Showing posts with label ವಂದಿಪೆವು ತವಪಾದಪಂಕಜಕೆ ಶ್ರೀ ರಾಘವೇಂದ್ರ shreesha keshava vittala. Show all posts
Showing posts with label ವಂದಿಪೆವು ತವಪಾದಪಂಕಜಕೆ ಶ್ರೀ ರಾಘವೇಂದ್ರ shreesha keshava vittala. Show all posts

Sunday 1 August 2021

ವಂದಿಪೆವು ತವಪಾದಪಂಕಜಕೆ ಶ್ರೀ ರಾಘವೇಂದ್ರ ankita shreesha keshava vittala

 ..

kruti by shreesha keshava vittala dasaru (subbanna dasa)


ವಂದಿಪೆವು ತವಪಾದಪಂಕಜಕೆ ಶ್ರೀ ರಾಘವೇಂದ್ರ |

ಇಂದು ಬಿನ್ನೈಸುವೆವು ನಿನ್ನಡಿಗೆ ಪ


ಬಂದಿಹದು ಖರವರುಷ ಜೇಷ್ಠದಿ |

ಇಂದು ದಿನವಂಭತ್ತು ವದ್ಯದಿ |

ಇಂದು ನಿಮ್ಮಾಗಮನವತಿಶಯ |

ವೆಂದು ತೋರುವ ಸುದಿನವೆಮಗೆಅ.ಪ


ಕಾಲವನು ಬಣ್ಣಿಸಲು ಭಯವಹುದು | ಏನೆಂದು ಪೇಳಲಿ |

ನಾಲಿಗೆಯು ಒಣಗುತ್ತಲಿಹುದು |

ಕಾಲಕಾಲಕೆ ಮಳೆಯು ಬಾರದೆ |

ಮೇಲೆನಿಪ ಶಾಲ್ಯಾನ್ನವೀದಿನ |

ಸಾಲದಾಯಿತು ಹಸಿವುತಾಳದೆ | ಕಾಲಪುರಕೈದುವೆವು ಗುರುವೇ 1


ಹಿಂದೆ ತಂಜಾಊರಿನಲಿ ಕ್ಷಾಮ | ವಂಜಿಸಲು ನಿನಬಳಿ |

ಬಂದ ರಾಜನ ಮೊರೆಯ ಕೇಳುತಲಿ |

ಅಂದು ಧಾನ್ಯಾಗಾರದೊಳು |

“ಶ್ರೀ” ಬೀಜಮಂತ್ರವ ರಚಿಸಿ ಭಕುತರ |

ಕುಂದುಗಳ ಕಳೆಯುತ್ತಲಕ್ಷಯ |

ದನ್ನ ವುಣಿಸಿದೆ ಜನಕೆ ಗುರುವೇ 2


ಧರ್ಮಮಾರ್ಗವೆ ಕಾಣದಂತಾಯ್ತು | ಎಲ್ಲೆಲ್ಲಿ ನೋಡಲ |

ಧರ್ಮಕೃತಿಗಳೆ ಕಂಡುಬರುತಿಹವು |

ಕರ್ಮದಲ್ಲಾಸಕ್ತಿ ತೊರೆಯುತೆ |

ಮರ್ಮವರಿಯಲು ಇಂದು ಜನಪದ

ನಿರ್ಮಲಾತ್ಮಕ ನಿನ್ನ ಬಳಿಯಲಿ ಧರ್ಮಭಿಕ್ಷವ ಬೇಡುತಿಹರೈ3


ಅಖಿಲ ಸಜ್ಜನ ನಿಚಯ ಸಹಿತಾಗಿ ನೀನಿಲ್ಲೆ ನೆಲೆಸು |

ಭಕುತರಿಷ್ಟಾರ್ಥವನು ನೀಡುತಲಿ |

ಸಕಲಜನ ತವ ಸೇವೆಗೈಯಲು |

ಲಕುಮಿಯರಸನ ದಯದಿ ಶರಣರ |

ಕಕುಲತೆಯ ಕಳೆಯುತ್ತಲೆಲ್ಲರ |

ಮುಕುತರಾಗುವ ತೆರದಿ ಹರಸೈ4


ದೇಶದೊಳು ಮಳೆಬೆಳೆಯು ಹುಲುಸಾಗಿ ಸೂಸಿಸಲಿನ್ನು |

ದೇಶದೊಳು ಸುಖಶಾಂತಿ ಸ್ಥಾಪಿಸಲಿ |

ಶ್ರೀಶಕೇಶವನಲ್ಲಿ ಭಕುತಿಯ | ಲೇಸೆನಿಪ ಧರ್ಮಾರ್ಥ ಮಾರ್ಗದಿ |

ಎಸೆವ ರಘುವೀರರ ಸುಸಮ್ಮುಖ |

ದಾಶೆಯಲಿ ಬಿನ್ನಹ ಗುರುವೇ 5

***