Showing posts with label ನಾರಾಯಣನೆ ಈತ ನಾರಿ ಒಳ್ಳೆಯವರಿಗೆ ಮಾಡ್ದ ವಿಘಾತ neleyadikeshava. Show all posts
Showing posts with label ನಾರಾಯಣನೆ ಈತ ನಾರಿ ಒಳ್ಳೆಯವರಿಗೆ ಮಾಡ್ದ ವಿಘಾತ neleyadikeshava. Show all posts

Wednesday 1 September 2021

ನಾರಾಯಣನೆ ಈತ ನಾರಿ ಒಳ್ಳೆಯವರಿಗೆ ಮಾಡ್ದ ವಿಘಾತ ankita neleyadikeshava

 ..

ನಾರಾಯಣನೆ ಈತ - ನಾರಿ ಒಳ್ಳೆಯವರಿಗೆ ಮಾಡ್ದ ವಿಘಾತ ಪ


ಪರಿಪರಿಯಲಿ ಪೊಗಳುವ ಗೀತ - ನಾನೆಂದವರ ಮುರಿದ ಪ್ರಖ್ಯಾತ ಅ


ಕೈಕಾಲಿಲ್ಲದೆ ಆಡ್ದಾಮೈಮೇಲ್ಭಾರವ ಪೊತ್ತು ನೋಡ್ದಾಕೋರೆಯಲಿ ತಿವಿದು ಹತ ಮಾಡ್ದಾತಾಕೊ ಎಂದು ಒದರಿ ಬಗೆದು ಬೀರ್ದಾಅರ್ತಿಯಿಂದ ಪಾತಾಳಕೆ ದೂಡ್ದಾಮುನಿಯ ಮಗನಾಗಿ ಕ್ಷತ್ರಿಯರ ಕಾಡ್ದಾರಾವಣಗಾಗಿ ಅಂಬುತೆಗೆದು ಹೂಡ್ದಾಆ ಜಮುನೆ ಪೊಕ್ಕು ಮೋಜು ಮಾಡ್ದಾದಿಗಂಬರ ವೇಷವ ತಾಳ್ದಾದಿಗಿದಿಗಿ ಎಂದು ಅಶ್ವವೇರ್ದಾ 1


ಕಳ್ಳಗಿಂತ ಮಹಾಕಳ್ಳಕಲ್ಲನು ಮರೆ ಮಾಡಿಕೊಂಡಿಹನಲ್ಲಭೂಮಿ ನೆಗಹುದ ಬಲ್ಲಪುಟ್ಟ ಮಗು ಪ್ರಹ್ಲಾದಗೊಲಿದನಲ್ಲಎರಡು ಪಾದ ಭೂಮಿ ತಾನೊಲ್ಲಇವನ ಕೊಡಲಿಬಾಯಿಗಿದಿರಿಲ್ಲಕೋ ಎಂದ ಲಂಕೆಗೆ ಬೆಂಕಿ ಮಲ್ಲಕೊಂಕಲಿ ಕೊಳಲನೂದಿ ಗೊಲ್ಲಮೈಮೇಲ್ ಗೇಣರಿವೆಯಿಲ್ಲಇವ ಮೇಲಾದ ತೇಜಿಯನೇರಬಲ್ಲ 2


ಕಣ್ಣಬಿಟ್ಟು ವೈರಿ ನೋಡಿ ಕೊಂದಮೋರೆ ಮುದುರಿಕೊಂಡಿಹುದೇನು ಚಂದದಾಡೇಲಿ ದೂಡಿ ತಂದಕಂಬವನೊಡೆದು ಪೊಡವಿಲಿ ಮೂಡೇನೆಂದಶುಕ್ರಗೆ ಕಣ್ಣು ಮಾಡಿದನೊಂದಕೋಡಗಗಳ ಕೂಡಿ ವನಕ್ಕೆ ಕೇಡು ತಂದಹಾಲ್ಮೊಸರ ಮೀಸಲು ಮುರಿದು ತಿಂದಬತ್ತಲೆ ನಿಂದು ಹತ್ತುವೆ ಕುದುರೆ ಎಂದಭರದಿ ಕಾಗಿನೆಲೆಯಾದಿಕೇಶವನೆಂದ3

***