Showing posts with label ಗುರುವಮಧ್ವರಾಯರೇ ಹರಿದಾಸ್ಯವಿತ್ತು venkata vittala. Show all posts
Showing posts with label ಗುರುವಮಧ್ವರಾಯರೇ ಹರಿದಾಸ್ಯವಿತ್ತು venkata vittala. Show all posts

Saturday 1 May 2021

ಗುರುವಮಧ್ವರಾಯರೇ ಹರಿದಾಸ್ಯವಿತ್ತು ankita venkata vittala

 ಗುರುವಮಧ್ವರಾಯರೇ 

ಹರಿದಾಸ್ಯವಿತ್ತು ।

ದ್ಧರಿಸುವರು ಸರ್ವಜ್ನರೂ ।

ಹರಿಪುರವಕಾಂಬದಕೆ -

ಪ್ರಥಮಾಂಗರೆಂದೆಮ್ಮ ।

ಹಿರಿಯರೆಲ್ಲ ಪೇಳ್ವರೂ ।।


ಅರಿ ಶಂಖ ಗದ ಪದ್ಮಧರ -

ಶೇಷಶಾಯಿ । ಶ್ರೀ ।

ಸಿರಿಪತಿಯ ಚರಣ ತೋರೋ ।

ಪರಮ ಕರುಣಾನಿಧಿ 

ವರ ವೃಕೋದರ ಅಸ್ಮದ್ ।

ಗುರುಗಳಂತರ್ಯಾಮಿ 

ನರಹರಿ ಪೊಂಡಿಸು ।। 1 ।।


ಮೇದಿನಿಯ ಮ್ಯಾಲುಳ್ಳ -

ಪಾಜಕ ಕ್ಷೇತ್ರದಲಿ ।

ಮೋದತೀರ್ಥರಾಗಿ ಅವತರಿಸಿದೆ ।

ಬಾದರಾಯಣ -

ಪ್ರಸಾದದಿಂದಲಿ ಚತುರ ।

ವೇದಗಳ ವಡನುಡಿಸಿದೆ ।।

ಆದಿಕಾರಣ ಕರ್ತ 

ನಾರಾಯಣೆಂದರುಹಿ ।

ದ್ವಾದಶ ಸ್ತೋತ್ರ-

ದಿಂದಲಿ ಸ್ತುತಿಸಿದೆ ।

ವೇದಗರ್ಭನ ಜನಕ 

ವೆಂಕಟವಿಠ್ಠಲನ ।

ಪಾದ ಮೂಲದಲಿಪ್ಪ 

ಪವನರಾಯರೇ ದಯದಿ ।। 2 ।।

****