಲ್ಲವ ಮುರಿದೂ ಬಲು

ಬಾಯಿಬಾರದೆ ನಿಲ್ಲಲು ಜರಿದೂ

ಮಾಯಿಚೋರರು ಪಲಾಯನಗೈಯಲು

ನ್ಯಾಯಾಮೃತಮಯ ವೃಷ್ಟಿ ಕರೆಸಿದಾ 2


ಕಂಡೂ ಗೋಪಾಲಕೃಷ್ಣನ ಪದವ ಕದ-

ರುಂಡಲಿಗೀಶ ಭಕ್ತನಾಮೋದವ

ಕೊಂಡು ಭೂಮಂಡಲವ ಪಂಡಿತ ಜನಮನ

ತಾಂಡವವಾಡಿದ ತರ್ಕತಾಂಡವ ಮಾಡಿದ 3

***