Showing posts with label ಕೃಷ್ಣ ಎಂಥಾದೋ ನಿನ್ನ ಕರುಣಿ mahipati. Show all posts
Showing posts with label ಕೃಷ್ಣ ಎಂಥಾದೋ ನಿನ್ನ ಕರುಣಿ mahipati. Show all posts

Wednesday, 11 December 2019

ಕೃಷ್ಣ ಎಂಥಾದೋ ನಿನ್ನ ಕರುಣಿ ankita mahipati

ಕೃಷ್ಣ ಎಂಥಾದ್ದೋ ನಿನ್ನ ಕರುಣ

ಶಿಷ್ಯ ಜನರುದ್ದೇಶಬಂದ್ಯೊ ನೀ ಕರುಣ

ದುಷ್ಟಜನರ ಮಾಡಿದ್ಯೊ ನೀ ಮರ್ದನ

ದೃಷ್ಟಿಸಿ ಮಾಡುವೆ ಸಾಧು ಸಂರಕ್ಷಣ ll 1 ll


ಹುಟ್ಟಿ ವಸುದೇವನಲ್ಲಿ ಬಂದು ಹೊಳೆದ್ಯೊ 

ದಿಟ್ಟತನದಲಿ ನಂದಗೋಕುಲದಿ ಬೆಳೆದ್ಯೊ

ಮೆಟ್ಟಿ ವಿಷದ ಹಾವಿನ ಹೆಡೆಯ ತುಳಿದ್ಯೊ

ಕುಟ್ಟಿ ಕಂಸಾಸುರನ ಪ್ರಾಣವೆಳೆದ್ಯೊ ll 2 ll


ಮೊಲಿಯನುಂಡು ಕೊಂಡಿ ಪೂತನಿ ಪ್ರಾಣ

ಕಾಲಿಲೊದ್ದು ಕೊಂದ್ಯೋ ಶಕಟಾಸುರನ

ಬಾಲತನದಲಿ ಕೆಡಹಿದ್ಯೊ ಮಾವನ

ನೆಲೆಯು ತಿಳಿಯದು ಇನ್ನೊಬ್ಬರಿಗೆ ಪೂರ್ಣ ll 3 ll


ತುರುಗಳ ಕಾಯ್ದ್ಯೊ ನೀ ಗೋವಿಂದ

ಬೆರಳೆಲಿತ್ತಿದ್ಯೊ ಹಿರಿಯ ಮುಕುಂದ

ಮರುಳು ಮಾಡಿದ್ಯೊ ಗೋಪಿಕೇರ ವೃಂದ

ಹರುಷಗೈಸಿದೆ ಅನೇಕ ಪರಿಯಿಂದ ll 4 ll


ಹಾಲು ಬೆಣ್ಣೆ ಕದ್ದು ತಿಂದು ನಿನ್ನಾಟ

ಬಾಲಗೋಪಾಲರ ಕೂಡಿ ನಿನ್ನೂಟ

ಚೆಲುವ ನಾರೇರ ನೋಡುವ ನಿನ್ನೋಟ

ಒಲಿದು ಕುಬ್ಜಿಯ ಬೆನ್ನ ಮಾಡಿದ್ಯೊ ನೀಟ ll 5 ll


ಗುರುಮಗನ ತಂದುಕೊಟ್ಯೋ ನೀ ಪ್ರಾಣ

ಸುರಬ್ರಹ್ಮಾದಿಗಳರಿಯರು ನಿನ್ನ ತ್ರಾಣ

ಶರಣಾಗತರ ವಜ್ರಪಂಜರ ಪೂರ್ಣ

ವರಮುನಿಗಳಿಗಾಗಿಹೆ ನೀ ನಿಧಾನ ll 6 ll


