Showing posts with label ಗುರುರಾಘವೇಂದ್ರ ನೀ ಕರುಣಿಸಿ ನೋಡಬಾರದೆ raghunatha vittala. Show all posts
Showing posts with label ಗುರುರಾಘವೇಂದ್ರ ನೀ ಕರುಣಿಸಿ ನೋಡಬಾರದೆ raghunatha vittala. Show all posts

Thursday, 25 February 2021

ಗುರುರಾಘವೇಂದ್ರ ನೀ ಕರುಣಿಸಿ ನೋಡಬಾರದೆ ankita raghunatha vittala

ಕಲ್ಲೂರು ತಮ್ಮಣ್ಣ ದಾಸರ ಕೃತಿ


 ಗುರುರಾಘವೇಂದ್ರ ನೀ ಕರುಣಿಸಿ ನೋಡಬಾರದೆ l 

ಮೊರೆ ಯಾರಿಗಿಡಲ್ಯೋ ನಾ ಕರುಣಾಶರಧೆ ll ಪ ll


ಸ್ಮರಿಸಿದವರ ಪೊರೆವೆನೆಂದು ನಿನ್ನ ಬಿರಿದೆ l

ವರ ಶರಣ ಕಲ್ಪತರುವೆ 

ಯೆನ್ನ ಯಾಕೆ ಮರದೆ ll ೧ ll


ಕರಮುಗಿದು ನಮಿಸಿ ನಿನಗೆ ಬಾಯಿ ತೆರೆದೆ ಇದು l

ಸರಿಯೆ ನಿನ್ನ ಮನಸು ಲೇಶವಾದರು ಮರುಗದೆ ll ೨ ll


ನಿರುತ ಎನ್ನ ಅವಗುಣಗಳನ್ನು ಮನಕೆ ತಾರದೆ ಬಂದು l

ಪೊರೆವ ರಘುನಾಥವಿಟ್ಠಲ ಕೃಪೆಯು ಬಾರದೆ ll ೩ ll

***