Showing posts with label ಇಂದ್ರಶೌಚ vijaya vittala ankita suladi ಶುಚೀಂದ್ರಂ ಮಹಾತ್ಮೆ ಸುಳಾದಿ INDRA SHAUCHA SHUCHEENDRA MAHATME SULADI. Show all posts
Showing posts with label ಇಂದ್ರಶೌಚ vijaya vittala ankita suladi ಶುಚೀಂದ್ರಂ ಮಹಾತ್ಮೆ ಸುಳಾದಿ INDRA SHAUCHA SHUCHEENDRA MAHATME SULADI. Show all posts

Monday 9 November 2020

ಇಂದ್ರಶೌಚ vijaya vittala ankita suladi ಶುಚೀಂದ್ರಂ ಮಹಾತ್ಮೆ ಸುಳಾದಿ INDRA SHAUCHA SHUCHEENDRA MAHATME SULADI

 

Audio by Vidwan Sumukh Moudgalya

ಶ್ರೀ ವಿಜಯದಾಸರ್ಯ ವಿರಚಿತ  ಶುಚೀಂದ್ರಂ ಮಹಾತ್ಮೆ ಸುಳಾದಿ 


 ರಾಗ : ರೇವತಿ 

    

ಇಂದ್ರಶೌಚವಿಧಾನತ್ತೆ ನ ಶುಚೀಂದ್ರಾತಿ ಪೌರುಷಮ್ ।

ಅನಿಂದ್ರಸ್ಯ ಮನಶ್ಯೌಚಂ ಮಮಕೃತ್ವಾತದಾರ್ಜಯ ॥



 ಧ್ರುವತಾಳ 


ಯೋಗದಭ್ಯಾಸಕಿಗದು ಜಾಗರ ಉಳ್ಳ ಕ್ಷೇತ್ರ 

ಆಗಮ ಸಿದ್ಧಾಂತದಲ್ಲಿ ನೋಡಿ 

ಯೋಗಿ ಜನರು ಇಲ್ಲಿ ಭೋಗದಾಶಿ ತೊರದು-

ಲಾಗಿಸುವರು ಭವರೋಗ ವನಧಿ 

ಭೂಗೊಳಾದೊಳಗೋರ್ವ ರಾಗದ್ವೇಷವೇ ಬಿಟ್ಟು 

ಜಾಗು ಮಾಡಿದಿಲ್ಲಿಗೆ ಸಾಗೀ ಬಂದೂ 

ಬಾಗಿ ಕೇವಲ ದೃಢವಾಗಿ ಪ್ರಜ್ಞಾತೀರ್ಥದಲ್ಲಿ 

ತಾಗುಪ್ತದಲ್ಲಿ ಮಿಂದಾಗಲೆ ಕರ್ಮನಾಶ ಭಾಗೀರಥಿನಿಧೆ 

ಸಾಗರದಲ್ಲಿಗೆ ಪೋಗಿ ಪುಣ್ಯಾಪಡದೂ 

ಯಾಗಾದಿಗಳ ಮಾಡಲಾಗಿ ಆವಫಲ 

ವಾಗುವದದಕೆ ನೂರಾಗುವದು ಸಿದ್ಧ 

ಮೂಗೊಣ್ಣನೊಬ್ಬ ಬಲ್ಲ 

