Showing posts with label ತಮನನ್ನ ಕೊಂದು vijaya vittala suladi ಕಂಚಿ ವರದರಾಜ ಸುಳಾದಿ TAMANANNA KONDU KANCHI VARADARAJA SULADI. Show all posts
Showing posts with label ತಮನನ್ನ ಕೊಂದು vijaya vittala suladi ಕಂಚಿ ವರದರಾಜ ಸುಳಾದಿ TAMANANNA KONDU KANCHI VARADARAJA SULADI. Show all posts

Sunday 8 December 2019

ತಮನನ್ನ ಕೊಂದು vijaya vittala suladi ಕಂಚಿ ವರದರಾಜ ಸುಳಾದಿ TAMANANNA KONDU KANCHI VARADARAJA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ ಕಂಚಿ ವರದರಾಜ ಸುಳಾದಿ 

 ರಾಗ ಆನಂದಭೈರವಿ 

 ಧ್ರುವತಾಳ 

ತಮನನ್ನ ಕೊಂದು ಆಗಮವ ಬಿಡಿಸಿ ತಂದು 
ಸುಮನಸರಿಗೆ ಸುಧೆ ಕ್ರಮದಿಂದಲೆರದೇ 
ಕುಮತಿ ಹೇಮಾಕ್ಷನ ಗಮಕವ ಮುರಿದೆ 
ಸಮತಿಯ ಮೊರೆ ಕೇಳಿ ಅಮರಾರಿಯ ಸೀಳಿ 
ಅಮಮ ಯೋಮಕೆ ಬೆಳೆದು ನಮಿತನ್ನ ತುಳಿದು 
ಜಮದಗ್ನಿ ನಿಜಜಾತಾ ಸಮರದೊಳು ನಿರ್ಭೀತಾ 
ಉಮೆ ಅರಸನ್ನ ಪ್ರೀತಾ ಕಮಲಾಪ್ತ ಕುಲಜಾತಾ 
ಯಾಮಾದಿಯಾ ಗೆದ್ದು ಸುರದ್ರುಮವ ತಂದ ಗಂಭೀರ
ರಮಣೀರ ವ್ರತವಾಕ್ರಮಿಸಿದ ಬಲುದೇವಾ 
ವಿಮಲಾ ತುಂಗಾ ತುರಂಗಾ ಗಮನ ದುರಿತ ಭಂಗಾ 
ಅಮಿತಮಹಿಮ ಕಂಚಿವರದ ವಿಜಯವಿಠ್ಠಲ 
ಸಮರಾರು ನಿನಗನುಪಮ ಚಿತ್ರ ಚರಿತ್ರಾ ॥ 1 ॥

 ಮಟ್ಟತಾಳ 

ಪುಣ್ಯ ಶ್ಲೋಕರಾಯಾ ಪುಣ್ಯ ಪೂರ್ತಿರಾಯಾ 
ಪುಣ್ಯವಂತರಾಯಾ ಪುಣ್ಯಕೀರ್ತನೆರಾಯಾ 
ಪುಣ್ಯಮಹಿಮರಾಯಾ ಪುಣ್ಯಸಾಧನರಾಯಾ 
ಪುಣ್ಯಪೂರುತಿರಾಯಾ ಪುಣ್ಯಕೋಟಿರಾಯಾ 
ಪುಣ್ಯರಿಗೆ ಸತ್ಪುಣ್ಯಕೊಡುವರಾಯಾ 
ಪುಣ್ಯತೀರ್ಥರಾಯ ವಿಜಯವಿಠ್ಠಲರಾಯಾ 
ಪುಣ್ಯಕ್ಷೇತ್ರ ಕಂಚಿ ಪುಣ್ಯವರದರಾಯಾ ॥ 2 ॥

 ತ್ರಿವಿಡಿತಾಳ 

ಅಜನು ಸಭಾಸ್ಥಾನಾ ನೆರೆಸಲು ವಾಲಗಕೆ 
ಭುಜಗಭರಣ ಇಂದ್ರ ಸುರಮುನಿ ವ್ರಜವೆಲ್ಲ 
ನಿಜವಾಗಿ ಬಂದು ವಾರಿಜ ಕರವನೆ ಮುಗಿದು 
ಅಜನ ಪೊಗಳಲಾ ನೀನೋಡಿ ಹರುಷದಿಂದ 
ತ್ರಿಜಗದೊಳಗೆ ಉತ್ತುಮ ಸಾಧನಕೆ 
ಸುಜನರೊಂದಾಗಿ ಬೆಸಸೆನಲು ವಶಿಷ್ಠ ಮುನಿ 
ಅಜಗರುಹಿದನು ಭೂತಳದೊಳಿಗಿದನು 
ವಿಜಯವಿಗ್ರಹ ಕಂಚಿವರದ ವಿಜಯವಿಠ್ಠಲ 
ಭಜಿಸಲು ವೊಲಿವನು ಭಕ್ತರಿಗಾವಾಗಾ ॥ 3 ॥

