Showing posts with label ಸೇರಿದೆನೊ ಬಂದು vijaya vittala ankita suladi ಪರಿಹಾರ ಪ್ರಾರ್ಥನಾ ಸುಳಾದಿ SERIDENO BANDU PARIHARA PRARTHANA SULADI. Show all posts
Showing posts with label ಸೇರಿದೆನೊ ಬಂದು vijaya vittala ankita suladi ಪರಿಹಾರ ಪ್ರಾರ್ಥನಾ ಸುಳಾದಿ SERIDENO BANDU PARIHARA PRARTHANA SULADI. Show all posts

Sunday 8 December 2019

ಸೇರಿದೆನೊ ಬಂದು vijaya vittala ankita suladi ಪರಿಹಾರ ಪ್ರಾರ್ಥನಾ ಸುಳಾದಿ SERIDENO BANDU PARIHARA PRARTHANA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ  ಪ್ರಾರ್ಥನಾ ಭಾಗ ಸುಳಾದಿ 

 ( ಆಪತ್ತು ಪರಿಹಾರ , ವಿಷನಿವಾರಣ ವಿಷಯಕ ಪ್ರಾರ್ಥನಾ . ವಿಷವೆಂದರೆ ಸಂಚಿತ - ಆಗಾಮಿ ಕರ್ಮಗಳು .) 

 ರಾಗ ನಾಟ 

 ಧ್ರುವತಾಳ 

ಸೇರಿದೆನೊ ಬಂದು ಸಂಕಟದಲ್ಲಿ ನೊಂದು
ತಾರಿ ತುಟಿಯಾರಿ ದಾನವಾರಿ
ಘೋರವಾದವತಿ ಕ್ರೂರರು ಒಳಗೆ ಐ -
ವಾರು ಒಂದಾಗಿ, ಮೆದ್ದಾನು ಚನ್ನಾಗಿ
ನೂರಿ ನೂರಿ ಬೇರು ಒಲ್ಲನೆಂದರೆ ಮೂರು
ಭಾರಿ ಕೂಡಿಸಿದರು ಒಂದೊಂದು ಶೇರು
ಪೂರಾತನ ನಾಮ ವಿಜಯವಿಠ್ಠಲ ಪ್ರೇಮ
ಆರೈದು ಸಲಹುವವರ ಕಾಣೆ ಬಲ್ಲವರ ॥ 1 ॥

 ಮಟ್ಟತಾಳ 

ವಿಷಪಾನಗಳಲ್ಲಿ ನಸುಗುಂದಿದೆ ನವದು
ಮುಸುಕಿತು ರೋಗ ಕಾಣಿಸಲಾರದೆ ಉ -
ಬ್ಬಸ ಬಡುತಲಿಪ್ಪೆ
ಅಶ್ವತ್ಥನಾಮಕನೆ ವಿಜಯವಿಠ್ಠಲನೆ ಎನ್ನ
ಅಸುವನು ನಿರ್ವಹಿಸಲಾರೆನೋ ಇನ್ನೂ ॥ 2 ॥

 ರೂಪಕತಾಳ 

ಎಂದಿಗಾದರು ಒಮ್ಮೆ , ಪುಣ್ಯವಂತರಿಂದ
ಒಂದು ದಿವಸಾಮೃತವ ಪಾನವನು ಮಾಡೆ
ಬಿಂದುಮಾತುರ ಕಾಯಕ ಯಾಗಗೊಡದೆ
ಮುಂದುಗೆಡಿಸುತಿದೆ ಮುನಿದು ಮುನಿದು ನಿತ್ಯ
ಬೆಂದು ಹಸಿಮರ ತುದಿಯಲ್ಲಿ ಕುದಿವಂತೆ
ಕಂದಿ ಕುಂದಿಸಿ ಎನ್ನ ತಿಕ್ಕಿಮುಕ್ಕುತಲಿವೆ
ತಂದುಕೊಂಬೆನೆ, ಜೀರಣಕೆನಲು, ಸುವರ್ಣ
ಬಿಂದು ವಿಜಯವಿಠ್ಠಲ ನೆಂದೆಂದಿಗೆ ಎ -
ನ್ನಿಂದಾಗದು ದೇವ ॥ 3 ॥

