Showing posts with label ಪಾಲ ಸಮುದ್ರದ ಮಧ್ಯ ಭಾಗದಲಿ madhwesha krishna. Show all posts
Showing posts with label ಪಾಲ ಸಮುದ್ರದ ಮಧ್ಯ ಭಾಗದಲಿ madhwesha krishna. Show all posts

Friday 27 December 2019

ಪಾಲ ಸಮುದ್ರದ ಮಧ್ಯ ಭಾಗದಲಿ ankita madhwesha krishna

ಗಜೇಂದ್ರ ಮೋಕ್ಷ

ಪಾಲ ಸಮುದ್ರದ ಮಧ್ಯ ಭಾಗದಲಿ
ತ್ರಿಕೂಟ ಪರ್ವತವು ನೆಲಸಿಹುದು
ಸುವರ್ಣಮಯ ಶಿಖರವು ಮತ್ತೆ
ರಜತ ಲೋಹ ಶಿಖರಗಳಿರಲು||ಪಲ್ಲ||

ವರುಣನ ಉದ್ಯಾನವನವು ಇರಲು
ಅಮೃತ ಸದೃಶ ಸರೋವರವು
ಇಂದ್ರದ್ಯುಮ್ನರಾಜ ಶಾಪಗ್ರಸ್ತನಾಗಿ
ಗಜರಾಜನಾಗಿ ಅಲ್ಲಿ ಪುಟ್ಟಿದನು||೧||

ಹಾ ಹಾ ಗಂಧರ್ವನೆಂಬ ಹೆಸರಿನಿಂದ
ಮಹಾ ಸುಖದಿಂದ ಇರುತಿದ್ದನು
ಹೂ  ಹೂಎನ್ನುವ ಗಂಧರ್ವ ತಾನು
ಮಕರನಾಗಿ ಅಲ್ಲಿ ಪುಟ್ಟಿದನು||೨||

ಗಜರಾಜ ತಾನು ವರುಣನ ಉದ್ಯಾನದಿ
ವಿಹಾರ ಮಾಡುತಿರಲೊಂದುದಿನ
ಅತಿಯಾದ ಬಾಯಾರಿಕೆಯಾಗುತಿರಲು
ಸರೋವರದ ಬಳಿ ಬಂದನಾಗ||೩||

ಹರಿವ ನೀರನೆ ಕಂಡು ಸಂತೋಷದಿಂದ
ಪರಿವಾರ ಸಹಿತ ಸ್ನಾನವ ಮಾಡಲು
ಸಂತಸದಿಂದ ಇರುವ ಕಾಲಕ್ಕೆ
ಮಕರಿಯು ಕಾಲು ಗಟ್ಟಿಯಾಗಿ ಹಿಡೀಯೆ||೪||

ಗಜರಾಜ ತಾನು ಹೊರಗಡೆ ಎಳೀಯೆ
ಮಕರಿಯು ತಾನು ಒಳಗೆ ಎಳೆಯೆ
ದೊಡ್ಡ ಸಂಗ್ರಾಮವು ಆದಂತೆಆಗಿ
ಸಾವಿರ ವರುಷಗಳು  ಕಳಿಯೆ||೫||

ತನ್ನವರೆಂದು ಕರೆದು ವಿಹರಿಸಿದ
ಸಮಯಕ್ಕೆ ಯಾರು ಬಾರದೆ ದೂರ
ಹೋದ ಬಾಂಧವರನ ಕಂಡು
ಆಶ್ಚರ್ಯ ಪೊಂದಿದ ಗಜರಾಜನು||೬||

ನಿದ್ರಾಹಾರವಿಲ್ಲದೆ ಕದನವು ನೋಡಿ
ಸುರರು ದಿಗ್ಭ್ರಾಂತಿ ಚಂದಿದರು  ತನ್ನವ
ರೆನ್ನುವ ಬಾಂಧವರೆಲ್ಲ ದೂರ ದೂರ
ಹೋಗಿತೆರಳಿದರು||೭||

ತನ್ನ ರಕ್ಷಿಸುವ ನಾಥರು ಯಾರೆಂದು
ಅಂತರಂಗದಲಿ ಚಿಂತಿಸಿದ ಶ್ರೀಪತಿ
ವಿನಹ ರಕ್ಷಿಸುವರ್ಯಾರಿಲ್ಲೆಂದು
ಜ್ಞಾನ ಜ್ಯೋತಿ ಮನದಲಿ ಬೆಳಗೆ||೮||

ಕರಿರಾಜನ ವದನದಿ ಮಂಗಳ ಗೀತೆ ಬರಲು
ಮೊರೆಯ ಆಲಿಸಿದ ಶ್ರೀ ಹರಿಯು ತಾನು
ಗರುಡಗಮನನಾದ ಸ್ವಾಮಿಯ ಧ್ಯಾನಿಸಿ
ಭಕ್ತಿಯಿಂದ ಬೇಡಿಕೊಂಡನಾಗ||೯||

ಭುವಿಗೆ ಇಳಿದು ಬಂದ ಸ್ವಾಮಿಯು ತಾನು
ಚಕ್ರದಿ ಮಕರಿ ಶಿರವ ಖಂಡಿಸಿ
ಕೃಪಾ  ಸಮುದ್ರ ಭಕ್ತ ವತ್ಸಲ ಸ್ವಾಮಿ
ಸಲಹಿದನೆಂದು ದೇವತೆಗಳು  ನುಡಿಯೆ||೧೦||

ಸಾತ್ವಿಕ ರಾಜಸ ತಾಮಸ ಗುಣಗಳೆಂಬ
ತ್ರಿಕೂಟ ಪರ್ವತ ದಂತೆ ನಮ್ಮ ಮನದಲ್ಲಿರಲು
ಭೋಗಾಸಕ್ತ ವಾದ ಜೀವನವನ್ನ ಕಳೆದು
ಮಧ್ವೇಶಕೃಷ್ಣ ನ್ನ ಧ್ಯಾನಿಪುದು||೧೧||
********