Showing posts with label ಬಾರೋ ಸದ್ಗುಣಸಾರಶರನಿಧೆ ಬಾರೋ ಕರುಣಾಂಭೋನಿಧೆ tandevenkatesha vittala. Show all posts
Showing posts with label ಬಾರೋ ಸದ್ಗುಣಸಾರಶರನಿಧೆ ಬಾರೋ ಕರುಣಾಂಭೋನಿಧೆ tandevenkatesha vittala. Show all posts

Monday 6 September 2021

ಬಾರೋ ಸದ್ಗುಣಸಾರಶರನಿಧೆ ಬಾರೋ ಕರುಣಾಂಭೋನಿಧೆ ankita tandevenkatesha vittala

 ankita ತಂದೆವೆಂಕಟೇಶವಿಠಲ

ರಾಗ: ಕಾನಡ  ತಾಳ: ತ್ರಿಶ್ರತ್ರಿಪುಡೆ


ಬಾರೊ ಸದ್ಗುಣಸಾರಶರನಿಧೆ ಬಾರೋ ಕರುಣಾಂಭೋನಿಧೆ


ಬಾರೋ ತುಂಗಾತೀರ ನವಮಂತ್ರಾಲಯಪ್ರಭೋ ಸಾರಿದೇ ಅ.ಪ


ರಾಘವೇಂದ್ರ ಬುಧೌಘವಂದ್ಯ ವಿರಾಗ ನೃಪದುರಿತೌಘಹ 

ಯೋಗವಿದ ಭವರೋಗಹರ ವಿನುತಾಗಮಾಲಯಸ್ಥಿತ ಮಹ 

ತ್ಯಾಗಶೀಲ ಸದ್ರಾಗಭಾಷ ಸಮಾಗತ ಸುರಘೂದ್ವಹ 

ಭಾಗವತಭಕ್ತಾಗ್ರಣಿ ದ್ವೈತಾಗಮಾದ್ಭುತ ವಿಗ್ರಹಾ 1

ದಾಸ ತತ್ತ್ವ ದಿಗ್ದೇಶ ಪ್ರಚುರಣಖೇಶ ವಿಶ್ವೋಪಾಸಕ 

ಶ್ರೀಶಪಾದಕುಶೇಶಯಾಶ್ರಿತ ಭೂಸುರವ್ರಜಪೋಷಕ 

ವ್ಯಾಸರಾಜ ಲಂಕೇಶನನುಜ ಮಹೀಶ ಕಶ್ಯಪಸುತಮುಖ 

ಕ್ಲೇಶಹರ ಕರುಣಾಸಮುದ್ರ ವಿಲಾಸರೂಪ ವಿಧಾರಕಾ 2

ತಂತ್ರದೀಪಿಕ ಗ್ರಂಥಕರ್ತುಕಾನಂತ ಮಹಿಮಾಪೂರಿತಾ 

ಮಂತ್ರಸದ್ಮ ನಿರಂತ್ರವಾಸ ಶ್ರೀತಂದೆವೆಂಕಟೇಶವಿಠಲ ತಾ 

ನಿಂತು ತವಹೃದ್ಯಂತರದಿ ನವಯಂತ್ರವಾಹಕನಾಗುತಾ 

ಚಿಂತಿತಾರ್ಥ ಗತ್ಯಂತ್ರವಿಲ್ಲೆನೆ ಮಂತ್ರಿಸುವ ತಾ ನಡೆಸುತಾ 3

***

ವಿರಾಗ=ರಾಗರಹಿತ; ಯೊಗವಿದ=ಯೋಗವನ್ನು ತಿಳಿದವ; 

ವಿನುತಾಗಮಾಲಯ ಸ್ಥಿತ=ಮಂತ್ರಾಲಯದಲ್ಲಿರುವ; 

ಸುರಘೂದ್ವಹ =ರಘುವಂಶದ ಶ್ರೀರಾಮ; ಖೇಶ=ಸೂರ್ಯ; 

ಕುಶೇಶಯ=ಕಮಲ;