Showing posts with label ಸಂಗಸುಖವ ಬಯಸಿ ಬದುಕಿರೋ shreeda vittala SANGA SUKHAVA BAYASI BADUKIRO JAGANNATHA DASA STUTIH. Show all posts
Showing posts with label ಸಂಗಸುಖವ ಬಯಸಿ ಬದುಕಿರೋ shreeda vittala SANGA SUKHAVA BAYASI BADUKIRO JAGANNATHA DASA STUTIH. Show all posts

Friday 27 December 2019

ಸಂಗಸುಖವ ಬಯಸಿ ಬದುಕಿರೋ ankita shreeda vittala SANGA SUKHAVA BAYASI BADUKIRO JAGANNATHA DASA STUTIH

Audio by Mrs. Nandini Sripad


ಶ್ರೀ ಕರ್ಜಗಿ ದಾಸಪ್ಪನವರ ಕೃತಿ
( ಶ್ರೀದವಿಠಲಾಂಕಿತ ) 

 ರಾಗ ಪಂತುವರಾಳಿ           ಆದಿತಾಳ 

ಸಂಗಸುಖವ ಬಯಸಿ ಬದುಕಿರೊ । ಶ್ರೀಮದ್ ।
ರಂಗನೊಲಿದ ಭಾಗವತರ ॥ ಪ ॥
ಸಂಗಸುಖವ ಬಯಸಿ ಬದುಕಿ ಭಂಗಬಡಿಪ ಭವವ ನೂಕಿ ।
ಹಿಂಗದೆ ನರಸಿಂಗನನ್ನು ಕಂಗಳಿಂದಲಿ ಕಾಣುತಿಹರ॥ ಅ ಪ ॥

ಪುಟ್ಟಿದಾರಭ್ಯ ಪರಮ ವೈಷ್ಣವಾಧ್ಯಕ್ಷರೆನಿಸಿ ।
ಶಿಷ್ಟ ಸದಾಚಾರದಲ್ಲಿ ನಿಷ್ಟರಾಗಿ ನಿತ್ಯ ಮುದ್ದು ।
ಕೃಷ್ಣ ಕೀರ್ತನೆಯ ಪಾಡುತಾ । ಮಧ್ವಮತವ ।
ಪುಷ್ಟಿಗೈಸಿ ಖಳರ ಕಾಡುತಾ । ಕಾಮ್ಯಕರ್ಮ ।
ಬಿಟ್ಟು ಭಕುತಿಯನ್ನೆ ಮಾಡುತ । ಬಂದ ಲಾಭ ।
ನಷ್ಟತುಷ್ಟಿಗಳಿಗೆ ವೊಡಂಬಟ್ಟ ಬಗೆಯ ಪೇಳಲೆಷ್ಟ ॥ 1 ॥

ಭೂತದಯಾಶೀಲರಾದ ನೀತಗುರುದ್ವಾರ ಜಗ - ।
ನ್ನಾಥವಿಠಲಾಂಕಿತವನು ಪ್ರೀತಿಯಿಂದ ಪಡೆದು ಸಂ - ।
ಗೀತ ವೃತ್ತಪದ ಸುಳಾದಿಯ । ಪೇಳಿ ಪ್ರೇ - ।
ಮಾತಿಶಯದಿ ಮಧುವಿರೋಧಿಯಾ । ಒಲಿಸಿಕೊಂಡು ।
ಜಾತರಾಗಿ ಜವನ ಬಾಧಿಯ । ಬಯಲು ಮಾಡಿ ।
ಖ್ಯಾತರಾಗಿಹರು ಪುಶಿಯ ಮಾತಿದಲ್ಲ ಮೀರಸಲ್ಲ ॥ 2 ॥

ಮೇದಿನಿಯ ಮ್ಯಾಲುಳ್ಳ ಗಂಗಾದಿತೀರ್ಥಪತಿಗಳಿವರ ।
ಕಾದುಕೊಂಡಿಹರು ಬಿಡದೆ ಸ್ವಾದಿ ರಾಜೇಂದ್ರರ ಪ್ರ - ।
ಸಾದದಿಂದ ಹರಿಕಥಾಮೃತ । ಸಾರ ತತ್ವ ।
ಸಾಧುಜನರಿಗಾಗಿ ಪ್ರಾಕೃತಾ । ಸುಪದ್ಧತಿಯನು ।
ಸಾದರದಲಿ ಪೇಳಿ ದುಷ್ಕೃತಾ । ದೂರಮಾಡಿ ।