ನಾಗಶಯನ ವಿಜಯವಿಠಲ ಸುಧೀಂದ್ರ 

ಆಗರಾ ವಾಸನ ನಾಗ ಗಮನ ಭಜಿಸೀ 

ನೀಗಿಕೊಂಡನು ಬಂದ ಭೋಗ ವ್ಯಾಕುಲಾ ll1ll


 ಮಟ್ಟತಾಳ 


ಪರಸತಿಗೆ ಅಳುಕಿ ಹರಿಯನುಶಾಪಾ 

ಧರಿಸಿದನು ತನ್ನ ಶರೀರಾವಾದ್ಯಂತಾ 

ದುರಿಯೋನಿಯಲ್ಲಿ ಪರಮ ದುಶ್ಚಿತ್ತನಾಗಿ 

ಥರವಲ್ಲದೇ ಪೋದಾ ವರಸಭಾ ಸ್ಥಾನಕ್ಕೆ 

ಮರಳಿ ತನ್ನೊಳು ತಾನೇ ಮರುಗಿಕೊಳುತಲಿರೇ 

ಸುರಮುನಿ ನಾರದನು ಭರದಿಂದಲಿ ಬರಲೂ 

ಎರಗಿದ ಚರಣಕ್ಕೆ ಕರಗಳನು ಮುಗಿದು 

ಪರಮಪುರುಷರಂಗ ವಿಜಯವಿಠಲನ್ನ 

ಶರಣಗೆ ತನ್ನಯ ಪರಿಯೆಲ್ಲಾ ಬಿನ್ನೈಸೆ ll2ll


 ರೂಪಕತಾಳ 


ಬೆಸನ ಕೇಳುತಮಾನಿ ನಸುನಗುತಾ ಪರಸತಿಯಾ 

ಘಸನಿ ಪೋದವನ ಮನ್ನಿಸದಲ್ಲ ಜಗವೆಲ್ಲ 

ಹಸಗೇಡಿಯಾಗಿ ಸುಮನಸ ತತಿ ಕೇಳಿದ 

ಕುಶಲಕ್ಕೆ ಉಪಾಯ ಪುಶಿಯದಂತೀಗಾಲ 

ವಸುಧಿಯೊಳಗೆ ರಂಜಿಸುವ ಮಹೇಂದ್ರಾದ್ರಿ 

ಪಸರಿಸುತ್ತಾ ಬಲು ಪೆಸರಾಗಿದೆ ಅತ್ರಿ

ಋಷಿ ಆಶ್ರಮಾ ಉಂಟು 

ಉಸರಿಕ್ಕಾದಲೆ ಪೋಗಿ 

ಎಸೆವಾ ಮನದಲ್ಲಿ ಭಜಿಸು ಮಧುಸೂದನನ 

ಹಸನಾಗಿ ವಿಶಾಪ ವಶದಿಂದ ಕಡಿಬಿದ್ದು 

ಲಸತು ಕಾಯದಲಿ ಶೋಭಿಸುತಪೋಗು ಎನಲಾಗಿ

ಬಿಸಜನಯನ ನಮ್ಮ ವಿಜಯವಿಠಲನ ನೆ-

ನೆಸುತ ಬಂದನು ಅತ್ರಿಋಷಿ ಇದ್ದ ಭೂಮಿಗೆ ll3ll


 ಝಂಪೆತಾಳ 


ಬಂದು ಇಂದ್ರನು ತಪಸಿಗೆ ಕುಳಿತನು ಗ-

ಜೇಂದ್ರನ್ನ ಕರದು ಉದಕವ ತರ ಪೇಳಲು 

ಅಂದು ಐರಾವತನು ಕೈಕೊಂಡು ಮಲಯಾದ್ರಿ

ಲಿಂದ ಪುಟ್ಟಿದ ತಾಂಬ್ರ ಪರ್ಣಿಯದತ್ತ 

ಲಿಂದ ಮಾರ್ಗವ ಮಾಡಿ ತನ್ನ ಒಡಿಯನಿದ್ದಾ 

ಮುಂದೆ ಬಿಟ್ಟದು ಬಲು ಭಕುತಿಯಿಂದ 

ತಂದ ವಿಚಾರವನು ನೋಡಿ ವೃತ್ರ ವೈರಿ 

