Showing posts with label ಗೇಣುರಾಯ ನಿನ್ನಾಮಹಿಮಿಯ ಸ್ಥಾಣು ಅರಿಯ ಮುನ್ನಾ shreeshapranesha vittala. Show all posts
Showing posts with label ಗೇಣುರಾಯ ನಿನ್ನಾಮಹಿಮಿಯ ಸ್ಥಾಣು ಅರಿಯ ಮುನ್ನಾ shreeshapranesha vittala. Show all posts

Sunday 1 August 2021

ಗೇಣುರಾಯ ನಿನ್ನಾಮಹಿಮಿಯ ಸ್ಥಾಣು ಅರಿಯ ಮುನ್ನಾ ankita shreeshapranesha vittala

 ..

kruti by shreeshapranesha vittala dasaru

ಚಿಲಕರಾಗಿ ಶ್ರೀ ಪ್ರಾಣೇಶನ ಸ್ತೋತ್ರ

(ಲಿಂಗಸುಗೂರಿನ ಹತ್ತಿರ ಚಿಲಕರಾಗಿ ಗ್ರಾಮದಲ್ಲಿರುವ ಗೇಣರಾಯನೆಂಬ ಪ್ರಾಣದೇವರು)


ಗೇಣುರಾಯ ನಿನ್ನಾಮಹಿಮಿಯ |ಸ್ಥಾಣು ಅರಿಯ ಮುನ್ನಾ |ದೀನ ರಕ್ಷಕನೆಂಬೋ ಬಿರುದು ಕೇಳಿತವ |ಧ್ಯಾನವ ಕೊಡು ಎಂದೇ, ತಂದೇ ಪ


ರವಿಜನ ಭಯದಿಂದ ಕಪಿಗಳು |ಲಯ ಚಿಂತೆಗಳಿಂದಾ ||ಪವನ ಕುವರ ಕಂಡಾಕ್ಷಣ ಈ ಭಯ |ತವಕನಚ್ಚಿ ಪೊರದೀ, ಮೆರದೇ 1


ಭೂಸುರ ಚಿಂತಿಸೆ ಬರಿದೀ ಈ |ಮೊರಿ ಕೇಳಿ ಆ ಶಿಶುವಿನ ಉಳಾಹಿದೇ ||ಘಾಸಿಗೊಳಿಸುವ ಘಳಬಕನೊರಸಿ |ಭಾಸುರ ಕೀರ್ತನೆಯ ಪೊರದಿ ಇಷ್ಟಾರ್ಥವ ಕರದೀ 2


ಪರಿಯೊಳು ಚಿಲಕರಾಗಿ ಗ್ರಾಮದೊಳು |ಮೆರೆಯುವ ಯತಿಯೋಗೀ ||ಗುರುಶ್ರೀಶ ಪ್ರಾಣೇಶ ವಿಠಲನ |ಚರಣ ಪೊಕ್ಕವರ ಸಲಹುವ ಕರುಣೀ | ಯೇಧಣಿ 3

***