ಮೋದಿಸುವರಿಗೆಣೆಯಗಾಣೆ ಶ್ರೀದವಿಟ್ಠಲ ನಾಣೆ ॥ 3 ॥
***********


ಶ್ರೀ ಜಗನ್ನಾಥದಾಸಾರ್ಯರ ಮೇಲೆ   ಶ್ರೀದವಿಠಲದಾಸರ ಕೃತಿ 
ರಾಗ ಪಂತುವರಾಳಿ     ಆದಿತಾಳ 

ಸಂಗಸುಖವ ಬಯಸಿ ಬದುಕಿರೋ ಸುಜನರೆಲ್ಲ
ರಂಗವಲಿದ ದಾಸರಾಯರ ॥ ಪ ॥

ಸಂಗಸುಖವ ಬಯಸಿ ಬದುಕಿ 
ಭಂಗಪಡಿಪ ಭವವ ನೂಕಿ
ಹಿಂಗದೇ ನರಸಿಂಗನನ್ನು 
ಕಂಗಳಿಂದಲಿ ಕಾಣುತಿಹರ ॥ ಅ.ಪ.॥

ಪುಟ್ಟಿದಾರಭ್ಯ ಪರಮ ವೈಷ್ಣವಾಧ್ಯಕ್ಷರೆನಿಸಿ
ಶಿಷ್ಟ ಸದಾಚಾರದಲ್ಲಿ ನಿಷ್ಠರಾಗಿ ನಿತ್ಯ ಮುದ್ದು
ಕೃಷ್ಣನ ಕೀರ್ತನೆಯನು ಪಾಡುತ ಮಧ್ವಮತವ
ಪುಷ್ಟಿಗೈಸಿ ಖಳರ ಕಾಡುತ ಕಾಮ್ಯಕರ್ಮ
ಬಿಟ್ಟು ಭಕ್ತಿಯನ್ನೆ ಮಾಡುತ ಬಂದ ಲಾಭ
ನಷ್ಟ ತುಷ್ಟಿಗಳಿಗೆ ಒಡಂಬಟ್ಟ ಬಗೆಯ ಪೇಳಲೆಷ್ಟು ॥ 1 ॥

ಭೂತದಯಾಶೀಲರಾದನೀತ ಗುರುದ್ವಾರ ಜಗ -
ನ್ನಾಥ ವಿಠಲಾಂಕಿತವನು ಪ್ರೀತಿಯಿಂದ ಪಡೆದು ಸಂ -
ಗೀತ ವೃತ್ತ ಪದ ಸುಳಾದಿಯ ಪೇಳಿ ಪ್ರೇ -
ಮಾತಿಶಯದಿ ಮಧುವಿರೋಧಿಯ ಒಲಿಸಿಕೊಂಡ
ಜಾತರಾಗಿ ಜವನಬಾಧೆಯ ಬಯಲು ಮಾಡಿ
ಖ್ಯಾತರಾಗಿಹರು ಪುಸಿಯ ಮಾತಿದಲ್ಲ ಮೀರಸಲ್ಲ ॥ 2 ॥

ಮೇದಿನಿ ಮೇಲುಳ್ಳ ಗಂಗಾದಿತೀರ್ಥಪತಿಗಳಿವರ
ಕಾದುಕೊಂಡಿಹರು ಬಿಡದೆ ಸ್ವಾದಿರಾಜೇಂದ್ರರ ಪ್ರ -
ಸಾದದಿಂದ ಹರಿಕಾಥಾಮೃತಸಾರ ತತ್ವ
ಸಾಧುಜನರಿಗಾಗಿ ಪ್ರಾಕೃತ ಸುಪದ್ಧತಿಯನು
ಸಾದರದಲಿ ಪೇಳಿ ದುಷ್ಕೃತ ದೂರಮಾಡಿ
ಮೋದಿಸುವರಿಗೆಣೆಗಾಣೆ ಶ್ರೀದವಿಠಲ ನ್ನಾಣೆ ॥ 3 ॥

https://drive.google.com/file/d/1ZV_c0t35WZD3lU6NxK2VXV9w6lh0fAyf/view?usp=drivesdk


********