ಶ್ರೀ ವಾದಿರಾಜ ಯತಿಗಳ " ಶ್ರೀ ಲಕ್ಷ್ಮೀ ಹೃದಯ "
ಶ್ರೀ ದೇವಿ ತಾನು ಶ್ರೀ ಧಾಮನ್ನ ಮನೆಯಲ್ಲಿ
ಆದಿ ಅಂತ್ಯಗಳಿಲ್ಲದಿರಲು l ಚೌಧ್ಯ ಸುಖರೂಪದಿಂದ ಅವಳಿಗೆ ವೇದವಾಲಿಗಳ ಓದುತ್ತಿರಲು l ಅವಳಿಂದ ಹರಿಯು ಮೂರು ಮನೆಗಳಿಪ್ಪಾಲೆಯಕೆತನ ಭಯವಿಲ್ಲ l ಮೊದಲೆ ಉದಕವಿಲ್ಲ ಆದಕಾರಣದಿಂದ ಮುದದಿ ತಾನಾದಳು ಅಚ್ಯುತಗೆ ಅಂಭುದಿಯಾದಳು l
ಆಗ ಮಹಾಲಕುಮಿ ಅಂಬರದ ಆಭರಣವಾದಳು l ಪೊಂಬಣ್ಣದ ಅಲೆಯಾದಳು ಎನೆಂಬೆ ಇವಳ
ಸಾಹಸಕ್ಕೆ l ಶ್ರೀಭೂ ದುರ್ಗೆಯರ ಆಲಿಸಿದನು ಹರಿಯು ತಾ ಆಲದೆಲೆಯ ಮೇಲೆ ಮಲಗಿದನು l ಅಚ್ಯುತನ ಹೃದಯದಲೆ ಲಿಂಗವಿಶಿಷ್ಟರಾದ ಇನಿತು ಜೀವರ ಹಿಡಿ ತುಂಬಿಕೊಂಡು l ತನಯನ ನೂರು ವರ್ಷ ಪರಿಯಂತದಿ ವನಜಾಕ್ಷ ವಟಪತ್ರ ಶಯನನಾಗಿ l ಜನರೆಲ್ಲ ತಮ್ಮ ಗತಿಗೆ ತಕ್ಕ ಸಾಧನವ ಸಾಧಿಸಿ ಕೊಳ್ಳಲೆಂದುl ಕರುಣಿ ಪುನರಪಿ ಸೃಷ್ಟಿಯ ಮಾಡುವೆ ನೆಂದು l ಲಾಲನೆಗೆ ಪ್ರಕೃತಿಯ ಮಮತೆಯಿತ್ತು l ಗುಣತ್ರಯಾತ್ಮಕ ಸೂಕ್ಷ್ಮ ತತ್ವರಾಶಿಯ ಜೀವರನು ಸೃಜಿಸಿದ ಹಯವದನನು||
***