 ಅಟ್ಟತಾಳ 

ಮುನಿ ನುಡಿದ ಮಾತನು ಮನ್ನಿಸಿ ಬಂದು 
ವನಜಸಂಭವನು ಸಜ್ಜನರಿಗೆ ಮನೋರಥ - 
ವನು ಮಾಡುವೆನೆಂದು ನೆನೆದು ಯಾಗವ ಮಾಡೆ 
ದನುಜಾರಿ ಮೆಚ್ಚಿ ಬಂದನು ಝಗಝಗಿಪ ರ -
ತುನಮಯ ಪುಣ್ಯಕೋಟಿಯನು ಏರಿಕೊಂಡು 
ಝಣ ಝಣ ಝಣ ಡಂ ಢಣವೆಂಬೊ ಘಂಟೆ 
ಘಣಲೆಂದು ಕೂಗಲು ಅನಲಾ ಮಧ್ಯದಿಂದ 
ತನಗೆ ತಾನೆ ಪೊಳೆದಾ ಅನಿಮಿಷರಾಡಲು 
ಘನ ಕಂಚಿವರದ ಶ್ರೀವಿಜಯವಿಠ್ಠಲರೇಯಾ 
ಮನಕೆ ಬಂದರೆ ಸಾಧನವಾ ಪೂರೈಸುವಾ ॥ 4 ॥

 ಆದಿತಾಳ 

ಅಂದು ಮೊದಲಾಗಿ ಇಲ್ಲಿ ಚಂದದಿಂದ ಉದುಭವಿಸಿ 
ಬಂದ ಬಂದವರಿಗೆಲ್ಲಾ ನಂದದಿಂದ ವರನೀವುತ್ತಾ 
ಕುಂದಾಗೊಡದೆ ಭಕ್ತರನ್ನ ಸಂದೇಹವಿಲ್ಲದೆ ಪೊರದು 
ಪೊಂದಲಿಟ್ಟು ಕೊಂಡು ಪಾದದ್ವಂದ್ವದಾ ಸೇವೆಯ ನೀವಾ 
ಕಂದರ್ಪನಯ್ಯಾ ಕಂಚಿವರದಾ ವಿಜಯವಿಠ್ಠಲಾ 
ಎಂದೆಂದು ಗುಣಪೂರ್ಣಸಾಂದ್ರ ಸುಖದ ದಯಾಳು ॥ 5 ॥

 ಜತೆ 

ಕಂಚಿಯ ನಿಲಯಾ ನೀಲವರ್ನ ಶ್ರೀವತ್ಸ -
ಲಾಂಛನ ವರದಾ ಶ್ರೀವಿಜಯವಿಠ್ಠಲ ಮೆರದಾ ॥
*******

ಶ್ರೀ ವಿಜಯದಾಸ ಕೃತ
ಕಂಚಿ ವರದರಾಜ ಸುಳಾದಿ - 2
ರಾಗ ಆನಂದಭೈರವಿ

 ಧ್ರುವತಾಳ

ತಮನನ್ನ ಕೊಂದು ಆಗಮವ ಬಿಡಿಸಿ ತಂದು |
ಸುಮನಸರಿಗೆ ಸುಧೆ ಕ್ರಮದಿಂದಲೆರದೇ |
ಕುಮತಿ ಹೇಮಾಕ್ಷನ ಗಮಕವ ಮುರಿದೆ |
ಸುಮತಿಯ ಮೊರೆ ಕೇಳಿ ಅಮರಾರಿಯ ಸೀಳಿ |
ಅಮಮ ವ್ಯೋಮಕೆ ಬೆಳೆದು ನಮಿತನ್ನ ತುಳಿದು |
ಜಮದಗ್ನಿ ನಿಜಜಾತ ಸಮರದೊಳು ನಿರ್ಭೀತಾ |
ಉಮೆ ಅರಸನ್ನ ಪ್ರೀತಾ ಕಮಲಾಪ್ತ ಕುಲಜಾತಾ |
ಯಾಮಾದಿಯಾ ಗೆದ್ದು ಸುರದ್ರುಮವತಂದ ಗಂಭೀರ |
ರಮಣೀರ ವ್ರತವಾಕ್ರಮಿಸಿದ ಬಲುದೇವಾ |
ವಿಮಲಾ ತುಂಗಾ ತುರಂಗಾ ಗಮನ ದುರಿತಭಂಗಾ |
ಅಮಿತಮಹಿಮ ಕಂಚಿವರದ ವಿಜಯವಿಠಲ |
ಸಮರಾರು ನಿನಗನುಪಮಚಿತ್ತ ಚರಿತ್ರಾ ॥ 1 ॥

