Showing posts with label ರಾಘವೇಂದ್ರ ಗುರುರಾಯರಂಘ್ರಿ ಕಮಲಾರಾಧಿಸಿರೋ ankita shreesha vittala RAGHAVENDRA GURURAYARANGHRI KAMALAARADHISIRO. Show all posts
Showing posts with label ರಾಘವೇಂದ್ರ ಗುರುರಾಯರಂಘ್ರಿ ಕಮಲಾರಾಧಿಸಿರೋ ankita shreesha vittala RAGHAVENDRA GURURAYARANGHRI KAMALAARADHISIRO. Show all posts

Friday 27 December 2019

ರಾಘವೇಂದ್ರ ಗುರುರಾಯರಂಘ್ರಿ ಕಮಲಾರಾಧಿಸಿರೋ ankita shreesha vittala RAGHAVENDRA GURURAYARANGHRI KAMALAARADHISIRO

Audio by Mrs. Nandini Sripad

ಶ್ರೀ ಹುಂಡೆಕಾರ ದಾಸರಾಯರ ಕೃತಿ 
 (ಶ್ರೀಶವಿಠಲ ಅಂಕಿತ) 

 ರಾಗ ಜಂಜೂಟಿ              ಆದಿತಾಳ 

ರಾಘವೇಂದ್ರ ಗುರುರಾಯರಂಘ್ರಿ 
ಕಮಲಾರಾಧಿಸಿರೋ ವಿಮಲಾ ॥ ಪ ॥

ಯತಿವರ ಶ್ರೀಸುಧೀಂದ್ರ ಕರಜಾತಾ । 
ಕ್ಷಿತಿ ಸುರಯತಿ ಈತ ।
ಸ್ತುತಿಪರಘ ನಿಮಿಷದೊಳು ನಿವಾರಿಸುವಾ । 
ಸುಖವನು ತೋರಿಸುವ ।
ಶ್ರುತಿಸ್ಮೃತಿ ತತಿ ಸಮ್ಮತವಾಗಿ ಗ್ರಂಥ । 
ರಚಿಸಿದ ಧೀಮಂತ ॥ 1 ॥

ಮಧ್ವ ಸುಮತ ದುಗ್ದಾಬ್ಧಿಗೆ ಉಡುರಾಜಾ । 
ತರಣಿ ಸಮತೇಜಾ ।
ಅದ್ವೈತ ಘೋರಾರಣ್ಯಕೆ ದಾವಾ । 
ಸಜ್ಜನರ ಕಾವಾ ।
ಸದ್ವೈಷ್ಣವರಿಗೆ ಸತತ ಸುಧಾಕರವಾ । 
ಕರವಿಡಿದು ಮೆರೆವಾ ।
ಉದ್ಯದ್ಭವಿ ಸಮ ಬುದ್ಧಿ ಶಾಲ್ಯನೀತಾ । 
ಜಗದೊಳಗೆ ಪ್ರಖ್ಯಾತಾ ॥ 2 ॥

ವರಹಜ ತೀರದಿ ಸ್ಥಿರದಲ್ಲಿ ನಿಂದು । 
ಕರದಲ್ಲಿಗೆ ಬಂದು ।
ಸ್ಮರಿಸುವ ಜನರಿಗೆ ಸುಖಕರನೀತಾ । 
ಮಿಥ್ಯಲ್ಲವು ಸತ್ಯಾ ।
ಕುರುಡ ಕಿವುಡ ಮೂಕರ ಮನದಭೀಷ್ಟಾ । 
ಕೊಡುವಲಿ ಬಹು ಶ್ರೇಷ್ಠ ।
ಧೊರೆ ಶ್ರೀಶವಿಟ್ಠಲನ ಶರಣಾಗ್ರಜನೀತ । 
ಸುಫಲ ಪ್ರದಾತಾ ॥ 3 ॥
***********