 ಝಂಪಿತಾಳ 

ವಿದ್ಯ ಒಂದು ಇಲ್ಲ ಮುದ್ದೆ ಘಳಿಸಿದಾದಿಲ್ಲ
ಉದ್ದಿನಷ್ಟು ಸೇವೆ ಮಾಡುವನು ಅಲ್ಲ
ಉದ್ದಕ್ಕೆ ನಿನಗಡ್ಡ ಬಿದ್ದು ದೈನ್ಯದಲಿ, ಪಾ -
ದದ್ವಯಕ ಎರಗುವೆನು ಉದಧಿಶಯನ
ಉದ್ಧಾರವನು ಮಾಡು ಕ್ಷುದ್ರರಿಕ್ಕಿದ ವಿಷದ
ಮದ್ದು ಪರಿಹರಿಸುವದು ಮಧುಸೂದನ
ಸದ್ಗತಾನಾಮ ಶ್ರೀವಿಜಯವಿಠ್ಠಲರೇಯ 
ಹೊದ್ದಿದೆನು ಎನ್ನ ಅವಿದ್ಯ ಮಾಡದಿರು ॥ 4 ॥

 ತ್ರಿವಿಡಿತಾಳ 

ಘನ ವೈದ್ಯ ನೀನೆ ಒಬ್ಬನೆ ಎಂದು ಸ್ಮೃತಿಯಿಂದ
ಅನಿಮಿಷಾವಳಿ ಮುನಿಸನಕಾದ್ಯರು
ವಿನಯದಲಿ ಪೇಳಲರ್ಜುನ ಮಿಕ್ಕರವರು ಆ -
ರ್ಜನೆ ಮಾಡಿ ವಿಷಪಾನವನು ಪರಿಹಾರದಿಂದ
ತನು ಶುದ್ಧರಾದರೆಂಬೋದು ಮನಕೆ
ಧನವಂತ್ರಿ ವೈದ್ಯನೆ ನಿನಗೆ ತೋರಿತು ಕಾಣೊ
ಪುನರ್ವಸುನಾಮ ಸಿರಿ  ವಿಜಯವಿಠ್ಠಲ ಎನ್ನ
ಗಣನೆ ಮಾಡುವದು ಸುಜನರ ತರುವಾಯ ॥ 5 ॥

 ಅಟ್ಟತಾಳ 

ನಾರಾಯಣನೆಂಬ ವೀರವೈದ್ಯನ ಕಂಡೆ
ಕಾರುಣ್ಯದಲಿ ತನ್ನ ಚರಣಾಂಬಿಲಿ ಚಿಂ -
ತಾರುತುನ ಮಾತ್ರೆ ಅರದು ಪೂರ್ಣವಾಗಿ
ಕಾರಕೊಟ್ಟನು ನೋಡು ಕರದು ಸಮೀಪಕ್ಕೆ
ಶಾರೀರವೆ ಉಂಟು, ಎದಿಗೆ ಹತ್ತಿದ ಮದ್ದು
ಕಾರಿಸಿತು ಬಹು ವ್ಯಾಪ್ತವಾಗಿದ್ದರು
ಪೂರಾಯಿತೆ ನಾಮಾ ವಿಜಯವಿಠ್ಠಲ ಮುಂದೆ
ಪೋರೆವ , ದುರುಳರು ಸೇರದಂತೆ ಒಲಿದು ॥ 6 ॥

 ಆದಿತಾಳ 

ಮುಂದಾದರು ದುರುಳ ಇಂದ್ರಿಗಳಿಂದ ಬಪ್ಪ
ವೃಂದ ರೋಗಗಳಿಗೆ ಇಂದು ತನ್ನಯ ದಯವೆಂಬೊ
ಸಿಂಧೂರ ಮಾತ್ರಿಯನ್ನು ತಂದು ಲೇಪಿಸಿದ, ಗೋ -
ವಿಂದ ವಿಜಯವಿಠ್ಠಲ ಬಂದು ಎನ್ನ ನಾಲಿಗ್ಗೆ ॥ 7 ॥

 ಜತೆ 

ಬಹು ದಿನದಲಿ ಇದ್ದ ಭವರೋಗ ಹಿಂಗಿತು
ಸಹಿ ವಿಷ್ಣು ವಿಜಯವಿಠ್ಠಲ ವೈದ್ಯನಿಂದಲಿ ॥
********