Showing posts with label ಸುಯತೀಂದ್ರ ಕರಕಂಜ ಜಾತ ಸಂಯಮೀ೦ದ್ರ ಸುಬುಧೇಂದ್ರ venkatanatha subudhendra teertha stutih. Show all posts
Showing posts with label ಸುಯತೀಂದ್ರ ಕರಕಂಜ ಜಾತ ಸಂಯಮೀ೦ದ್ರ ಸುಬುಧೇಂದ್ರ venkatanatha subudhendra teertha stutih. Show all posts

Saturday 1 May 2021

ಸುಯತೀಂದ್ರ ಕರಕಂಜ ಜಾತ ಸಂಯಮೀ೦ದ್ರ ಸುಬುಧೇಂದ್ರ ankita venkatanatha subudhendra teertha stutih

 subudhendra teertha rayara mutt yati stutih

ರಚನೆ : ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ ..


ಸುಯತೀಂದ್ರ ಕರಕಂಜ ಜಾತ ।

ಸಂಯಮೀ೦ದ್ರ ಸುಬುಧೇಂದ್ರ -

ಸುಧೇನಿಭನಯ್ಯ ।। ಪಲ್ಲವಿ ।। 


ಸುಜಯೀ೦ದ್ರ ಸುತನ ಪೌತ್ರ ।

ಸುಜನ ಕುಮುದೇಂದು -

ದೇಶಿಕಮಣಿ ।। ಅ ಪ ।।


ಭಕುತರಿಗೆ ಅಮರತರುವಂತೆ ।

ಶ್ರೀಕಾಂತನ ಏಕಾಂತ ಭಕುತನ -

ದಯದಿ ಅಮರ್ದು ನೀಡುವೆ ।। ಚರಣ ।। 


ಏಕ ಚತುರ ನವ ಗ್ರಂಥಗಳ -

ವಿಬುಧಮಣಿಯೇ ।

ಏಕಮೂರ್ತಿ ಬಾದರಾಯಣರ -

ಸಿದ್ಧಾಂತ ಸ್ಥಾಪಕ ।। ಚರಣ ।।


ಮಂತ್ರಾಲಯ ವಾಸ ಮಂತ್ರಾಲಯ-

 ಪುರಾಧೀಶನ ಪ್ರೇಷ್ಠ ।

ಮಂತ್ರಮೇಯ ವೇಂಕಟ-

ನಾಥನ ಸೇವಿಪ ।

ಮಂತ್ರವಿದ ಸುಬುಧೇಂದ್ರ -

ಸುಧಾಹೃದ ಕಾಣೋ ।। ಚರಣ ।।


" ವಿವರಣೆ "

ಕರಕಂಜ ಜಾತ = ಕರ ಕಮಲದಿಂದ ಹುಟ್ಟಿದ 

ಸಂಯಮೀ೦ದ್ರ = ಯತಿ ಶ್ರೇಷ್ಠ  

ಸುಧೇನಿಭನಯ್ಯ = ಅಮೃತ ಸಮಾನಯ್ಯ 

" ಸುಜನ ಕುಮುದೇಂದು "

ಸುಜ್ಜನರೆಂಬ ಕೆನ್ನೈದೆಲೆಗೆ ಚಂದ್ರನಂತಿರುವವರು 

ಅಮರತರು = ಕಲ್ಪವೃಕ್ಷ 

ಅಮರ್ದು = ಅಮೃತ 

ಏಕ ಚತುರ ನವ ಗ್ರಂಥ = ಸರ್ವಮೂಲ

[ 1 + 4 x 9 = 37 ]

ವಿಬುಧ = ಜ್ಞಾನಿ 

ಏಕಮೂರ್ತಿ = ಸರಿಯೇ ಸರ್ವೋತ್ತಮ 

ಮಂತ್ರಮೆಯ = ಮಂತ್ರಗಳಿಂದ ತಿಳಿಯಲ್ಪಡುವವನು - ಶ್ರೀಹರಿ 

ಮಂತ್ರವಿದ = ಮಂತ್ರವನು ತಿಳಿದವರು 

ಸುಧಾಹೃದ = ಅಮೃತದ ಮಡು 

by Nagaraju Haveri, 

by ಆಚಾರ್ಯ ನಾಗರಾಜು ಹಾವೇರಿ, ಗುರು ವಿಜಯ ಪ್ರತಿಷ್ಠಾನ.

****