Showing posts with label ಆಸುಖ ಹರಿಮರೆದವಗಯ್ಯ ದೋಷಾಂಧಃ ತಮದೊಳಗೇನು ankita prasannavenkata. Show all posts
Showing posts with label ಆಸುಖ ಹರಿಮರೆದವಗಯ್ಯ ದೋಷಾಂಧಃ ತಮದೊಳಗೇನು ankita prasannavenkata. Show all posts

Thursday 7 November 2019

ಆಸುಖ ಹರಿಮರೆದವಗಯ್ಯ ದೋಷಾಂಧಃ ತಮದೊಳಗೇನು ankita prasannavenkata

by ಪ್ರಸನ್ನವೆಂಕಟದಾಸರು
ಆ ಸುಖ ಹರಿಮರೆದವಗಯ್ಯ
ದೋಷಾಂಧಃತಮದೊಳಗೇನು ಸುಖ ಪ.

ಕಂಠತ ವ್ಯಸನ ಹೊಲಬಿಲ್ಲದೆ 
ಧರ್ಮಕಂಟಕಶಾಸ್ತ್ರವಿಚಾರಕಗೆ
ಎಂಟುವೃಷಭಹೂಡಿ ಮಹಾಶ್ರಮಿಸಿ 
ಬರೆದಂಟು ಬೆಳೆದವನಿಗೇನು ಸುಖ 1

ಅನಿರುದ್ಧಗಖಿಳವರ್ಪಿಸಿದಾನಲ್ಪಗುಣದೆ 
ಮತಿ ದೃಢವಿಲ್ಲದ ಮಾನವಗೆಹಣ ವೆಚ್ಚಿಸಿ 
ರಿಣದೆಗೆದಿಟ್ಟ ಧಾನ್ಯವತೃಣಸಮ 
ವಿಕ್ರಿಸಲೇನು ಸುಖ 2

ಶಂಖಪಾಣಿಯ ನಿಂದಿಸಿ ಕರ್ಮಶಕ್ತಿಯಶಂಕರ 
ರವಿಗಣೋಪಾಸಕಗೆಸಂಖ್ಯೆ ಇಲ್ಲದ ವಸ್ತು 
ನಿಶ್ಶೇಷದಿಸುಂಕಕೆ ತೆತ್ತಿದರಾವ ಸುಖ 3

ಆಧ್ಯಾತ್ಮಾನುಭವ ಗುರುಕೃಪೆ 
ಇಲ್ಲದೆವಿದ್ಯೋನ್ಮತ್ತ ದಯಾಶೂನ್ಯಗೆ
ನದ್ಯೋಲ್ಲಂಘಿಸಿ ದಡದಲಿ ನಾವೆ ಮುಳುಗಿದರೆ 
ಪ್ರಾಣಿಗಳಿಗೇನು ಸುಖ 4

ಪ್ರಸನ್ನವೆಂಕಟ ಪದಸರೋರುಹಗಳ
ಪ್ರಸನ್ನೀಕರಿಸದೆ ಸಾಹಸಬಡುವ
ಅಶುಭದನುಜರು ತಪಮಾಡಿ ತುದಿಯಲಿ
ವಿಷಮಗತಿಗ್ಹೋಗಲೇನು ಸುಖ 5
********