 ಮಟ್ಟತಾಳ

ಪುಣ್ಯಶ್ಲೋಕರಾಯಾ ಪುಣ್ಯಮೂರ್ತಿರಾಯಾ |
ಪುಣ್ಯವಂತರಾಯಾ ಪುಣ್ಯಕೀರ್ತನೆರಾಯಾ |
ಪುಣ್ಯಮಹಿಮರಾಯಾ ಪುಣ್ಯಸಾಧನರಾಯಾ |
ಪುಣ್ಯಪೂರುತಿರಾಯಾ ಪುಣ್ಯಕೋಟಿರಾಯಾ |
ಪುಣ್ಯರಿಗೆ ಸತ್ಪುಣ್ಯಕೊಡುವರಾಯಾ |
ಪುಣ್ಯತೀರ್ಥರಾಯ ವಿಜಯವಿಠಲರಾಯಾ |
ಪುಣ್ಯಕ್ಷೇತ್ರ ಕಂಚಿ ಪುಣ್ಯವರದರಾಯಾ ॥ 2 ॥

 ತ್ರಿವಿಡಿತಾಳ

ಅಜನು ಸಭಾಸ್ಥಾನಾ ನೆರೆಸಲು ವಾಲಗಕೆ |
ಭುಜಗಭರಣ ಇಂದ್ರ ಸುರಮುನಿ ವ್ರಜವೆಲ್ಲ |
ನಿಜವಾಗಿ ಬಂದು ವಾರಿಜ ಕರವನೆ ಮುಗಿದು |
ಅಜನ ಪೊಗಳಲಾ ನೀನೋಡಿ ಹರುಷದಿಂದ |
ತ್ರಿಜಗದೊಳಗೆ ಉತ್ತಮ ಸಾಧನಕೆ |
ಸುಜನರೊಂದಾಗಿ ಬೆಸಸೆನಲು ವಶಿಷ್ಠಮುನಿ |
ಅಜಗರುಹಿದನು ಭೂತಳದೊಳಿಗಿದನು |
ವಿಜಯವಿಗ್ರಹ ಕಂಚಿವರದ ವಿಜಯವಿಠಲ |
ಭಜಿಸಲು ಒಲಿದಾನು ಭಕ್ತರಿಗಾವಾಗಾ ॥ 3 ॥

 ಅಟ್ಟತಾಳ

ಮುನಿನುಡಿದ ಮಾತನು ಮನ್ನಿಸಿ ಬಂದು |
ವನಜಸಂಭವನು ಸಜ್ಜನರಿಗೆ ಮನೋರಥ - |
ವನು ಮಾಡುವೆನೆಂದು ನೆನೆದು ಯಾಗವ ಮಾಡೆ |
ದನುಜಾರಿ ಮೆಚ್ಚಿ ಬಂದನು ಝಗಝಗಿಪ ರ -|
ತುನಮಯ ಪುಣ್ಯಕೋಟಿಯನು ಏರಿಕೊಂಡು |
ಝಣಝಣಝಣ ಡಂಢಣವೆಂಬೊ ಘಂಟೆ |
ಘಣಲೆಂದು ಕೂಗಲು ಅನಲಾಮಧ್ಯದಿಂದ |
ತನಗೆ ತಾನೆ ಪೊಳೆದಾ ಅನಿಮಿಷರಾಡಲು |
ಘನ ಕಂಚಿವರದ ಶ್ರೀ ವಿಜಯವಿಠಲರೇಯಾ |
ಮನಕೆ ಬಂದರೆ ಸಾಧನವಾ ಪೂರೈಸುವ ॥ 4 ॥

 ಆದಿತಾಳ

ಅಂದು ಮೊದಲಾಗಿ ಇಲ್ಲಿ ಚಂದದಿಂದ ಉದುಭವಿಸಿ |
ಬಂದ ಬಂದವರಿಗೆಲ್ಲಾ ನಂದದಿಂದ ವರವನೀವುತ್ತಾ |
ಕುಂದಾಗೊಡದೆ ಭಕ್ತರನ್ನ ಸಂದೇಹವಿಲ್ಲದೆ ಪೊರೆದು |
ಪೊಂದಲಿಟ್ಟು ಕೊಂಡು ಪಾದದ್ವಂದ್ವದಾಸೇವಿಯನೀವಾ |
ಕಂದರ್ಪನಯ್ಯಾ ಕಂಚಿವರದ ವಿಜಯವಿಠಲಾ |
ಎಂದೆಂದು ಗುಣಪೂರ್ಣಸಾಂದ್ರ ಸುಖದ ದಯಾಳು ॥ 5 ॥

 ಜತೆ

ಕಂಚಿಯ ನಿಲಯಾ ನೀಲವರ್ಣ ಶ್ರೀವತ್ಸ |
ಲಾಂಛನ ವರದಾ ಶ್ರೀ ವಿಜಯವಿಠಲ ಮೆರೆದಾ ॥
***********