Showing posts with label ಯಾಕೆ ದಯ ಬಾರದೊ ಶ್ರೀನಿವಾಸ raghunatha vittala. Show all posts
Showing posts with label ಯಾಕೆ ದಯ ಬಾರದೊ ಶ್ರೀನಿವಾಸ raghunatha vittala. Show all posts

Thursday, 25 February 2021

ಯಾಕೆ ದಯ ಬಾರದೊ ಶ್ರೀನಿವಾಸ ankita raghunatha vittala

 ರಾಗ - : ತಾಳ -



ಯಾಕೆ ದಯ ಬಾರದೋ l

ಯಾಕೆ ದಯ ಬಾರದೊ ಶ್ರೀನಿವಾಸ ನಿನಗೆ l

ಅನುದಿನ ನಿನ್ನ ಪದ ವನರುಹ ನೆನೆಯುವ l

ಘನ ದಾಸ ದಾಸ್ಯವ ಕೊಡುವದಕ್ಕಿನ್ನು l

ನಿನಗ್ಯಾಕೆ ದಯಬಾರದೊ ll ಪ ll


ನೀನು ಕುಣಿದರೆ ಕುಣಿಯುವೆ ಯನ್ನಾ ಸ್ವಾ l

ಧೀನವೆಲ್ಲಿಹವೈ ಲೇಶವಾದರು ದೇವಾ l

ಮಾನಾಭಿಮಾನ ಸರ್ವವು ನಿನಗರ್ಪಿಸಿ l

ಧ್ಯಾನವ ಮಾಡುವ ದೀನನ ಮ್ಯಾಲಿನ್ನು ll ೧ ll


ಧ್ರುವ ಗಜ ದ್ರೌಪದಿ ವಾದಿ ಅಜಾಮಿಳ l

ಇವರೆಲ್ಲ ನಿನಗುಪಕಾರ ಮಾಡಿದರೆಂತು l

ಕರಿರಾಯಗೆ ಭಕ್ತವತ್ಸಲನೆನ್ನಿಸಿ l

ಅವರಂತೆ ಅನುದಿನ ಪೊರೆಯಲು ಯನ್ನೊಳು ll ೨ ll


ಸಿಂಧುಶಯನ ಭವ ಬಂಧಮೋಚನ ಸುರ l

ವೃಂದವಿನುತ ರಘುನಾಥವಿಟ್ಠಲರೇಯ l

ಮಂದಮತಿಯು ನಾನು ಕುಂದುಗಳೆಣಿಸದೆ  l

ಬಂದು ಪಾಲಿಸು ಎಂದು ಬೇಡಿಕೊಳ್ಳುತಲಿರೆ ll ೩ ll

***