Showing posts with label ಹೊಡೆಯಿರೋ ನಗಾರಿ ಗಡಗಡನೆ ಮೂರು ಬಾರಿ gururama vittala. Show all posts
Showing posts with label ಹೊಡೆಯಿರೋ ನಗಾರಿ ಗಡಗಡನೆ ಮೂರು ಬಾರಿ gururama vittala. Show all posts

Saturday 19 June 2021

ಹೊಡೆಯಿರೋ ನಗಾರಿ ಗಡಗಡನೆ ಮೂರು ಬಾರಿ ankita gururama vittala

 ಶ್ರೀ ಗುರುರಾಮವಿಠಲ ದಾಸರ ರಚನೆ 

ಹೊಡೆಯಿರೋ ನಗಾರಿ  ಗಡಗಡನೆ ಮೂರು ಬಾರಿ    


ದೃಢಭಕ್ತ ಸಮೂಹವ ಸಿರಿಯೊಡೆಯನು ಕೈಬಿಡನೆಂದು   ಅ.ಪ


ವಿಧಿಸೃಷ್ಟಿಯೊಳಿಲ್ಲದರೂ-

ಪದಿ ಬಂದು ನಖದಿ ಅಸುರನ

ಉದರ ಬಗೆದು ಕರುಳ ತೆಗೆದು

ಮುದದಿ ಗಳದಿ ಧರಿಸಿದನೆಂದು 

1

ಪರರು ತನ್ನ ಹಿಂಸೆಗೈ

ದರು ಸಹಿಸಿ ಸಮಾಧಾನದಿ

ಸಿರಿಯರಸನ ನೆನೆವಗೆ ಭಯ

ವಿರದಿರದಿರದಿರದೆಂದು 

2

ದ್ವೇಷಿಗಳನುದಿನ ಯೋಚಿಪ

ಮೋಸಗಳನು ತಿಳಿಯುತ ಲ-

ಕ್ಷ್ಮೀಶನು ಪರಿಹರಿಸಿ ತನ್ನ

ದಾಸರಿಗೊಶವಾಗುವನೆಂದು 

3

ಖಳಜನರ ಮರ್ದಿಸುತ

ಜಲಜನಾಭ ಮೂಜಗದ

ಒಳಹೊರಗೂ ವ್ಯಾಪಿಸುತ

ತಿಳಿಯಗೊಡನು ಸತ್ಯವಿದೆಂದು 

4

ಕಾಮಾದಿಗಳನು ಗೆದ್ದು ಮ-

ಹಾಮಹಿಮರೆನಿಸುವರ ಯೋಗ-

ಕ್ಷೇಮವನ್ನು ವಹಿಸಿಹ ಗುರು-

ರಾಮವಿಠಲ ನರಹರಿಯೆಂದು 

5

***