ಒಲಿದು ಪಾಂಡವರಿಗಾದಿ ಸಹಕಾರಿ

ಬಲವ ಮುರಿದ್ಯೊ ನೀ ಕೌರವರ ಸಂಹಾರಿ

ಹಲವು ಪರಿ ಆಟ ನಿನ್ನದೊ ಶ್ರೀ ಹರಿ

ಸಲಹುತಿಹೆ ಮಹಿಪತಿಗನೇಕ ಪರಿ ll 7 ll

***


ಭೈರವಿ ರಾಗ ಧುಮಾಳಿ

ಕೃಷ್ಣ ಎಂಥಾದೋ ನಿನ್ನ ಕರುಣಿ
ಶಿಷ್ಟ ಜನರುದ್ದೇಶ ಬಂದ್ಯೊ ನೀ ಕರುಣಿ
ದುಷ್ಟಜನರ ಮಾಡಿದ್ಯೊ ನೀ ಮರ್ದನಿ
ದೃಷ್ಟಿಸಿ ಮಾಡುವೆ ಸಾಧು ಸಂರಕ್ಷಣಿ ||೧||

ಹುಟ್ಟಿ ವಸುದೇವನಲ್ಲಿ ಬಂದು ಹೊಳೆದ್ಯೊ
ದಿಟ್ಟತನದಲಿ ನಂದಗೋಕುಲದಲಿ ಬೆಳೆದ್ಯೊ
ಮೆಟ್ಟಿ ವಿಷದ ಹಾವಿನ ಹೆಡೆಯ ತುಳಿದ್ಯೊ
ಕುಟ್ಟಿ ಕಂಸಾಸುರನ ಪ್ರಾಣವಳಿದ್ಯೊ ||೨||

ಮೊಲಿಯನುಂಡು ಕೊಂದಿ ಪೂತನಿ ಪ್ರಾಣ
ಕಾಲಿಲೊದ್ದು ಕೊಂದಿ ಶಕಟಾಸುರನ
ಬಾಲತನದಲಿ ಕೆಡಹಿದ್ಯೊ ಮಾವನ
ನೆಲೆಯು ತಿಳಿಯದು ಇನ್ನೊಬ್ಬರಿಗೆ ಪೂರ್ಣ ||೩||

ತುರುಗಳ ಕಾಯ್ದ್ಯೊ ನೀ ಗೋವಿಂದ
ಬೆರಳಲೆತ್ತಿದ್ಯೊ ಗಿರಿಯ ಮುಕುಂದ
ಮರುಳು ಮಾಡಿದ್ಯೊ ಗೋಪಿಕೆಯರ ವೃಂದ
ಹರುಷಗೈಸಿದೆ ಅನೇಕ ಪರಿಯಿಂದ ||೪||

ಹಾಲುಬೆಣ್ಣೆ ಕದ್ದು ತಿಂಬುವ ನಿನ್ನಾಟ
ಬಾಲಗೋಪಾಲರ ಕೂಡಿ ನಿನ್ನೂಟ
ಚೆಲುವ ನಾರೇರ ನೋಡ್ವ ನಿನ್ನ ನೋಟ
ಒಲಿದು ಕುಬ್ಜೆಯ ಬೆನ್ನ ಮಾಡಿದ್ಯೊ ನೀಟ ||೫||

ಗುರುಮಗನ ತಂದುಕೊಟ್ಯೊ ನೀ ಪ್ರಾಣ
ಸುರಬ್ರಹ್ಮಾದಿಗಳರಿಯರು ನಿನ್ನ ತ್ರಾಣ
ಶರಣಾಗತರ ವಜ್ರಪಂಜರ ಪೂರ್ಣ
ವರಮುನಿಗಳಿಗಾಗಿಹೆ ನೀ ನಿಧಾನ ||೬||

ಒಲಿದು ಪಾಂಡವರಿಗಾದಿ ಸಹಕಾರಿ
ಬಲವ ಮುರಿದ್ಯೋ ನೀ ಕೌರವರ ಸಂಹಾರಿ
ಹಲವು ಪರಿ ಆಟ ನಿನ್ನದೊ ಹರಿ
ಸಲಹುತಿಹೆ ಮಹಿಪತಿಗನೇಕ ಪರಿ ||೭||
***********