Showing posts with label ಕಂತುಪಿತ ಕರುಣಾಕರ ನಿನ್ನ ಚಿಂತೆಯೊಳಗಿರಿಸಿ ಸಲಹಯ್ಯಾ ಜನಾರ್ದನಾ vaikunta vittala. Show all posts
Showing posts with label ಕಂತುಪಿತ ಕರುಣಾಕರ ನಿನ್ನ ಚಿಂತೆಯೊಳಗಿರಿಸಿ ಸಲಹಯ್ಯಾ ಜನಾರ್ದನಾ vaikunta vittala. Show all posts

Sunday 1 August 2021

ಕಂತುಪಿತ ಕರುಣಾಕರ ನಿನ್ನ ಚಿಂತೆಯೊಳಗಿರಿಸಿ ಸಲಹಯ್ಯಾ ಜನಾರ್ದನಾ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಕಂತುಪಿತ ಕರುಣಾಕರ ನಿನ್ನ

ಚಿಂತೆಯೊಳಗಿರಿಸಿ ಸಲಹಯ್ಯಾ ಜನಾರ್ದನಾ ಪ


ಮಣ್ಣು ಮರ ಕಲ್ಲಿಂದಲಾದಡಂ ವಿರಚಿಸಿದ

ಹೆಣ್ಣು ರೂಪನೆ ಕಂಡು ಮರುಳುಗೊಂಡೂ

ಉಣ್ಣದುರಿಯುವಮನವ ನಿನ್ನಡಿದಳಿರನೆಳಲ

ತಣ್ಣಸದಲಿರಿಸಿ ಸಲಹಯ್ಯ ಜನಾರ್ದನಾ 1


ಗೋ ವಿಪ್ರ ವಧೆಯಿಂದಲಾದಡಂ ವಿರಚಿಸಿದ

ಲಾವಿಕವೆಂದದನೆ ಬಯಸಿ ಬಯಸೀ

ದೇವ ಮನಕನವರತ ನಿನ್ನ ಪದ ತೀರ್ಥದಾ

ಜೀವನವನಿತ್ತು ಸಲಹಯ್ಯಾ 2


ಭೂಮಿಯದು ಬುಧದಾನ ಸುರದಾನವಾದಡಂ

ಆ ಮಹಿಯ ತನ್ನತ್ತ ಸೆಳೆವೆನೆಂದೂ

ಕಾಮಿಸುವ ಮನಕೆ ನಿನ್ನಮಲಪಾದಾಂಬುಜವ

ಸೀಮೆಯೊಳಗಿರಿಸು ವೈಕುಂಠ ಜನಾರ್ದನಾ 3

***