ಮಿಂದು ಶುಚಿಯಾಗಿ ಮುದದಿಂದಲಿ ಕೊಂಡಾಡಿ 

ಮಂದರಧರದೇವ ವಿಜಯವಿಠಲ ಸೂ-

ಧೇಂದ್ರ ಸ್ವಾಮಿಯ ಪಾದ ದ್ವಂದ್ವವನು ನೆನಸುತ್ತ ll4ll


 ತ್ರಿವಿಡಿತಾಳ 


ಆಸನವನು ಹಾಕಿ ಶ್ವಾಸೋಚ್ಛ್ವಾಸವ ಬಂಧಿಸಿ 

ಲೇಶವಾದರು ಕಾಯದಾಶಿಯಾ ಮಾಡದೆ 

ಬ್ಯಾಸಿಗೆ ಬಿಸಲೆನದೆ ಬ್ಯಾಸರಕಿಯ ಒಡದೆ 

ವಾಸವ ಕುಳಿತು ಸಂತೋಷದಲ್ಲಿ 

ಕೇಶವ ಮಧುಸೂದನ ಶ್ರೀಶನಂಘ್ರಿಯ ಒಂದು 

ವಾಸರ ಬಿಡದರ್ಚಿಸಲಾಗೀ 

ದೇಶಾಧಿಪ ಸುಧೇಂದ್ರವಾಸ ವಿಜಯವಿಠಲ 

ದಾಸಗೆ ಒಲಿದು ಬಂದ ಸತಿಯ ಕೂಡ ll5ll


 ಅಟ್ಟತಾಳ 


ಗೌತುಮನ್ನ ಸತಿ ಪತಿವ್ರತೆ ಅಹಲ್ಯಾ 

ಕಾತುರದಲ್ಲಿ ಪುರುಹೂತನ ಶಾಪಿಸಿರೆ 

ಸೋತ್ತುಮರಿಗೆ ಬಲು ಪಾತಕ ಬಂದರೆ 

ಚಾತುರ್ಯದಲಿ ಅಜಾತು ಮಹಾವಿಷ್ಣು 

ಪ್ರೀತಿಯಲ್ಲಿ ತಿಳಿದ ತಾನು ಭಕುತರ 

ಭೀತಿಯ ಹರಸುವ ಮಾತು ಪೇಳದ ಮುನ್ನ 

ಭೂತಳದೊಳು ಮಧುಘಾತಿ ಸುಧೇಂದ್ರಾ ನಿ-

ಕೇತನ ವಿಜಯವಿಠಲಾ ತುಮದೇವ ll6ll


 ಆದಿತಾಳ 


ಪೊಂದಿದ ಕಲುಷ ಕಳೆದು ಇಂದ್ರನುದ್ಧರಿಸಿದ 

ಅಂದು ಮೊದಲಾಗಿ ದೇವೇಂದ್ರ ಸಾಸಿರ ನಯನಾ-

ನೆಂದು ಕರಿಸಿಕೊಂಡು ಸುಖದಿಂದ ವಾಲಗವಾಗದ 

ಸಂದೇಹ ತೊರದು ನರರು ಬಂದು ಯಾತ್ರಿಮಾಡಲು ಗೋ -

ವಿಂದನು ಕರುಣಾರಸದಿಂದ ಸಾಕುವನವರ 

ಎಂದೆಂದು ಬಿಡದೆ ಸುಧೇಂದ್ರಸ್ವಾಮಿ ಮಧುವೈರಿ 

ವೃಂದಾವನ ಪ್ರೀಯ ವಿಜಯವಿಠಲರೇಯನ ॥7॥

ಸಂದರುಶನವಾಗೆ ಮಂದ ಬುದ್ಧಿ ಪೋಪುವವು 


 ಜತೆ 


ದಕ್ಷಿಣ ಸಾಲಗ್ರಾಮಕ್ಷೇತ್ರ ಸುಧೇಂದ್ರಾ 

ಅಕ್ಷಯಾಬ್ಧಿವಾಸಾ ವಿಜಯವಿಠಲಧೀಶಾ ॥8॥

**********